ಬೆಳಿಗ್ಗೆ 6 ಗಂಟೆ ಆಗುತ್ತಿದ್ದಂತೆ ಸಂತೆ ಮೈದಾನದಲ್ಲಿರುವ ತರಕಾರಿ ಮತ್ತು ಮಾಂಸದ ಅಂಗಡಿಗಳ ಬಳಿ ಜನ ಜಮಾಯಿಸಿದರು. ವ್ಯಾಪಾರಿಗಳು ಮತ್ತು ಸಾರ್ವಜನಿಕರು ಯಾವುದೇ ರೀತಿಯ ವ್ಯಕ್ತಿಗತ ಅಂತರವಾಗಲಿ, ಸರ್ಕಾರ ರೂಪಿಸಿರುವ ನಿಯಮಗಳನ್ನಾಗಲಿ ಪಾಲಿಸದಿರುವುದು ಕಂಡು ಬಂತು. ಮೀತಿ ಮೀರಿ ಜನ ಸೇರುವುದನ್ನು ಮನಗಂಡ ಕಂದಾಯ, ಪಂಚಾಯಿತಿ ಮತ್ತು ಪೊಲೀಸ್ ಸಿಬ್ಬಂದಿ ಸಂತೆ ಮೈದಾನದಲ್ಲಿನ ಅಂಗಡಿ ಮುಂಗಟ್ಟುಗಳು ಮತ್ತು ಜನರನ್ನು ಚದುರಿಸಿದರು.