ಚಾಲನ ಪರವಾನಗಿ ಪಡೆಯಲು ನಡೆಸಿರುವ ಪತ್ರ ವ್ಯವಹಾರದ ದಾಖಲಾತಿಗಳೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುನೇಗೌಡ, ‘20 ವರ್ಷಗಳಿಂದ ಚಾಲಕನಾಗಿ ಜೀವನ ನಿರ್ವಹಣೆ ಮಾಡಿಕೊಂಡಿದ್ದೆ. 28 ತಿಂಗಳ ಹಿಂದೆ ದೇವನಹಳ್ಳಿ ಆರ್ಟಿಒ ಕಚೇರಿಗೆ ಚಾಲನಾ ಪರವಾನಗಿ ನವೀರಣಕ್ಕೆ ಅರ್ಜಿ ಸಲ್ಲಿಸಿದ್ದೆ. ಆದರೆ ಮಧ್ಯವರ್ತಿಗಳ ಹಾವಳಿ, ಹಣದ ಬೇಡಿಕೆ ಹಿನ್ನೆಲೆಯಲ್ಲಿ ಈವರೆಗೆ ಡಿಎಲ್ ಕೈಸೇರಿಲ್ಲ’ ಎಂದು ತಮ್ಮ ಅಳಲು ತೋಡಿಕೊಂಡರು.