ಬೆಳಗಾವಿ: ‘ರಕ್ತ ದಾನದಿಂದ ನಮ್ಮ ದೇಹದಲ್ಲಿನ ರಕ್ತ ಕಡಿಮೆಯಾಗುತ್ತದೆ. ಶಕ್ತಿ ಕುಂದುತ್ತದೆ ಎನ್ನುವುದು ತಪ್ಪು ಕಲ್ಪನೆಯಾಗಿದೆ’ ಎಂದು ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಸಿ. ಧಾರವಾಡ ತಿಳಿಸಿದರು.
ಆಸ್ಪತ್ರೆಯಲ್ಲಿ ಭಾನುವಾರ ನಡೆದ ವಿಶ್ವ ರಕ್ತ ದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದಾನಗಳಲ್ಲಿ ರಕ್ತ ದಾನ ಶ್ರೇಷ್ಠವಾಗಿದೆ. ಪದೇ ಪದೇ ಕೊಡಬಹುದಾಗಿದೆ. ವೈದ್ಯ ವಿಜ್ಞಾನವು ಎಷ್ಟೇ ಮುಂದುವರಿದರೂ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾದ್ಯವಾಗುತ್ತಿಲ್ಲ. ಮಾನವನಿಂದ ಮಾನವನಿಗೆ ಮಾತ್ರ ಕೊಡಬಹುದಾಗಿದೆ. ಸ್ವಯಂಪ್ರೇರಿತವಾಗಿ ಮುಂದೆ ಬರಬೇಕು’ ರಕ್ತ ದಾನ ಮಾಡುವದನ್ನು ಪ್ರೇರೇಪಿಸಬೇಕಾಗಿದೆ ಎಂದರು.
ವೈದ್ಯರಾದ ಡಾ.ಮಹಮ್ಮದ್ಜಿಯಾ ಗುತ್ತಿ, ಡಾ.ಕೃಷ್ಣ ಟಿ.ಜಿ., ಡಾ.ಪ್ರೇಮಾ ಮೆನಶಿ, ಸಾರ್ವಜನಿಕ ಸಂಪರ್ಕಾಧಿಕಾರಿ ಸಂತೋಷ ಇತಾಪೆ, ರಕ್ತ ದಾನಿಗಳಾದ ಈರಣ್ಣ ಕಲ್ಲೊಳ್ಳಿ ಹಾಗೂ ಬಸವರಾಜ ಅಷ್ಟೇಕರ, ತಂತ್ರಜ್ಞ ಮಹಾದೇವ ವಾಲಿಶೆಟ್ಟಿ ಇದ್ದರು.