<p><strong>ಬೈಲಹೊಂಗಲ:</strong> ‘ಯಾವುದೇ ಜಿಲ್ಲೆಯನ್ನು ವಿಭಜನೆ ಮಾಡುವ ವಿಚಾರ ಹೇಳುವ ಮುನ್ನ ಜನರ ಅಭಿಪ್ರಾಯ ಕೇಳಬೇಕು. ಹೋರಾಟಗಾರರ ಆಶಯ ಪರಿಗಣಿಸಬೇಕು. ರಾಜಕಾರಣಿಗಳು ಏಕಪಕ್ಷೀಯವಾಗಿ ನಿರ್ಧಾರ ಪ್ರಕಟಿಸಬಾರದು. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧ’ ಎಂದು ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಶಿವರಂಜನ ಬೋಳನ್ನವರ ಹೇಳಿದರು.</p>.<p>ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಸಚಿವ ಸತೀಶ ಹಾರಕಿಹೊಳಿ ಅವರ ಹೇಳಿಕೆ ಹಿನ್ನೆಲೆಯಲ್ಲಿ, ಪಟ್ಟಣದ ಶಾಖಾ ಮೂರುಸಾವಿರ ಮಠದಲ್ಲಿ ಗುರುವಾರ ನಡೆದ ತುರ್ತುಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಜಿಲ್ಲೆ ವಿಭಜನೆ ವಿಚಾರದಲ್ಲಿ ರಾಜಕಾರಣಿಗಳು ಬೇಜವಾಬ್ದಾರಿ ಹೇಳಿಕೆ ಕೊಡುವುದನ್ನು ಬಿಡಬೇಕು. ಜನರ ದಾರಿ ತಪ್ಪಿಸುವ ಕೆಲಸ ಮಾಡಬಾರದು. ಅಧಿಕಾರ ಬಂದ ಮೇಲೂ ಚುನಾವಣೆಯ ಕಾಲದಲ್ಲೇ ಮಾತನಾಡಿದಂತೆ ಮಾತಾಡಬಾರದು’ ಎಂದರು.</p>.<p>‘ಜಿಲ್ಲೆಯ ಜನಪ್ರತಿನಿಧಿಗಳ ಜತೆಗೆ ಮಾತನಾಡಿದರೆ ಮುಗಿಯುವುದಿಲ್ಲ; ಹೋರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಜನರ ಆಶಯ ಮನ್ನಣೆ ಮಾಡಬೇಕು. ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಬಾರದು’ ಎಂದೂ ಅವರು ಕಿಡಿ ಕಾರಿದರು.</p>.<p>‘ಬೆಳಗಾವಿ ಜಿಲ್ಲೆ ಅಖಂಡವಾಗಿಯೇ ಇರಬೇಕು. ಇಲ್ಲವಾದರೆ ಬೈಲಹೊಂಗಲ ಕೇಂದ್ರವಾಗಿ ಇನ್ನೊಂದು ಜಿಲ್ಲೆ ಘೋಷಣೆ ಮಾಡಬೇಕು’ ಎಂದೂ ಶಿವರಂಜನ ಬೋಳನ್ನವರ ಆಗ್ರಹಿಸಿದರು.</p>.<p>‘ಬೈಲಹೊಂಗಲ ಪಟ್ಟಣವು ಐತಿಹಾಸಕ ಮಹತ್ವ ಪಡೆದಿದೆ. ಬ್ರಿಟಿಷ್ ಕಾಲದಿಂದಲೂ ಉಪ ವಿಭಾಗದ ಕೇಂದ್ರವಾಗಿದೆ. ಇನ್ನೊಂದು ಜಿಲ್ಲೆ ಮಾಡಲು ಎಲ್ಲ ಆರ್ಹತೆಗಳೂ ಇವೆ. ಇದು ಕೇಂದ್ರ ಸ್ಥಾನವೂ ಆಗಿದೆ. ಈ ಬೇಡಿಕೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ’ ಎಂದರು.</p>.<p>ಹೋರಾಟ ಸಮಿತಿ ಇನ್ನೊಬ್ಬ ಮುಖಂಡ ಮಹಾಂತೇಶ ತುರಮರಿ ಮಾತನಾಡಿ, ‘ಜಿಲ್ಲಾ ಹೋರಾಟ ಕೂಗು ಬಹಳ ದಿನಗಳಿಂದ ಇದೆ. ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಬೈಲಹೊಂಗಲ ಜಿಲ್ಲೆ ಮಾಡದೆ ಹೋದರೆ ಸವದತ್ತಿ, ಬೈಲಹೊಂಗಲ, ರಾಮದುರ್ಗ, ಕಿತ್ತೂರು ತಾಲ್ಲೂಕಿನ ಜನ ಸೇರಿ ಸರ್ಕಾರ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.</p>.<p>ಮೂರುಸಾವಿರ ಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಮಡಿವಾಳಪ್ಪ ಹೋಟಿ, ಸೋಮನಾಥ ಸೊಪ್ಪಿಮಠ, ಶ್ರೀಶೈಲ ಯಡಳ್ಳಿ, ಮಹಾಂತೇಶ ಮತ್ತಿಕೊಪ್ಪ, ರುದ್ರಪ್ಪ ಹೊಸಮನಿ, ಬಿ.ಬಿ.ಗಣಾಚಾರಿ, ಮುರುಗೇಶ ಗುಂಡ್ಲೂರ, ಬಾಬು ಸುತಗಟ್ಟಿ, ಸುರೇಶ ವಾಲಿ ಅನೇಕರು ಇದ್ದರು.</p>.<p>Highlights - ಬೈಲಹೊಂಗಲದಲ್ಲಿ ಹೋರಾಟಗಾರರ ತುರ್ತುಸಭೆ ಬೆಳಗಾವಿ ಜಿಲ್ಲೆ ವಿಭಜನೆ ಸೂತ್ರಕ್ಕೆ ವಿರೋಧ ಸ್ಪಷ್ಟ ನಿರ್ಧಾರಕ್ಕೆ ಗಡುವು ನೀಡಿದ ಹೋರಾಟಗಾರರು</p>.<p>Quote - </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೈಲಹೊಂಗಲ:</strong> ‘ಯಾವುದೇ ಜಿಲ್ಲೆಯನ್ನು ವಿಭಜನೆ ಮಾಡುವ ವಿಚಾರ ಹೇಳುವ ಮುನ್ನ ಜನರ ಅಭಿಪ್ರಾಯ ಕೇಳಬೇಕು. ಹೋರಾಟಗಾರರ ಆಶಯ ಪರಿಗಣಿಸಬೇಕು. ರಾಜಕಾರಣಿಗಳು ಏಕಪಕ್ಷೀಯವಾಗಿ ನಿರ್ಧಾರ ಪ್ರಕಟಿಸಬಾರದು. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧ’ ಎಂದು ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಶಿವರಂಜನ ಬೋಳನ್ನವರ ಹೇಳಿದರು.</p>.<p>ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಸಚಿವ ಸತೀಶ ಹಾರಕಿಹೊಳಿ ಅವರ ಹೇಳಿಕೆ ಹಿನ್ನೆಲೆಯಲ್ಲಿ, ಪಟ್ಟಣದ ಶಾಖಾ ಮೂರುಸಾವಿರ ಮಠದಲ್ಲಿ ಗುರುವಾರ ನಡೆದ ತುರ್ತುಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಜಿಲ್ಲೆ ವಿಭಜನೆ ವಿಚಾರದಲ್ಲಿ ರಾಜಕಾರಣಿಗಳು ಬೇಜವಾಬ್ದಾರಿ ಹೇಳಿಕೆ ಕೊಡುವುದನ್ನು ಬಿಡಬೇಕು. ಜನರ ದಾರಿ ತಪ್ಪಿಸುವ ಕೆಲಸ ಮಾಡಬಾರದು. ಅಧಿಕಾರ ಬಂದ ಮೇಲೂ ಚುನಾವಣೆಯ ಕಾಲದಲ್ಲೇ ಮಾತನಾಡಿದಂತೆ ಮಾತಾಡಬಾರದು’ ಎಂದರು.