<p><strong>ಬೆಳಗಾವಿ: </strong>ಲಾಕ್ಡೌನ್ದಿಂದಾಗಿ ಗ್ರಾಮಗಳಿಗೆ ವಾಪಸ್ಸಾಗಿರುವ ಜಿಲ್ಲೆಯ ಕಾರ್ಮಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆ ಆಸರೆಯಾಗಿದೆ. ಸುಮಾರು 14 ಸಾವಿರಕ್ಕಿಂತಲೂ ಹೆಚ್ಚು ಜನರು ಹೊಸದಾಗಿ ಜಾಬ್ ಕಾರ್ಡ್ ಪಡೆದು, ದುಡಿಮೆ ಮಾಡುತ್ತಿದ್ದಾರೆ. ಉಪಜೀವನ ನಡೆಸುತ್ತಿದ್ದಾರೆ.</p>.<p>ಲಾಕ್ಡೌನ್ಕ್ಕಿಂತಲೂ ಮುಂಚೆ ಜಿಲ್ಲೆಯಲ್ಲಿ ಸುಮಾರು 6.10 ಲಕ್ಷ ಕಾರ್ಮಿಕರು ಜಾಜ್ ಕಾರ್ಡ್ ಹೊಂದಿದ್ದರು. ಈಗ ವಲಸೆ ಕಾರ್ಮಿಕರು ವಾಪಸ್ಸಾಗಿದ್ದರಿಂದ ಕಾರ್ಮಿಕರ ಬಲ ಇನ್ನಷ್ಟು ಹೆಚ್ಚಾಗಿದ್ದು, ನರೇಗಾ ಕಾಮಗಾರಿಗಳು ಭರದಿಂದ ಸಾಗಿವೆ.</p>.<p><strong>ಉದ್ಯೋಗವೇ ಆಸರೆ:</strong>ಜಿಲ್ಲೆಯ ಸಾವಿರಾರು ಜನರು ನೆರೆಯ ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶಕ್ಕೆ ಉದ್ಯೋಗ ಅರಸಿ ಹೋಗಿದ್ದರು. ಕೋವಿಡ್–19 ಸೋಂಕು ಹರಡುವುದನ್ನು ತಡೆಗಟ್ಟಲು ದೇಶದಾದ್ಯಂತ ಮಾರ್ಚ್ 22ರಿಂದ ಲಾಕ್ಡೌನ್ ಹೇರಲಾಗಿತ್ತು. ಎಲ್ಲ ಕೆಲಸ, ಕಾಮಗಾರಿಗಳು ಬಂದ್ ಆಗಿದ್ದವು. ಇದರಿಂದಾಗಿ ಜಿಲ್ಲೆಯ ಕಾರ್ಮಿಕರು ವಾಪಸ್ ಮರಳಿದರು.</p>.<p>ವಿವಿಧ ಹಂತಗಳಲ್ಲಿ ಲಾಕ್ಡೌನ್ ತೆರವುಗೊಳಿಸಿದ ಅವಧಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ಕಾಮಗಾರಿಗಳನ್ನು ಸರ್ಕಾರ ಆರಂಭಿಸಿತ್ತು. ಜಿಲ್ಲೆಗೆ ವಾಪಸ್ ಬಂದಿದ್ದ ಕಾರ್ಮಿಕರಿಗೆ ಜಾಬ್ ಕಾರ್ಡ್ ನೀಡಿ, ಉದ್ಯೋಗಾವಕಾಶ ಕಲ್ಪಿಸಲಾಯಿತು.</p>.<p><strong>ಮಹಿಳೆಯರೇ ಹೆಚ್ಚು:</strong> ಹೊಸದಾಗಿ ಜಾಬ್ ಕಾರ್ಡ್ ಮಾಡಿಸಿಕೊಂಡವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಸುಮಾರು ಶೇ 60ರಷ್ಟು ಮಹಿಳೆಯರೇ ಪಡೆದುಕೊಂಡಿದ್ದಾರೆ.</p>.<p><strong>ಶೇ 15ರಷ್ಟು ಪ್ರಗತಿ:</strong>ಜಿಲ್ಲೆಗೆ 1.20 ಕೋಟಿ ಮಾನವ ದಿನಗಳ ಗುರಿ ನೀಡಲಾಗಿತ್ತು. ಏಪ್ರಿಲ್ನಿಂದ ಜೂನ್ ಮೊದಲ ವಾರದವರೆಗೆ 17.22 ಲಕ್ಷ ಮಾನವ ದಿನಗಳ ಕೆಲಸವಾಗಿದೆ. ಈ ಮೂಲಕ ನಿಗದಿಯಾದ ಗುರಿಯಲ್ಲಿ ಶೇ 15ರಷ್ಟು ಸಾಧನೆ ಮಾಡಲಾಗಿದೆ. ಸದ್ಯಕ್ಕೆ 1.04 ಲಕ್ಷ ಕಾಮಗಾರಿಗಳು ನಡೆದಿದ್ದು, ಜೂನ್ ತಿಂಗಳ ಅಂತ್ಯದ ವೇಳೆಗೆ ಶೇ 25ರಷ್ಟು ಕಾಮಗಾರಿಗಳು ಪೂರ್ಣಗೊಳ್ಳಲಿವೆ.