ನಿವಾಸಿಗಳು ಸ್ನೇಹ ಸಮಾಜ ಸೇವಾ ಸಂಘಟನೆಯ ಮೂಲಕ ಮಾಜಿ ಮೇಯರ್ ಎನ್.ಬಿ. ನಿರ್ವಾಣಿ, ಸಂಘಟನೆಯ ಅಧ್ಯಕ್ಷ ಸುರೇಶ ಉರಬಿನಹಟ್ಟಿ ನೇತೃತ್ವದಲ್ಲಿ ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿ, ಶಾಸಕ ಅನಿಲ ಬೆನಕೆ ಮತ್ತು ಬೂಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಅವರನ್ನು ಒತ್ತಾಯಿಸಿದ್ದರು. ‘ರಸ್ತೆಯಿಂದ ದೂರದಲ್ಲಿರುವ ತಂಗುದಾಣ ಬಳಕೆ ಆಗುತ್ತಿಲ್ಲ. ಅದನ್ನು ಗ್ರಂಥಾಲಯವಾಗಿ ನಿರ್ಮಿಸಿಕೊಟ್ಟರೆ ಅನುಕೂಲ ಆಗುತ್ತದೆ’ ಎಂಬ ಸಲಹೆಯನ್ನೂ ನೀಡಿದ್ದರು. ಅದರಂತೆ ಬುಡಾದಿಂದ ಕ್ರಮ ವಹಿಸಲಾಗಿದೆ.