</p>.<p>‘ಜಿಲ್ಲೆಯ ಜನಪ್ರತಿನಿಧಿಗಳ ಜತೆಗೆ ಮಾತನಾಡಿದರೆ ಮುಗಿಯುವುದಿಲ್ಲ; ಹೋರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಜನರ ಆಶಯ ಮನ್ನಣೆ ಮಾಡಬೇಕು. ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಬಾರದು’ ಎಂದೂ ಅವರು ಕಿಡಿ ಕಾರಿದರು.</p>.<p>‘ಬೆಳಗಾವಿ ಜಿಲ್ಲೆ ಅಖಂಡವಾಗಿಯೇ ಇರಬೇಕು. ಇಲ್ಲವಾದರೆ ಬೈಲಹೊಂಗಲ ಕೇಂದ್ರವಾಗಿ ಇನ್ನೊಂದು ಜಿಲ್ಲೆ ಘೋಷಣೆ ಮಾಡಬೇಕು’ ಎಂದೂ ಶಿವರಂಜನ ಬೋಳನ್ನವರ ಆಗ್ರಹಿಸಿದರು.</p>.<p>‘ಬೈಲಹೊಂಗಲ ಪಟ್ಟಣವು ಐತಿಹಾಸಕ ಮಹತ್ವ ಪಡೆದಿದೆ. ಬ್ರಿಟಿಷ್ ಕಾಲದಿಂದಲೂ ಉಪ ವಿಭಾಗದ ಕೇಂದ್ರವಾಗಿದೆ. ಇನ್ನೊಂದು ಜಿಲ್ಲೆ ಮಾಡಲು ಎಲ್ಲ ಆರ್ಹತೆಗಳೂ ಇವೆ. ಇದು ಕೇಂದ್ರ ಸ್ಥಾನವೂ ಆಗಿದೆ. ಈ ಬೇಡಿಕೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ’ ಎಂದರು.</p>.<p>ಹೋರಾಟ ಸಮಿತಿ ಇನ್ನೊಬ್ಬ ಮುಖಂಡ ಮಹಾಂತೇಶ ತುರಮರಿ ಮಾತನಾಡಿ, ‘ಜಿಲ್ಲಾ ಹೋರಾಟ ಕೂಗು ಬಹಳ ದಿನಗಳಿಂದ ಇದೆ. ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಬೈಲಹೊಂಗಲ ಜಿಲ್ಲೆ ಮಾಡದೆ ಹೋದರೆ ಸವದತ್ತಿ, ಬೈಲಹೊಂಗಲ, ರಾಮದುರ್ಗ, ಕಿತ್ತೂರು ತಾಲ್ಲೂಕಿನ ಜನ ಸೇರಿ ಸರ್ಕಾರ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.</p>.<p>ಮೂರುಸಾವಿರ ಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಮಡಿವಾಳಪ್ಪ ಹೋಟಿ, ಸೋಮನಾಥ ಸೊಪ್ಪಿಮಠ, ಶ್ರೀಶೈಲ ಯಡಳ್ಳಿ, ಮಹಾಂತೇಶ ಮತ್ತಿಕೊಪ್ಪ, ರುದ್ರಪ್ಪ ಹೊಸಮನಿ, ಬಿ.ಬಿ.ಗಣಾಚಾರಿ, ಮುರುಗೇಶ ಗುಂಡ್ಲೂರ, ಬಾಬು ಸುತಗಟ್ಟಿ, ಸುರೇಶ ವಾಲಿ ಅನೇಕರು ಇದ್ದರು.</p>.<p>Highlights - ಬೈಲಹೊಂಗಲದಲ್ಲಿ ಹೋರಾಟಗಾರರ ತುರ್ತುಸಭೆ ಬೆಳಗಾವಿ ಜಿಲ್ಲೆ ವಿಭಜನೆ ಸೂತ್ರಕ್ಕೆ ವಿರೋಧ ಸ್ಪಷ್ಟ ನಿರ್ಧಾರಕ್ಕೆ ಗಡುವು ನೀಡಿದ ಹೋರಾಟಗಾರರು</p>.<p>Quote - </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>