ಬೇಸಿಗೆ ಕಾಲದಲ್ಲಿ ಕೃಷ್ಣಾ ನದಿ ಬತ್ತಿದ ಸಂದರ್ಭದಲ್ಲಿ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಈ ಭಾಗದ ಬಾವಿ, ಕೊಳವೆಬಾವಿಗಳು ಬತ್ತಿ ಹೋಗುತ್ತವೆ. ಅಂತರ್ಜಲ ಮಟ್ಟ ತೀವ್ರ ಕುಸಿತ ಕಾಣುತ್ತದೆ. ಆದರೆ, ಈ ಕೊಳವೆಬಾವಿ ಬರಗಾಲದ ನಡುವೆಯೂ ಸಾವಿರಾರು ಜನರ ದಾಹ ನೀಗಿಸುತ್ತಿದೆ. ಖೇಮಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಸಿದ್ದಾಪುರ, ಯಲ್ಪಾರಟ್ಟಿ, ಪರಮಾನಂದವಾಡಿ, ಶಿರಗೂರ, ಅಥಣಿ ತಾಲ್ಲೂಕಿನ ಕಿತ್ತೂರ, ಸಪ್ತಸಾಗರದವರೂ ಈ ನೀರಿಗಾಗಿ ಕೊಡಗಳೊಂದಿಗೆ ಬರುತ್ತಾರೆ.