<p><strong>ಮೂಡಲಗಿ:</strong> ‘ಮೂಡಲಗಿ ಕೋ ಆಪರೇಟಿವ್ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ ₹70.22 ಲಕ್ಷ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ’ ಎಂದು ಬ್ಯಾಂಕ್ ಅಧ್ಯಕ್ಷ ಸುಭಾಷ ಜಿ. ಢವಳೇಶ್ವರ ಹೇಳಿದರು.</p>.<p>ಇಲ್ಲಿಯ ದಿ. ಮೂಡಲಗಿಯ ಕೋ ಆಪರೇಟಿವ್ ಬ್ಯಾಂಕ್ನ 74ನೇ ವರ್ಷದ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕ್ ಆರ್ಬಿಐ ನಿರ್ದೇಶನ ಮತ್ತು ಮಾರ್ಗಸೂಚಿಯಲ್ಲಿ ನಡೆಯುತ್ತದೆ ಎಂದರು.</p>.<p>ಮಾrfcff ಕೊನೆಯಲ್ಲಿ ಶೇರು ಬಂಡವಾಳ ₹2.21 ಕೊಟಿ, ನಿಧಿಗಳು ₹8.8 ಕೋಟಿ, ಒಟ್ಟು ಬಂಡವಾಳ ₹10.30 ಕೋಟಿ, ಒಟ್ಟು ಠೇವಣಿಗಳು ₹124.20 ಕೋಟಿ ಇದ್ದು, ₹73.64 ಕೋಟಿ ಸಾಲ ವಿತರಿಸಿದೆ. ದುರ್ಬಲ್ ಹರಿಜನ, ಗಿರಿಜನ ವರ್ಗದವರಿಗೆ ಶೇ 17.63 ರಷ್ಟು ಸಾಲ ಮತ್ತು ಎಂಎಸ್ಎಂಇ ವರ್ಗದವರಿಗೆ ₹14.11 ಕೋಟಿ ಸಾಲ ನೀಡುವ ಮೂಲಕ ಸಮಾಜದ ಎಲ್ಲ ಜನರನ್ನು ಪರಿಗಣಿಸಲಾಗಿದೆ ಎಂದರು.</p>.<p>ಬ್ಯಾಂಕ್ವು ನಿವ್ವಳ ಶೇ 2.04 ಎನ್ಪಿಎ ಮತ್ತು ಕಟಬಾಕಿ ಪ್ರಮಾಣ ಶೇ 2.37ರಷ್ಟು ಮತ್ತು ಸಿಆರ್ಎಆರ್ ಪ್ರಮಾಣವು ಶೇ 12.82ರಷ್ಟು ಇರುವುದು ಬ್ಯಾಂಕ್ನ ಭದ್ರತೆಯ ದ್ಯೋತಕವಾಗಿದೆ. ಮುಂದಿನ ದಿನಗಳಲ್ಲಿ ಯಪಿಐ ಮತ್ತು ಐಎಂಪಿಎಸ್ ಪ್ರಾರಂಭಿಸುತ್ತೇವೆ ಎಂದರು.</p>.<p>ಲೆಕ್ಕಪರಿಶೋಧಕ ಸೈದಪ್ಪ ಗದಾಡಿ ಮಾತನಾಡಿದರು. ಬ್ಯಾಂಕ್ನ ಉಪಾಧ್ಯಕ್ಷ ನವೀನ ಬಡಗನ್ನವರ, ರಾಮದುರ್ಗ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಶ್ರೀಧರ ಪತ್ತೆಪೂರ, ಸಿ.ಬಿ. ನಿರ್ವಾಣಿ, ಮುಗಳಖೋಡ ಶಾಖೆಯ ಉಪಾಧ್ಯಕ್ಷ ಬಸವರಾಜ ತೇರದಾಳ ಇದ್ದರು.</p>.