ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿರೋಧಕ್ಕೂ ಜಗ್ಗದ ಕೊಳವೆ ಸದ್ದು

ಮಳೆ ಮಧ್ಯೆಯೂ ಭೂಗರ್ಭ ಜಲ ವಿದ್ಯುತ್ ಯೋಜನೆಗೆ ಸಮೀಕ್ಷೆ
Last Updated 3 ಜೂನ್ 2020, 1:42 IST
ಅಕ್ಷರ ಗಾತ್ರ

ಶಿವಮೊಗ್ಗ: ಪರಿಸರವಾದಿಗಳ ತೀವ್ರ ವಿರೋಧವನ್ನೂ ಲೆಕ್ಕಿಸದೆ ಮಳೆಯ ಮಧ್ಯೆಯೇಶರಾವತಿ ಭೂಗರ್ಭ ಜಲವಿದ್ಯುತ್ ಯೋಜನೆಯ ಸಮೀಕ್ಷೆ ಕಾರ್ಯಭರದಿಂದ ಸಾಗಿದೆ.

ಕೊರೊನಾ ಕಾರಣಕ್ಕಾಗಿ ವಿವಿಧ ಪರಿಸರ ಸಂಘಟನೆಯವರುಗುಂಪುಗೂಡಿ ಪ್ರತಿಭಟನೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ. ಅದಕ್ಕಾಗಿ ಪತ್ರ ಚಳವಳಿ, ಸರ್ಕಾರಕ್ಕೆ ಮನವಿ ಸಲ್ಲಿಕೆ, ಸಾಮಾಜಿಕ ಜಾಲತಾಣಗಳ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ. ಭೌತಿಕ ಪ್ರತಿರೋಧ ಇಲ್ಲದ ಕಾರಣಕ್ಕೆ ತಡೆ ಇಲ್ಲದೇ ಸಮೀಕ್ಷಾ ಕಾರ್ಯ ಮುಂದುವರಿದಿದೆ.

ಲಾರಿಗಳು ಆಯಕಟ್ಟಿನಜಾಗಗಳಲ್ಲಿ ಯಂತ್ರಗಳನ್ನು ಇಳಿಸಿವೆ. ಕಾರ್ಮಿಕರು ದಟ್ಟ ಕಾನನದ ಒಳಗೆ ಯಂತ್ರಗಳನ್ನು ಹೊತ್ತು ಸಾಗುತ್ತಿದ್ದಾರೆ.ಶರಾವತಿ ನದಿ ಕೊಳ್ಳದ ಸೂಕ್ಷ್ಮ ಜೀವ ಪರಿಸರದ ಸಿಂಗಳೀಕ ಸಂರಕ್ಷಣಾ ವಲಯದಲ್ಲೂ ಭೂಗರ್ಭದಲ್ಲಿ ಅರ್ಧ ಕಿ.ಮೀ. ರಂಧ್ರಗಳನ್ನು ಕೊರೆಯಲಾಗುತ್ತಿದೆ. ಯಂತ್ರಗಳ ಸದ್ದಿಗೆ ಪ್ರಾಣಿ, ಪಕ್ಷಿಗಳು ಬೆಚ್ಚಿವೆ.

ಜೋಗ ಜಲಪಾತದ ಸಮೀಪ ದಟ್ಟ ಅರಣ್ಯದ ತಲಕಳಲೆ, ಗೇರುಸೊಪ್ಪಜಲಾಶಯಗಳ ಮಧ್ಯೆ800 ಎಕರೆ ಅರಣ್ಯ ಪ್ರದೇಶದಲ್ಲಿ ನೆಲಮಟ್ಟದಿಂದ ಸುಮಾರು 300 ಅಡಿ ಆಳದಲ್ಲಿ ₹ 6ಸಾವಿರ ಕೋಟಿ ವೆಚ್ಚದ ಜಲ ವಿದ್ಯುದಾಗಾರ ನಿರ್ಮಾಣಕ್ಕಾಗಿಸಮೀಕ್ಷೆನಡೆಯುತ್ತಿದೆ. ಪ್ರಸ್ತುತ ಮಣ್ಣಿನ ಪರೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ.

ವಿದೇಶದಲ್ಲಿ ಹುಲಿಯೊಂದಕ್ಕೆ ಕೊರೊನಾ ಸೋಂಕು ದೃಢಪಟ್ಟ ನಂತರ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಮೃಗಾಲಯ, ಅರಣ್ಯ ಪ್ರದೇಶದ ಒಳಗೆ ಸುರಕ್ಷತಾ ಕ್ರಮ ಕೈಗೊಳ್ಳಲು ಸೂಚಿಸಿದೆ. ಅನಗತ್ಯವಾಗಿ ಮಾನವರು ಅರಣ್ಯ ಪ್ರವೇಶಿಸದಂತೆ ತಡೆಯಲುರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಶರಾವತಿ ಕೊಳ್ಳ ಹುಲಿ ಸಂರಕ್ಷಿತ ಅಭಯಾರಣ್ಯ. ಇಂತಹಪ್ರದೇಶದಲ್ಲಿಕಾರ್ಮಿಕರಿಗೆ ಅರಣ್ಯಪ್ರವೇಶಿಸಲು ಅರಣ್ಯ ಇಲಾಖೆಯೇ ಅನುಮತಿ ನೀಡಿರುವುದು ಆತಂಕ ಮೂಡಿಸಿದೆ.

*
ಪ್ರಾಣಿಗಳ ಹಿತ ದೃಷ್ಟಿಯಿಂದ ನಾವು ಅರಣ್ಯ ಪ್ರವೇಶಿಸಿಲ್ಲ. ಇದನ್ನು ಸರ್ಕಾರ ಹೋರಾಟಗಾರರ ದೌರ್ಬಲ್ಯ ಎಂದು ಪರಿಗಣಿಸಬಾರದು
–ಅಖಿಲೇಶ್ ಚಿಪ್ಪಳಿ, ಪರಿಸರ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT