<p><strong>ದಾಬಸ್ ಪೇಟೆ</strong>: ಇಲ್ಲಿನ ಪ್ರಮುಖ ರಸ್ತೆಗಳ ಬೀದಿಗಳಲ್ಲಿ ಕಸದ ರಾಶಿ ಬಿದ್ದಿದ್ದು, ಪಟ್ಟಣದ ಅಂದಗೆಡಿಸಿದೆ. ಇದಕ್ಕೆ ನಾಗರಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.</p>.<p>ರಾಷ್ಟ್ರೀಯ ಹೆದ್ದಾರಿ ಪುಣೆ-ಬೆಂಗಳೂರು ಮತ್ತು ದಾಬಸ್ ಪೇಟೆ-ಹೊಸಕೋಟೆ ಹಾಗೂ ರಾಜ್ಯ ಹೆದ್ದಾರಿ ಮಧುಗಿರಿ- ರಾಮನಗರ ರಸ್ತೆಯ ಇಕ್ಕೆಲಗಳಲ್ಲಿ ಕಸ ಸಂಗ್ರಹಗೊಂಡಿದ್ದು, ವಿಲೇವಾರಿಯಾಗದೆ ಕೊಳೆತು ನಾರುತ್ತಿದೆ.</p>.<p>ದಾಬಸ್ ಪೇಟೆ ಪಟ್ಟಣ ಏಳು ಹಂತದ ಕೈಗಾರಿಕೆಗಳಿಂದಾಗಿ ಜನಸಂಖ್ಯೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇದರ ಜೊತೆಗೆ ತ್ಯಾಜ್ಯವೂ ಹೆಚ್ಚು ಸಂಗ್ರಹವಾಗುತ್ತಿದೆ. ವಾಸದ ಮನೆಗಳು, ಅಂಗಡಿಗಳು, ಸಂತೆ ವ್ಯಾಪಾರದಿಂದ ಪ್ಲಾಸ್ಟಿಕ್ ಹಾಗೂ ಇತರೆ ಕಸ ಅಧಿಕವಾಗುತ್ತಿದ್ದು ಬೀದಿಗಳಿಗೆ ಬಂದು ಬೀಳುತ್ತಿದೆ.</p>.<p>ದಾಬಸ್ ಪೇಟೆ ಪಟ್ಟಣಕ್ಕೆ ಹೊಂದಿಕೊಂಡಂತೆ ಸೋಂಪುರ, ಆಗಲಕುಪ್ಪೆ ಮತ್ತು ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿಗಳು ಬರುತ್ತವೆ. ಕೆಲವು ಕಡೆಯ ರಸ್ತೆ ಬದಿಯ ಕಸ ಒಂದೊಂದು ಪಂಚಾಯಿತಿಗೆ ಬರುತ್ತದೆ. ವಾರಾನುಗಟ್ಟಲೆ ಕಸ ತೆಗೆಯದೆ ಬಿಟ್ಟಿರುತ್ತಾರೆ ಎಂಬುದು ನಾಗರಿಕರ ದೂರು.</p>.<p>ಕಸ ವಿಲೇವಾರಿಗೆ ವಾಹನಗಳು, ತ್ಯಾಜ್ಯ ಸಂಸ್ಕರಣ ಘಟಕಗಳು ಇದ್ದರೂ, ಕಸವನ್ನು ರಸ್ತೆ ಬದಿಯಲ್ಲಿ ಸುರಿಯಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಪಂಚಾಯಿತಿ ಆಡಳಿತ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಜನರ ಆರೋಪ.</p>.<p>ಈಗಾಗಲೇ ಬೆಂಗಳೂರಿನಲ್ಲಿ ಕಸ ತಂದು ರಸ್ತೆಗೆ ಸುರಿಯುವವರ ಮನೆ ಮುಂದೆ, ಕಸ ಹಾಕುವಂತಹ ಯೋಜನೆ ರೂಪಿಸಲಾಗಿದೆ. ದಾಬಸ್ ಪೇಟೆ ಭಾಗದಲ್ಲೂ ಅಂತಹ ಕಾರ್ಯಾಚರಣೆ ಆಗಬೇಕು ಎನ್ನುತ್ತಾರೆ ಜನಸಾಮಾನ್ಯರು.</p>.<p>ಮನೆಗಳಲ್ಲಿ, ಅಂಗಡಿಗಳಲ್ಲಿ ಸಂಗ್ರಹವಾಗುವ ಕಸವನ್ನು ರಾತ್ರಿ ವೇಳೆ ವಾಹನಗಳಲ್ಲಿ ಬಂದು ಎಸೆದು ಹೋಗುತ್ತಿದ್ದಾರೆ. ಇದು ಶೇಖರಣೆಗೊಂಡು ವಾಸನೆ ಬೀರುತ್ತಾ ರೋಗಗಳಿಗೆ ಕಾರಣವಾಗಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂಬುದು ದಾಬಸ್ ಪೇಟೆ ನಿವಾಸಿಗಳ ಆಗ್ರಹ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾಬಸ್ ಪೇಟೆ</strong>: ಇಲ್ಲಿನ ಪ್ರಮುಖ ರಸ್ತೆಗಳ ಬೀದಿಗಳಲ್ಲಿ ಕಸದ ರಾಶಿ ಬಿದ್ದಿದ್ದು, ಪಟ್ಟಣದ ಅಂದಗೆಡಿಸಿದೆ. ಇದಕ್ಕೆ ನಾಗರಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.</p>.<p>ರಾಷ್ಟ್ರೀಯ ಹೆದ್ದಾರಿ ಪುಣೆ-ಬೆಂಗಳೂರು ಮತ್ತು ದಾಬಸ್ ಪೇಟೆ-ಹೊಸಕೋಟೆ ಹಾಗೂ ರಾಜ್ಯ ಹೆದ್ದಾರಿ ಮಧುಗಿರಿ- ರಾಮನಗರ ರಸ್ತೆಯ ಇಕ್ಕೆಲಗಳಲ್ಲಿ ಕಸ ಸಂಗ್ರಹಗೊಂಡಿದ್ದು, ವಿಲೇವಾರಿಯಾಗದೆ ಕೊಳೆತು ನಾರುತ್ತಿದೆ.</p>.<p>ದಾಬಸ್ ಪೇಟೆ ಪಟ್ಟಣ ಏಳು ಹಂತದ ಕೈಗಾರಿಕೆಗಳಿಂದಾಗಿ ಜನಸಂಖ್ಯೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇದರ ಜೊತೆಗೆ ತ್ಯಾಜ್ಯವೂ ಹೆಚ್ಚು ಸಂಗ್ರಹವಾಗುತ್ತಿದೆ. ವಾಸದ ಮನೆಗಳು, ಅಂಗಡಿಗಳು, ಸಂತೆ ವ್ಯಾಪಾರದಿಂದ ಪ್ಲಾಸ್ಟಿಕ್ ಹಾಗೂ ಇತರೆ ಕಸ ಅಧಿಕವಾಗುತ್ತಿದ್ದು ಬೀದಿಗಳಿಗೆ ಬಂದು ಬೀಳುತ್ತಿದೆ.</p>.<p>ದಾಬಸ್ ಪೇಟೆ ಪಟ್ಟಣಕ್ಕೆ ಹೊಂದಿಕೊಂಡಂತೆ ಸೋಂಪುರ, ಆಗಲಕುಪ್ಪೆ ಮತ್ತು ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿಗಳು ಬರುತ್ತವೆ. ಕೆಲವು ಕಡೆಯ ರಸ್ತೆ ಬದಿಯ ಕಸ ಒಂದೊಂದು ಪಂಚಾಯಿತಿಗೆ ಬರುತ್ತದೆ. ವಾರಾನುಗಟ್ಟಲೆ ಕಸ ತೆಗೆಯದೆ ಬಿಟ್ಟಿರುತ್ತಾರೆ ಎಂಬುದು ನಾಗರಿಕರ ದೂರು.</p>.<p>ಕಸ ವಿಲೇವಾರಿಗೆ ವಾಹನಗಳು, ತ್ಯಾಜ್ಯ ಸಂಸ್ಕರಣ ಘಟಕಗಳು ಇದ್ದರೂ, ಕಸವನ್ನು ರಸ್ತೆ ಬದಿಯಲ್ಲಿ ಸುರಿಯಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಪಂಚಾಯಿತಿ ಆಡಳಿತ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಜನರ ಆರೋಪ.</p>.<p>ಈಗಾಗಲೇ ಬೆಂಗಳೂರಿನಲ್ಲಿ ಕಸ ತಂದು ರಸ್ತೆಗೆ ಸುರಿಯುವವರ ಮನೆ ಮುಂದೆ, ಕಸ ಹಾಕುವಂತಹ ಯೋಜನೆ ರೂಪಿಸಲಾಗಿದೆ. ದಾಬಸ್ ಪೇಟೆ ಭಾಗದಲ್ಲೂ ಅಂತಹ ಕಾರ್ಯಾಚರಣೆ ಆಗಬೇಕು ಎನ್ನುತ್ತಾರೆ ಜನಸಾಮಾನ್ಯರು.</p>.<p>ಮನೆಗಳಲ್ಲಿ, ಅಂಗಡಿಗಳಲ್ಲಿ ಸಂಗ್ರಹವಾಗುವ ಕಸವನ್ನು ರಾತ್ರಿ ವೇಳೆ ವಾಹನಗಳಲ್ಲಿ ಬಂದು ಎಸೆದು ಹೋಗುತ್ತಿದ್ದಾರೆ. ಇದು ಶೇಖರಣೆಗೊಂಡು ವಾಸನೆ ಬೀರುತ್ತಾ ರೋಗಗಳಿಗೆ ಕಾರಣವಾಗಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂಬುದು ದಾಬಸ್ ಪೇಟೆ ನಿವಾಸಿಗಳ ಆಗ್ರಹ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>