<p>ಚಿದಾನಂದ ಢವಳೇಶ್ವರ ಸ್ವಾಗತಿಸಿದರು, ಪ್ರಧಾನ ವ್ಯವಸ್ಥಾಪಕ ವರದಿ ವಾಚಿಸಿದರು. ಮಹೇಶ ಮಡಿವಾಳರ ನಿರೂಪಿಸಿದರು. ಶಿವಾನಂದ ಹಿರೇಮಠ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡಲಗಿ:</strong> ‘ಮೂಡಲಗಿ ಕೋ ಆಪರೇಟಿವ್ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ ₹70.22 ಲಕ್ಷ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ’ ಎಂದು ಬ್ಯಾಂಕ್ ಅಧ್ಯಕ್ಷ ಸುಭಾಷ ಜಿ. ಢವಳೇಶ್ವರ ಹೇಳಿದರು.</p>.<p>ಇಲ್ಲಿಯ ದಿ. ಮೂಡಲಗಿಯ ಕೋ ಆಪರೇಟಿವ್ ಬ್ಯಾಂಕ್ನ 74ನೇ ವರ್ಷದ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕ್ ಆರ್ಬಿಐ ನಿರ್ದೇಶನ ಮತ್ತು ಮಾರ್ಗಸೂಚಿಯಲ್ಲಿ ನಡೆಯುತ್ತದೆ ಎಂದರು.</p>.<p>ಮಾrfcff ಕೊನೆಯಲ್ಲಿ ಶೇರು ಬಂಡವಾಳ ₹2.21 ಕೊಟಿ, ನಿಧಿಗಳು ₹8.8 ಕೋಟಿ, ಒಟ್ಟು ಬಂಡವಾಳ ₹10.30 ಕೋಟಿ, ಒಟ್ಟು ಠೇವಣಿಗಳು ₹124.20 ಕೋಟಿ ಇದ್ದು, ₹73.64 ಕೋಟಿ ಸಾಲ ವಿತರಿಸಿದೆ. ದುರ್ಬಲ್ ಹರಿಜನ, ಗಿರಿಜನ ವರ್ಗದವರಿಗೆ ಶೇ 17.63 ರಷ್ಟು ಸಾಲ ಮತ್ತು ಎಂಎಸ್ಎಂಇ ವರ್ಗದವರಿಗೆ ₹14.11 ಕೋಟಿ ಸಾಲ ನೀಡುವ ಮೂಲಕ ಸಮಾಜದ ಎಲ್ಲ ಜನರನ್ನು ಪರಿಗಣಿಸಲಾಗಿದೆ ಎಂದರು.</p>.<p>ಬ್ಯಾಂಕ್ವು ನಿವ್ವಳ ಶೇ 2.04 ಎನ್ಪಿಎ ಮತ್ತು ಕಟಬಾಕಿ ಪ್ರಮಾಣ ಶೇ 2.37ರಷ್ಟು ಮತ್ತು ಸಿಆರ್ಎಆರ್ ಪ್ರಮಾಣವು ಶೇ 12.82ರಷ್ಟು ಇರುವುದು ಬ್ಯಾಂಕ್ನ ಭದ್ರತೆಯ ದ್ಯೋತಕವಾಗಿದೆ. ಮುಂದಿನ ದಿನಗಳಲ್ಲಿ ಯಪಿಐ ಮತ್ತು ಐಎಂಪಿಎಸ್ ಪ್ರಾರಂಭಿಸುತ್ತೇವೆ ಎಂದರು.</p>.<p>ಲೆಕ್ಕಪರಿಶೋಧಕ ಸೈದಪ್ಪ ಗದಾಡಿ ಮಾತನಾಡಿದರು. ಬ್ಯಾಂಕ್ನ ಉಪಾಧ್ಯಕ್ಷ ನವೀನ ಬಡಗನ್ನವರ, ರಾಮದುರ್ಗ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಶ್ರೀಧರ ಪತ್ತೆಪೂರ, ಸಿ.ಬಿ. ನಿರ್ವಾಣಿ, ಮುಗಳಖೋಡ ಶಾಖೆಯ ಉಪಾಧ್ಯಕ್ಷ ಬಸವರಾಜ ತೇರದಾಳ ಇದ್ದರು.</p>.<p>ಚಿದಾನಂದ ಢವಳೇಶ್ವರ ಸ್ವಾಗತಿಸಿದರು, ಪ್ರಧಾನ ವ್ಯವಸ್ಥಾಪಕ ವರದಿ ವಾಚಿಸಿದರು. ಮಹೇಶ ಮಡಿವಾಳರ ನಿರೂಪಿಸಿದರು. ಶಿವಾನಂದ ಹಿರೇಮಠ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>