<p><strong>ಹುಕ್ಕೇರಿ:</strong> ಮಠ ಮಂದಿರಗಳ ಸಂಪರ್ಕ ಹೊಂದಿದವರು, ಜೀವನದಲ್ಲಿ ಎಷ್ಟೆ ಒತ್ತಡವಿದ್ದರೂ, ಸಮಾಧಾನ ಮತ್ತು ಶಾಂತಚಿತ್ತದಿಂದ ಜೀವನ ಸಾಗಿಸಬಲ್ಲರು ಎಂದು ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಹೇಳಿದರು.</p><p>ಅವರು ಸ್ಥಳೀಯ ಹಿರೇಮಠದ ‘ಭಾವೈಕ್ಯ ದಸರಾ ಉತ್ಸವ’ದಲ್ಲಿ ಪಾಲ್ಗೊಂಡು ಮಾತನಾಡಿದರು. ಗುರುಗಳ ಮಾರ್ಗದರ್ಶನದಿಂದ ಸರಿಯಾದ ನಿರ್ಣಯ ಕೈಗೊಳ್ಳಲು ಸಾಧ್ಯ ಎಂದ ಅವರು, ಯುವ ಪೀಳಿಗೆ ಆಧ್ಯಾತ್ಮದತ್ತ ಚಿತ್ತ ಹರಿಸಲು ಸಲಹೆ ನೀಡಿದರು. ‘ಅಮೃತ ವರ್ಷನಿ’ ಮತ್ತು ‘ ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ನಟಿ ರಜನಿ ಸಭೆ ಉದ್ಧೇಶಿಸಿ ಮಾತನಾಡಿದರು.</p><p> ಸಾನ್ನಿಧ್ಯ ವಹಿಸಿದ್ದ ನಿಡಸೋಸಿ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಸ್ವಾಮೀಜಿ ಮಾತನಾಡಿ ‘ ಜನರಿಗೆ ಸಮುದಾಯದ ಸ್ವಚ್ಛತಾ ಅಭಿಯಾನದ’ ತಿಳಿವಳಿಕೆ ಮೂಡಿಸಬೇಕಾಗಿದೆ ಎಂದರು. ತನ್ನಿಮಿತ್ತ ತಾವು ಕೈಗೊಂಡ ಕಾರ್ಯದ ಬಗ್ಗೆ ವಿವರಿಸಿದರು.</p><p> ಮಹಾವೀರ ಉದ್ಯೋಗ ಸಮೂಹ ಚೇರಮನ್ ಮಹಾವೀರ ನಿಲಜಗಿ, ರೀರ್ಡ್ಸ್ ಸಂಸ್ಥೆಯ ಅಧ್ಯಕ್ಷ ಅಶೋಕ ಪಾಟೀಲ್, ಸಿಬಿಎಸ್ಇ ಸ್ಕೂಲ್ ಪ್ರಾಚಾರ್ಯ ಅನಿಲ್ ಪಾಟೀಲ್, ಜೈನ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಬಾಹುಬಲಿ ನಾಗನೂರಿ, ಹನ್ನೊಂದು ಜಮಾತ್ ಅಧ್ಯಕ್ಷ ಇರ್ಷಾದ್ ಮೊಕಾಶಿ, ಹಡಪದ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಆನಂದ ಕುರಲಿ, ನಿವೃತ್ತ ಮುಖ್ಯ ಶಿಕ್ಷಕ ಸಿ.ಡಿ.ಪಾಟೀಲ್, ಹಿರಾ ಶುಗರ್ ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ, ಬ್ರಾಹ್ಮಣ ಸಮಾಜದ ಮುಖಂಡ ಗುರುರಾಜ ಕುಲಕರ್ಣಿ ಅತಿಥಿಗಳಾಗಿದ್ದರು.</p><p> ನಿರಾಣಿ ಉದ್ಯೋಗ ಸಮೂಹದ ಸಿಇಒ ಸಂಗಮೇಶ್ ನಿರಾಣಿ, ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿ, ಎಚ್.ಎಲ್.ಪೂಜಾರ, ಮುಖಂಡರಾದ ಶೀತಲ್ ಬ್ಯಾಳಿ, ಚನ್ನಪ್ಪ ಗಜಬರ್, ಸುರೇಶ್ ಜಿನರಾಳಿ, ಶಿವಾನಂದ ಜಿರಲಿ ಸೇರಿದಂತೆ ನೂರಾರು ಭಕ್ತರು ಇದ್ದರು.</p><p> ಇದಕ್ಕೂ ಮೊದಲು ಅಮೀನಗಡದ ಮಾತೋಶ್ರೀ ಪಾರ್ವತಿ ಚೊಳಚಗುಡ್ಡ ಅವರಿಂದ ಆಧ್ಯಾತ್ಮ ಪ್ರವಚನ ಜರುಗಿತು.ಶಿಕ್ಷಕ ಸಿ.ಎಂ.