<p><strong>ಖೇಮಲಾಪುರ:</strong> ಕೃಷ್ಣಾ ನದಿ ತೀರದಲ್ಲಿರುವ ಖೇಮಲಾಪುರ ಗ್ರಾಮದಲ್ಲಿರುವ ಸಿಹಿ ನೀರಿನ ಕೊಳವೆಬಾವಿ ಜನರಿಗೆ ಕುಡಿಯುವ ನೀರಿನ ಪ್ರಮುಖ ಆಸರೆಯಾಗಿದೆ.</p>.<p>ಬೇಸಿಗೆ ಕಾಲದಲ್ಲಿ ಕೃಷ್ಣಾ ನದಿ ಬತ್ತಿದ ಸಂದರ್ಭದಲ್ಲಿ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಈ ಭಾಗದ ಬಾವಿ, ಕೊಳವೆಬಾವಿಗಳು ಬತ್ತಿ ಹೋಗುತ್ತವೆ. ಅಂತರ್ಜಲ ಮಟ್ಟ ತೀವ್ರ ಕುಸಿತ ಕಾಣುತ್ತದೆ. ಆದರೆ, ಈ ಕೊಳವೆಬಾವಿ ಬರಗಾಲದ ನಡುವೆಯೂ ಸಾವಿರಾರು ಜನರ ದಾಹ ನೀಗಿಸುತ್ತಿದೆ. ಖೇಮಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಸಿದ್ದಾಪುರ, ಯಲ್ಪಾರಟ್ಟಿ, ಪರಮಾನಂದವಾಡಿ, ಶಿರಗೂರ, ಅಥಣಿ ತಾಲ್ಲೂಕಿನ ಕಿತ್ತೂರ, ಸಪ್ತಸಾಗರದವರೂ ಈ ನೀರಿಗಾಗಿ ಕೊಡಗಳೊಂದಿಗೆ ಬರುತ್ತಾರೆ.</p>.<p>ಈ ಭಾಗದಲ್ಲಿ ಕೊರೆದಿರುವ ಬೋರ್ವೆಲ್ಗಳಲ್ಲಿ ದೊರೆಯುವ ನೀರು ಸಾಮಾನ್ಯವಾಗಿ ಸಪ್ಪೆಯಾಗಿರುತ್ತದೆ. ಆದರೆ, ಈ ಕೊಳವೆಬಾವಿಯಲ್ಲಿ ಸಿಹಿ ನೀರು ದೊರೆಯುತ್ತಿರುವುದು ವಿಶೇಷ. ಸಿದ್ಧಾರೂಢ ಮಠ ಹಾಗೂ ಯಮನೂರಪ್ಪನ ದರ್ಗಾ ಆವರಣದಲ್ಲಿ ಇದ್ದು, ಎರಡೂ ಧರ್ಮೀಯರಿಗೂ ನೀರುಣಿಸುತ್ತಿದೆ.</p>.<p>ಸರ್ಕಾರದಿಂದ ಗ್ರಾಮದ ವಿವಿಧ ಮೂರು ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ, ಶೇ 75ರಷ್ಟು ಮಂದಿ ಕುಡಿಯುವ ನೀರಿಗಾಗಿ ಈ ಕೊಳವೆಬಾವಿಗೇ ಬರುತ್ತಾರೆ. ಸಿಹಿ ನೀರು ದೊರೆಯುತ್ತದೆ ಎನ್ನುವುದು ಇದಕ್ಕೆ ಕಾರಣ. ಬೇಸಿಗೆಯಲ್ಲಿ ಮಾತ್ರವಲ್ಲದೇ, ಎಲ್ಲ ಋತುಗಳಲ್ಲೂ ಜನರು ಇಲ್ಲಿಂದ ನೀರು ತೆಗೆದುಕೊಂಡು ಹೋಗುತ್ತಾರೆ. ಇದನ್ನು ಕುಡಿದರಷ್ಟೇ ಅವರಿಗೆ ಸಂತೃಪ್ತಿಯಂತೆ. ಇದು ನಿತ್ಯ 18 ತಾಸುಗಳವರೆಗೆ ಜನರು ನೀರು ಒಯ್ಯುತ್ತಲೇ ಇರುತ್ತಾರೆ.</p>.<p>‘ಈ ಕೊಳವೆಬಾವಿ ನಮ್ಮೂರಿನ ಹಿರಿಮೆ ಎತ್ತರಕ್ಕೇರಿಸಿದೆ. ಶುದ್ಧ ಕುಡಿಯುವ ನೀರಿನ ಘಟಕಗಳು ಬರುವುದಕ್ಕಿಂತ ಪೂರ್ವದಿಂದಲೂ ಒಳ್ಳೆಯ ನೀರು ಕೊಡುತ್ತಿದೆ. ಇದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಜನರ ಮೇಲಿದೆ’ ಎನ್ನುತ್ತಾರೆ ನಿವಾಸಿ ಎ.