<p><strong>ವಿಜಯಪುರ</strong>: ‘ರಂಗಭೂಮಿಯಿಂದ ಸಾಮಾಜಿಕ ಪರಿವರ್ತನೆ ನಿರೀಕ್ಷಿಸಬಹುದು. ಹತ್ತು ಹಲವು ಸಾಮಾಜಿಕ ಸಮಸ್ಯೆಗಳಿಗೆ ರಂಗಭೂಮಿ ಮಾತ್ರವೇ ಪರಿಹಾರ ಮಾರ್ಗವಾಗಿದೆ’ ಎಂದು ಸಮಾಜ ಸೇವಕ ಸಿ.ಅಶೋಕ್ ಬಾಬು ತಿಳಿಸಿದರು.</p>.<p>ಚನ್ನರಾಯಪಟ್ಟಣ ಹೋಬಳಿ ಟಿ.ಅಗ್ರಹಾರ ಗ್ರಾಮದಲ್ಲಿ ಪರಿವರ್ತನಾ ಕಲಾ ಸಂಸ್ಥೆಯಿಂದ 7 ದಿನಗಳ ಉಚಿತ ರಂಗ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಇತ್ತೀಚಿನ ಕೆಲ ವರ್ಷಗಳಲ್ಲಿ ಸಿನಿಮಾ, ದೂರದರ್ಶನ ಮತ್ತು ಮೊಬೈಲ್ ಹಾವಳಿಯ ಮಧ್ಯೆಯೂ ರಂಗ ಚಟುವಟಿಕೆಗಳು ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿವೆ. ರಂಗಕಲೆಯ ಬಗ್ಗೆ ಯುವಜನರು ಗಮನಹರಿಸಿದಾಗ ವ್ಯಕ್ತಿತ್ವ ವಿಕಸನವಾಗುತ್ತದೆ. ಮನುಷ್ಯನ ಸೃಜನಶೀಲ ಪ್ರಕ್ರಿಯೆ ಹೂರಣಗೊಳ್ಳಬೇಕಾದರೆ ತರಬೇತಿ ಶಿಬಿರಗಳ ಕಾರ್ಯ ಶ್ಲಾಘನೀಯ. ಆ ನಿಟ್ಟಿನಲ್ಲಿ ರಂಗ ತರಬೇತಿ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಬುನಾದಿಯಾಗಿದೆ’ ಎಂದರು.</p>.<p>ಪರಿವರ್ತನಾ ಕಲಾಸಂಸ್ಥೆಯ ಅಧ್ಯಕ್ಷ ದೇವನಹಳ್ಳಿ ದೇವರಾಜ್ ಮಾತನಾಡಿ, ‘ಹಿಂದೆಂದಿಗಿಂತಲೂ ಇಂದು ಕನ್ನಡ ರಂಗಭೂಮಿಯಲ್ಲಿ ರಚನಾತ್ಮಕ ಪ್ರಯೋಗಗಳು ಹೆಚ್ಚುತ್ತಿವೆ. ಭಾರತದಲ್ಲಿ ಕೇರಳ ಬಿಟ್ಟರೆ ಕರ್ನಾಟಕ ಅತೀ ಹೆಚ್ಚು ಪ್ರಯೋಗದಲ್ಲಿ ತೊಡಗಿರುವ ರಾಜ್ಯ. ಸಾಹಿತ್ಯಿಕವಾದ ಒಲುವು-ನಿಲುವು ಎಲ್ಲದಕ್ಕೂ ಪ್ರತಿಕ್ರಿಯಾತ್ಮಕವಾಗಿ ರಂಗಭೂಮಿ ಸ್ಪಂದಿಸುತ್ತಾ ಬಂದಿದೆ. ಇಂದಿನ ಸಂದಿಗ್ದ ಸನ್ನಿವೇಶದಲ್ಲಿ ರಂಗ ಕಲೆಯನ್ನು ಉಳಿಸುವುದು ಒಂದು ಸಾಹಸವೇ ಆಗಿದೆ’ ಎಂದರು.</p>.<p>ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಜಿ.ತಿಮ್ಮರಾಜು, ವಿಶ್ವಕರ್ಮ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಿಡ್ಲಘಟ್ಟ ಶ್ರೀನಿವಾಸಾಚಾರ್, ಶಾಂತಿನಿಕೇತನ ಟ್ರಸ್ಟ್ ನ ಚಂದನ್, ಸ್ನೇಹಾ ಗಡ್ಡದ ನಾಯಕನಹಳ್ಳಿ ಸುಪ್ರಿಯಾ, ಬೂದಿಗೆರೆ ಭರತ್ ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ‘ರಂಗಭೂಮಿಯಿಂದ ಸಾಮಾಜಿಕ ಪರಿವರ್ತನೆ ನಿರೀಕ್ಷಿಸಬಹುದು. ಹತ್ತು ಹಲವು ಸಾಮಾಜಿಕ ಸಮಸ್ಯೆಗಳಿಗೆ ರಂಗಭೂಮಿ ಮಾತ್ರವೇ ಪರಿಹಾರ ಮಾರ್ಗವಾಗಿದೆ’ ಎಂದು ಸಮಾಜ ಸೇವಕ ಸಿ.