</p>.<p>ಕೆರೆ, ನಾಲಾ ಹೂಳೆತ್ತುವುದು, ಕೃಷಿ ಹೊಂಡ ನಿರ್ಮಾಣ, ಬದು ನಿರ್ಮಾಣ, ಇಂಗುಗುಂಡಿಗಳ ನಿರ್ಮಾಣ, ಹಿರಣ್ಯಕೇಶಿ ನದಿಯ ಹೂಳೆತ್ತುವುದು, ಕೊಟ್ಟಿಗೆ ನಿರ್ಮಾಣ, ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.</p>.<p><strong>ಭತ್ಯೆ ಹೆಚ್ಚಳ:</strong>ನರೇಗಾ ಯೋಜನೆಯಡಿ ದುಡಿಯುವ ಪುರುಷ ಹಾಗೂ ಮಹಿಳೆಯರಿಗೆ ಸಮಾನ ವೇತನ ನೀಡಲಾಗುತ್ತಿದೆ. ಏಪ್ರಿಲ್ ನಂತರ ಭತ್ಯೆಯನ್ನು ಹೆಚ್ಚಿಸಲಾಗಿದೆ. ಒಂದು ದಿನಕ್ಕೆ ₹ 275 ನೀಡಲಾಗುತ್ತಿದೆ. ಇದಕ್ಕೂ ಮೊದಲು ₹ 249 ನೀಡಲಾಗುತ್ತಿತ್ತು. ವಾರ್ಷಿಕವಾಗಿ ಕನಿಷ್ಠ 100 ದಿನಗಳ ಉದ್ಯೋಗ ನೀಡಲಾಗುತ್ತದೆ ಎನ್ನುತ್ತಾರೆ ಪಂಚಾಯ್ತಿಯ ಅಧಿಕಾರಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>ಲಾಕ್ಡೌನ್ದಿಂದಾಗಿ ಗ್ರಾಮಗಳಿಗೆ ವಾಪಸ್ಸಾಗಿರುವ ಜಿಲ್ಲೆಯ ಕಾರ್ಮಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆ ಆಸರೆಯಾಗಿದೆ. ಸುಮಾರು 14 ಸಾವಿರಕ್ಕಿಂತಲೂ ಹೆಚ್ಚು ಜನರು ಹೊಸದಾಗಿ ಜಾಬ್ ಕಾರ್ಡ್ ಪಡೆದು, ದುಡಿಮೆ ಮಾಡುತ್ತಿದ್ದಾರೆ. ಉಪಜೀವನ ನಡೆಸುತ್ತಿದ್ದಾರೆ.</p>.<p>ಲಾಕ್ಡೌನ್ಕ್ಕಿಂತಲೂ ಮುಂಚೆ ಜಿಲ್ಲೆಯಲ್ಲಿ ಸುಮಾರು 6.10 ಲಕ್ಷ ಕಾರ್ಮಿಕರು ಜಾಜ್ ಕಾರ್ಡ್ ಹೊಂದಿದ್ದರು. ಈಗ ವಲಸೆ ಕಾರ್ಮಿಕರು ವಾಪಸ್ಸಾಗಿದ್ದರಿಂದ ಕಾರ್ಮಿಕರ ಬಲ ಇನ್ನಷ್ಟು ಹೆಚ್ಚಾಗಿದ್ದು, ನರೇಗಾ ಕಾಮಗಾರಿಗಳು ಭರದಿಂದ ಸಾಗಿವೆ.</p>.<p><strong>ಉದ್ಯೋಗವೇ ಆಸರೆ:</strong>ಜಿಲ್ಲೆಯ ಸಾವಿರಾರು ಜನರು ನೆರೆಯ ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶಕ್ಕೆ ಉದ್ಯೋಗ ಅರಸಿ ಹೋಗಿದ್ದರು. ಕೋವಿಡ್–19 ಸೋಂಕು ಹರಡುವುದನ್ನು ತಡೆಗಟ್ಟಲು ದೇಶದಾದ್ಯಂತ ಮಾರ್ಚ್ 22ರಿಂದ ಲಾಕ್ಡೌನ್ ಹೇರಲಾಗಿತ್ತು. ಎಲ್ಲ ಕೆಲಸ, ಕಾಮಗಾರಿಗಳು ಬಂದ್ ಆಗಿದ್ದವು. ಇದರಿಂದಾಗಿ ಜಿಲ್ಲೆಯ ಕಾರ್ಮಿಕರು ವಾಪಸ್ ಮರಳಿದರು.