ದರಬಾರೆ ಸ್ವಾಗತಿಸಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಕ್ಕೇರಿ:</strong> ಮಠ ಮಂದಿರಗಳ ಸಂಪರ್ಕ ಹೊಂದಿದವರು, ಜೀವನದಲ್ಲಿ ಎಷ್ಟೆ ಒತ್ತಡವಿದ್ದರೂ, ಸಮಾಧಾನ ಮತ್ತು ಶಾಂತಚಿತ್ತದಿಂದ ಜೀವನ ಸಾಗಿಸಬಲ್ಲರು ಎಂದು ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಹೇಳಿದರು.</p><p>ಅವರು ಸ್ಥಳೀಯ ಹಿರೇಮಠದ ‘ಭಾವೈಕ್ಯ ದಸರಾ ಉತ್ಸವ’ದಲ್ಲಿ ಪಾಲ್ಗೊಂಡು ಮಾತನಾಡಿದರು. ಗುರುಗಳ ಮಾರ್ಗದರ್ಶನದಿಂದ ಸರಿಯಾದ ನಿರ್ಣಯ ಕೈಗೊಳ್ಳಲು ಸಾಧ್ಯ ಎಂದ ಅವರು, ಯುವ ಪೀಳಿಗೆ ಆಧ್ಯಾತ್ಮದತ್ತ ಚಿತ್ತ ಹರಿಸಲು ಸಲಹೆ ನೀಡಿದರು. ‘ಅಮೃತ ವರ್ಷನಿ’ ಮತ್ತು ‘ ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ನಟಿ ರಜನಿ ಸಭೆ ಉದ್ಧೇಶಿಸಿ ಮಾತನಾಡಿದರು.</p><p> ಸಾನ್ನಿಧ್ಯ ವಹಿಸಿದ್ದ ನಿಡಸೋಸಿ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಸ್ವಾಮೀಜಿ ಮಾತನಾಡಿ ‘ ಜನರಿಗೆ ಸಮುದಾಯದ ಸ್ವಚ್ಛತಾ ಅಭಿಯಾನದ’ ತಿಳಿವಳಿಕೆ ಮೂಡಿಸಬೇಕಾಗಿದೆ ಎಂದರು. ತನ್ನಿಮಿತ್ತ ತಾವು ಕೈಗೊಂಡ ಕಾರ್ಯದ ಬಗ್ಗೆ ವಿವರಿಸಿದರು.</p><p> ಮಹಾವೀರ ಉದ್ಯೋಗ ಸಮೂಹ ಚೇರಮನ್ ಮಹಾವೀರ ನಿಲಜಗಿ, ರೀರ್ಡ್ಸ್ ಸಂಸ್ಥೆಯ ಅಧ್ಯಕ್ಷ ಅಶೋಕ ಪಾಟೀಲ್, ಸಿಬಿಎಸ್ಇ ಸ್ಕೂಲ್ ಪ್ರಾಚಾರ್ಯ ಅನಿಲ್ ಪಾಟೀಲ್, ಜೈನ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಬಾಹುಬಲಿ ನಾಗನೂರಿ, ಹನ್ನೊಂದು ಜಮಾತ್ ಅಧ್ಯಕ್ಷ ಇರ್ಷಾದ್ ಮೊಕಾಶಿ, ಹಡಪದ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಆನಂದ ಕುರಲಿ, ನಿವೃತ್ತ ಮುಖ್ಯ ಶಿಕ್ಷಕ ಸಿ.ಡಿ.ಪಾಟೀಲ್, ಹಿರಾ ಶುಗರ್ ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ, ಬ್ರಾಹ್ಮಣ ಸಮಾಜದ ಮುಖಂಡ ಗುರುರಾಜ ಕುಲಕರ್ಣಿ ಅತಿಥಿಗಳಾಗಿದ್ದರು.</p><p> ನಿರಾಣಿ ಉದ್ಯೋಗ ಸಮೂಹದ ಸಿಇಒ ಸಂಗಮೇಶ್ ನಿರಾಣಿ, ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿ, ಎಚ್.ಎಲ್.ಪೂಜಾರ, ಮುಖಂಡರಾದ ಶೀತಲ್ ಬ್ಯಾಳಿ, ಚನ್ನಪ್ಪ ಗಜಬರ್, ಸುರೇಶ್ ಜಿನರಾಳಿ, ಶಿವಾನಂದ ಜಿರಲಿ ಸೇರಿದಂತೆ ನೂರಾರು ಭಕ್ತರು ಇದ್ದರು.</p><p> ಇದಕ್ಕೂ ಮೊದಲು ಅಮೀನಗಡದ ಮಾತೋಶ್ರೀ ಪಾರ್ವತಿ ಚೊಳಚಗುಡ್ಡ ಅವರಿಂದ ಆಧ್ಯಾತ್ಮ ಪ್ರವಚನ ಜರುಗಿತು.ಶಿಕ್ಷಕ ಸಿ.ಎಂ.ದರಬಾರೆ ಸ್ವಾಗತಿಸಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>