ಕೆ. ಜಯವೀರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಖೇಮಲಾಪುರ:</strong> ಕೃಷ್ಣಾ ನದಿ ತೀರದಲ್ಲಿರುವ ಖೇಮಲಾಪುರ ಗ್ರಾಮದಲ್ಲಿರುವ ಸಿಹಿ ನೀರಿನ ಕೊಳವೆಬಾವಿ ಜನರಿಗೆ ಕುಡಿಯುವ ನೀರಿನ ಪ್ರಮುಖ ಆಸರೆಯಾಗಿದೆ.</p>.<p>ಬೇಸಿಗೆ ಕಾಲದಲ್ಲಿ ಕೃಷ್ಣಾ ನದಿ ಬತ್ತಿದ ಸಂದರ್ಭದಲ್ಲಿ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಈ ಭಾಗದ ಬಾವಿ, ಕೊಳವೆಬಾವಿಗಳು ಬತ್ತಿ ಹೋಗುತ್ತವೆ. ಅಂತರ್ಜಲ ಮಟ್ಟ ತೀವ್ರ ಕುಸಿತ ಕಾಣುತ್ತದೆ. ಆದರೆ, ಈ ಕೊಳವೆಬಾವಿ ಬರಗಾಲದ ನಡುವೆಯೂ ಸಾವಿರಾರು ಜನರ ದಾಹ ನೀಗಿಸುತ್ತಿದೆ. ಖೇಮಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಸಿದ್ದಾಪುರ, ಯಲ್ಪಾರಟ್ಟಿ, ಪರಮಾನಂದವಾಡಿ, ಶಿರಗೂರ, ಅಥಣಿ ತಾಲ್ಲೂಕಿನ ಕಿತ್ತೂರ, ಸಪ್ತಸಾಗರದವರೂ ಈ ನೀರಿಗಾಗಿ ಕೊಡಗಳೊಂದಿಗೆ ಬರುತ್ತಾರೆ.</p>.<p>ಈ ಭಾಗದಲ್ಲಿ ಕೊರೆದಿರುವ ಬೋರ್ವೆಲ್ಗಳಲ್ಲಿ ದೊರೆಯುವ ನೀರು ಸಾಮಾನ್ಯವಾಗಿ ಸಪ್ಪೆಯಾಗಿರುತ್ತದೆ. ಆದರೆ, ಈ ಕೊಳವೆಬಾವಿಯಲ್ಲಿ ಸಿಹಿ ನೀರು ದೊರೆಯುತ್ತಿರುವುದು ವಿಶೇಷ. ಸಿದ್ಧಾರೂಢ ಮಠ ಹಾಗೂ ಯಮನೂರಪ್ಪನ ದರ್ಗಾ ಆವರಣದಲ್ಲಿ ಇದ್ದು, ಎರಡೂ ಧರ್ಮೀಯರಿಗೂ ನೀರುಣಿಸುತ್ತಿದೆ.</p>.<p>ಸರ್ಕಾರದಿಂದ ಗ್ರಾಮದ ವಿವಿಧ ಮೂರು ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ, ಶೇ 75ರಷ್ಟು ಮಂದಿ ಕುಡಿಯುವ ನೀರಿಗಾಗಿ ಈ ಕೊಳವೆಬಾವಿಗೇ ಬರುತ್ತಾರೆ. ಸಿಹಿ ನೀರು ದೊರೆಯುತ್ತದೆ ಎನ್ನುವುದು ಇದಕ್ಕೆ ಕಾರಣ. ಬೇಸಿಗೆಯಲ್ಲಿ ಮಾತ್ರವಲ್ಲದೇ, ಎಲ್ಲ ಋತುಗಳಲ್ಲೂ ಜನರು ಇಲ್ಲಿಂದ ನೀರು ತೆಗೆದುಕೊಂಡು ಹೋಗುತ್ತಾರೆ. ಇದನ್ನು ಕುಡಿದರಷ್ಟೇ ಅವರಿಗೆ ಸಂತೃಪ್ತಿಯಂತೆ. ಇದು ನಿತ್ಯ 18 ತಾಸುಗಳವರೆಗೆ ಜನರು ನೀರು ಒಯ್ಯುತ್ತಲೇ ಇರುತ್ತಾರೆ.</p>.<p>‘ಈ ಕೊಳವೆಬಾವಿ ನಮ್ಮೂರಿನ ಹಿರಿಮೆ ಎತ್ತರಕ್ಕೇರಿಸಿದೆ. ಶುದ್ಧ ಕುಡಿಯುವ ನೀರಿನ ಘಟಕಗಳು ಬರುವುದಕ್ಕಿಂತ ಪೂರ್ವದಿಂದಲೂ ಒಳ್ಳೆಯ ನೀರು ಕೊಡುತ್ತಿದೆ. ಇದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಜನರ ಮೇಲಿದೆ’ ಎನ್ನುತ್ತಾರೆ ನಿವಾಸಿ ಎ.ಕೆ. ಜಯವೀರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>