</p>.<p>ವಿವಿಧ ಹಂತಗಳಲ್ಲಿ ಲಾಕ್ಡೌನ್ ತೆರವುಗೊಳಿಸಿದ ಅವಧಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ಕಾಮಗಾರಿಗಳನ್ನು ಸರ್ಕಾರ ಆರಂಭಿಸಿತ್ತು. ಜಿಲ್ಲೆಗೆ ವಾಪಸ್ ಬಂದಿದ್ದ ಕಾರ್ಮಿಕರಿಗೆ ಜಾಬ್ ಕಾರ್ಡ್ ನೀಡಿ, ಉದ್ಯೋಗಾವಕಾಶ ಕಲ್ಪಿಸಲಾಯಿತು.</p>.<p><strong>ಮಹಿಳೆಯರೇ ಹೆಚ್ಚು:</strong> ಹೊಸದಾಗಿ ಜಾಬ್ ಕಾರ್ಡ್ ಮಾಡಿಸಿಕೊಂಡವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಸುಮಾರು ಶೇ 60ರಷ್ಟು ಮಹಿಳೆಯರೇ ಪಡೆದುಕೊಂಡಿದ್ದಾರೆ.</p>.<p><strong>ಶೇ 15ರಷ್ಟು ಪ್ರಗತಿ:</strong>ಜಿಲ್ಲೆಗೆ 1.20 ಕೋಟಿ ಮಾನವ ದಿನಗಳ ಗುರಿ ನೀಡಲಾಗಿತ್ತು. ಏಪ್ರಿಲ್ನಿಂದ ಜೂನ್ ಮೊದಲ ವಾರದವರೆಗೆ 17.22 ಲಕ್ಷ ಮಾನವ ದಿನಗಳ ಕೆಲಸವಾಗಿದೆ. ಈ ಮೂಲಕ ನಿಗದಿಯಾದ ಗುರಿಯಲ್ಲಿ ಶೇ 15ರಷ್ಟು ಸಾಧನೆ ಮಾಡಲಾಗಿದೆ. ಸದ್ಯಕ್ಕೆ 1.04 ಲಕ್ಷ ಕಾಮಗಾರಿಗಳು ನಡೆದಿದ್ದು, ಜೂನ್ ತಿಂಗಳ ಅಂತ್ಯದ ವೇಳೆಗೆ ಶೇ 25ರಷ್ಟು ಕಾಮಗಾರಿಗಳು ಪೂರ್ಣಗೊಳ್ಳಲಿವೆ.</p>.<p>ಕೆರೆ, ನಾಲಾ ಹೂಳೆತ್ತುವುದು, ಕೃಷಿ ಹೊಂಡ ನಿರ್ಮಾಣ, ಬದು ನಿರ್ಮಾಣ, ಇಂಗುಗುಂಡಿಗಳ ನಿರ್ಮಾಣ, ಹಿರಣ್ಯಕೇಶಿ ನದಿಯ ಹೂಳೆತ್ತುವುದು, ಕೊಟ್ಟಿಗೆ ನಿರ್ಮಾಣ, ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.</p>.<p><strong>ಭತ್ಯೆ ಹೆಚ್ಚಳ:</strong>ನರೇಗಾ ಯೋಜನೆಯಡಿ ದುಡಿಯುವ ಪುರುಷ ಹಾಗೂ ಮಹಿಳೆಯರಿಗೆ ಸಮಾನ ವೇತನ ನೀಡಲಾಗುತ್ತಿದೆ. ಏಪ್ರಿಲ್ ನಂತರ ಭತ್ಯೆಯನ್ನು ಹೆಚ್ಚಿಸಲಾಗಿದೆ. ಒಂದು ದಿನಕ್ಕೆ ₹ 275 ನೀಡಲಾಗುತ್ತಿದೆ. ಇದಕ್ಕೂ ಮೊದಲು ₹ 249 ನೀಡಲಾಗುತ್ತಿತ್ತು. ವಾರ್ಷಿಕವಾಗಿ ಕನಿಷ್ಠ 100 ದಿನಗಳ ಉದ್ಯೋಗ ನೀಡಲಾಗುತ್ತದೆ ಎನ್ನುತ್ತಾರೆ ಪಂಚಾಯ್ತಿಯ ಅಧಿಕಾರಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>