ಅಶೋಕ್ ಬಾಬು ತಿಳಿಸಿದರು.</p>.<p>ಚನ್ನರಾಯಪಟ್ಟಣ ಹೋಬಳಿ ಟಿ.ಅಗ್ರಹಾರ ಗ್ರಾಮದಲ್ಲಿ ಪರಿವರ್ತನಾ ಕಲಾ ಸಂಸ್ಥೆಯಿಂದ 7 ದಿನಗಳ ಉಚಿತ ರಂಗ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಇತ್ತೀಚಿನ ಕೆಲ ವರ್ಷಗಳಲ್ಲಿ ಸಿನಿಮಾ, ದೂರದರ್ಶನ ಮತ್ತು ಮೊಬೈಲ್ ಹಾವಳಿಯ ಮಧ್ಯೆಯೂ ರಂಗ ಚಟುವಟಿಕೆಗಳು ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿವೆ. ರಂಗಕಲೆಯ ಬಗ್ಗೆ ಯುವಜನರು ಗಮನಹರಿಸಿದಾಗ ವ್ಯಕ್ತಿತ್ವ ವಿಕಸನವಾಗುತ್ತದೆ. ಮನುಷ್ಯನ ಸೃಜನಶೀಲ ಪ್ರಕ್ರಿಯೆ ಹೂರಣಗೊಳ್ಳಬೇಕಾದರೆ ತರಬೇತಿ ಶಿಬಿರಗಳ ಕಾರ್ಯ ಶ್ಲಾಘನೀಯ. ಆ ನಿಟ್ಟಿನಲ್ಲಿ ರಂಗ ತರಬೇತಿ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಬುನಾದಿಯಾಗಿದೆ’ ಎಂದರು.</p>.<p>ಪರಿವರ್ತನಾ ಕಲಾಸಂಸ್ಥೆಯ ಅಧ್ಯಕ್ಷ ದೇವನಹಳ್ಳಿ ದೇವರಾಜ್ ಮಾತನಾಡಿ, ‘ಹಿಂದೆಂದಿಗಿಂತಲೂ ಇಂದು ಕನ್ನಡ ರಂಗಭೂಮಿಯಲ್ಲಿ ರಚನಾತ್ಮಕ ಪ್ರಯೋಗಗಳು ಹೆಚ್ಚುತ್ತಿವೆ. ಭಾರತದಲ್ಲಿ ಕೇರಳ ಬಿಟ್ಟರೆ ಕರ್ನಾಟಕ ಅತೀ ಹೆಚ್ಚು ಪ್ರಯೋಗದಲ್ಲಿ ತೊಡಗಿರುವ ರಾಜ್ಯ. ಸಾಹಿತ್ಯಿಕವಾದ ಒಲುವು-ನಿಲುವು ಎಲ್ಲದಕ್ಕೂ ಪ್ರತಿಕ್ರಿಯಾತ್ಮಕವಾಗಿ ರಂಗಭೂಮಿ ಸ್ಪಂದಿಸುತ್ತಾ ಬಂದಿದೆ. ಇಂದಿನ ಸಂದಿಗ್ದ ಸನ್ನಿವೇಶದಲ್ಲಿ ರಂಗ ಕಲೆಯನ್ನು ಉಳಿಸುವುದು ಒಂದು ಸಾಹಸವೇ ಆಗಿದೆ’ ಎಂದರು.</p>.<p>ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಜಿ.ತಿಮ್ಮರಾಜು, ವಿಶ್ವಕರ್ಮ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಿಡ್ಲಘಟ್ಟ ಶ್ರೀನಿವಾಸಾಚಾರ್, ಶಾಂತಿನಿಕೇತನ ಟ್ರಸ್ಟ್ ನ ಚಂದನ್, ಸ್ನೇಹಾ ಗಡ್ಡದ ನಾಯಕನಹಳ್ಳಿ ಸುಪ್ರಿಯಾ, ಬೂದಿಗೆರೆ ಭರತ್ ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>