<p><strong>ಬೈಲಹೊಂಗಲ (ಬೆಳಗಾವಿ ಜಿಲ್ಲೆ): </strong>ಹೆಸರುಕಾಳು, ಉದ್ದು ಖರೀದಿಸಲು ಖರೀದಿ ಕೇಂದ್ರದ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ, ಪಟ್ಟಣದಲ್ಲಿ ಸೋಮವಾರ ರೈತರು ಟ್ರ್ಯಾಕ್ಟರ್ಗಳ ಸಹಿತ ಬೃಹತ್ ರ್ಯಾಲಿ ನಡೆಸಿದರು. ಪ್ರತಿಭಟನಕಾರರು ಉಪ ವಿಭಾಗಾಧಿಕಾರಿ ಕಚೇರಿಗೂ ಮುತ್ತಿಗೆ ಹಾಕಿದರು.</p>.<p>ಡೊಳ್ಳು, ತಮಟೆ ಬಾರಿಸುತ್ತ, ಹಸಿರು ಟವಲ್ ಬೀಸುತ್ತ ಹಲವರು ಪಾದಯಾತ್ರೆ ಮಾಡಿದರು. ತಾಲ್ಲೂಕಿನ ದೊಡವಾಡ, ಗುಡಕಟ್ಟಿ, ನನಗುಂಡಿಕೊಪ್ಪ, ಯಡಳ್ಳಿ, ಕರೀಕಟ್ಟಿ, ಸಂಗ್ರೇಶಕೊಪ್ಪ ಸೇರಿ ವಿವಿಧ ಊರಿನ ಜನರೂ ಪಾಲ್ಗೊಂಡರು.</p>.<p>‘ಈ ಬಾರಿ ಅತಿವೃಷ್ಟಿಯಾಗಿದೆ. ಹೆಸರುಕಾಳು, ಉದ್ದು ಸೇರಿ ಎಲ್ಲ ಧಾನ್ಯಗಳನ್ನು ರಾಶಿ ಮಾಡುವಾಗ ತೇವಾಂಶ ಹೆಚ್ಚಾಗಿದೆ. ಅದನ್ನೇ ನೆಪ ಮಾಡಿ, ಖರೀದಿ ಕೇಂದ್ರದ ಸಿಬ್ಬಂದಿ ಕಾಳು ಖರೀದಿಸುತ್ತಿಲ್ಲ. ರೈತರನ್ನು ಉದ್ದೇಶಪೂರ್ವಕವಾಗಿ ಸಂಕಷ್ಟಕ್ಕೆ ತಳ್ಳಲಾಗಿದೆ’ ಎಂದು ಹೋರಾಟಗಾರರು ಆಕ್ರೋಶ ಹೊರಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೈಲಹೊಂಗಲ (ಬೆಳಗಾವಿ ಜಿಲ್ಲೆ): </strong>ಹೆಸರುಕಾಳು, ಉದ್ದು ಖರೀದಿಸಲು ಖರೀದಿ ಕೇಂದ್ರದ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ, ಪಟ್ಟಣದಲ್ಲಿ ಸೋಮವಾರ ರೈತರು ಟ್ರ್ಯಾಕ್ಟರ್ಗಳ ಸಹಿತ ಬೃಹತ್ ರ್ಯಾಲಿ ನಡೆಸಿದರು. ಪ್ರತಿಭಟನಕಾರರು ಉಪ ವಿಭಾಗಾಧಿಕಾರಿ ಕಚೇರಿಗೂ ಮುತ್ತಿಗೆ ಹಾಕಿದರು.</p>.<p>ಡೊಳ್ಳು, ತಮಟೆ ಬಾರಿಸುತ್ತ, ಹಸಿರು ಟವಲ್ ಬೀಸುತ್ತ ಹಲವರು ಪಾದಯಾತ್ರೆ ಮಾಡಿದರು. ತಾಲ್ಲೂಕಿನ ದೊಡವಾಡ, ಗುಡಕಟ್ಟಿ, ನನಗುಂಡಿಕೊಪ್ಪ, ಯಡಳ್ಳಿ, ಕರೀಕಟ್ಟಿ, ಸಂಗ್ರೇಶಕೊಪ್ಪ ಸೇರಿ ವಿವಿಧ ಊರಿನ ಜನರೂ ಪಾಲ್ಗೊಂಡರು.</p>.<p>‘ಈ ಬಾರಿ ಅತಿವೃಷ್ಟಿಯಾಗಿದೆ. ಹೆಸರುಕಾಳು, ಉದ್ದು ಸೇರಿ ಎಲ್ಲ ಧಾನ್ಯಗಳನ್ನು ರಾಶಿ ಮಾಡುವಾಗ ತೇವಾಂಶ ಹೆಚ್ಚಾಗಿದೆ. ಅದನ್ನೇ ನೆಪ ಮಾಡಿ, ಖರೀದಿ ಕೇಂದ್ರದ ಸಿಬ್ಬಂದಿ ಕಾಳು ಖರೀದಿಸುತ್ತಿಲ್ಲ. ರೈತರನ್ನು ಉದ್ದೇಶಪೂರ್ವಕವಾಗಿ ಸಂಕಷ್ಟಕ್ಕೆ ತಳ್ಳಲಾಗಿದೆ’ ಎಂದು ಹೋರಾಟಗಾರರು ಆಕ್ರೋಶ ಹೊರಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>