‘ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕಮ್ಯುನಿಸ್ಟ್ ಪಕ್ಷ, ರೈತ ಸಂಘದ ಮುಖಂಡರು, ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ, ರೈತ ಸಂಘದ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರ, ಕುರುಬೂರು ಶಾಂತಕುಮಾರ್, ಚೂನಪ್ಪ ಪೂಜಾರ, ಚಾಮರಸ ಮಾಲಿಪಾಟೀಲ ಮೊದಲಾದವರಿಗೆ ಪತ್ರ ಬರೆಯುತ್ತೇನೆ, ಕರವೇ ಮೊದಲಾದ ಸಂಘನೆಯವರಿಂದಲೂ ಬೆಂಬಲ ಕೋರಿದ್ದೇವೆ. ದೇಶ ಹಾಗೂ ರಾಜ್ಯದಲ್ಲಿ ಬದಲಾವಣೆ ಮಾಡಬೇಕು ಎಂದು ಜನರು ಬಯಸಿದ್ದಾರೆ. ಹೀಗಾಗಿ, ಸಂಘಟನೆಗಳು ನಮ್ಮ ಕೈಜೋಡಿಸಬೇಕು. ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ನಡೆಯುವ ಹೋರಾಟಗಳೊಂದಿಗೆ ಪಕ್ಷವು ಸಂಘನೆಗಳೊಂದಿಗೆ ಇರಲಿದೆ’ ಎಂದರು.