<p><strong>ಬೆಳಗಾವಿ</strong>: ಬೆಳಗಾವಿ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಲಪ್ರಭಾ ಹಾಗೂ ಘಟಪ್ರಭಾ ನದಿ ಪಾತ್ರದಲ್ಲಿ ಒಟ್ಟು 777 ಎಕರೆ ವಿಸ್ತೀರ್ಣದ ಭೂಮಿ ಒತ್ತುವರಿಯಾಗಿದೆ.</p>.<p>ಇದನ್ನು ತೆರವುಗೊಳಿಸಬೇಕು ಎಂದು ಸರ್ಕಾರಕ್ಕೆ ಮೂರು ವರ್ಷಗಳ ಹಿಂದೆ ವರದಿ ಸಲ್ಲಿಕೆ ಆಗಿದ್ದರೂ ನಿರೀಕ್ಷಿತ ಪ್ರಗತಿ ಆಗಿಲ್ಲ. ಪರಿಣಾಮವಾಗಿ ಈ ಮೂರು ಜಿಲ್ಲೆಗಳಲ್ಲಿ ಪ್ರತಿ ವರ್ಷವೂ ಪ್ರವಾಹ ಸ್ಥಿತಿ ಉಂಟಾಗುತ್ತದೆ. </p>.<p>2019ರಲ್ಲಿ ಭೀಕರ ಪ್ರವಾಹ ಉಂಟಾದಾಗ ಆಯಾ ನದಿಗಳ ಪಾತ್ರದಲ್ಲಿ ಆಗಿರುವ ಒತ್ತುವರಿಯೇ ಕಾರಣ ಎಂಬ ಮಾತು ಕೇಳಿ ಬಂದಿತ್ತು. ಭೂ ದಾಖಲೆಗಳ ಇಲಾಖೆ 2021–22ನೇ ಸಾಲಿನಲ್ಲಿ ಸಮೀಕ್ಷೆ ನಡೆಸಿ, 2022ರ ಸೆಪ್ಟೆಂಬರ್ 8ರಂದು ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಗೆ ವರದಿಯನ್ನು ಸಲ್ಲಿಸಿತ್ತು.</p>.<p>ಒತ್ತುವರಿ ತೆರವು ಜೊತೆಗೆ, ಆ ಜಾಗದ ಸಂರಕ್ಷಣೆಗೆ ತಡೆಗೋಡೆ ನಿರ್ಮಾಣ, ಸಸಿಗಳನ್ನು ನೆಡುವುದು, ಕಲ್ಲುಗಳನ್ನು ಇರಿಸುವುದು, ಟ್ರೆಂಚಿಂಗ್ ಮತ್ತಿತರ ಕಾಮಗಾರಿ ಕೈಗೊಳ್ಳಲು ರಾಜ್ಯ ಸರ್ಕಾರ ₹2.59 ಕೋಟಿ ಅನುದಾನ ಬಿಡುಗಡೆಗೊಳಿಸಿತ್ತು. ಈ ಪೈಕಿ ₹55.87 ಲಕ್ಷ ಖರ್ಚು ಆಗಿದೆ. </p>.<p>ಉಳಿದ ಮೊತ್ತದಲ್ಲಿ ಬಾಗಲಕೋಟೆ ಜಿಲ್ಲಾಧಿಕಾರಿ ಖಾತೆಗೆ ₹1 ಕೋಟಿ, ಬೆಳಗಾವಿ ಜಿಲ್ಲಾಧಿಕಾರಿಗೆ ₹63.59 ಲಕ್ಷ, ಗದಗ ಜಿಲ್ಲಾಧಿಕಾರಿಗೆ ₹40 ಲಕ್ಷ ಕೊಡಲಾಗಿದೆ. ಹಾಗಿದ್ದರೂ ಒತ್ತುವರಿ ಸಮಸ್ಯೆ ಬಗೆಹರಿದಿಲ್ಲ.</p>.<p>ಎಲ್ಲೆಲ್ಲಿ ಎಷ್ಟು ಒತ್ತುವರಿ?: ಬೆಳಗಾವಿ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳಲ್ಲಿ ಒಟ್ಟು 4,593 ಸರ್ವೆ ಸಂಖ್ಯೆಗಳ ಅಳತೆಯಾಗಿದ್ದು, 659 ಸರ್ವೆ ಸಂಖ್ಯೆಗಳಲ್ಲಿ ಅತಿಕ್ರಮಣವಾಗಿದೆ.</p>.<p>ಮಲಪ್ರಭಾ ನದಿಪಾತ್ರದಲ್ಲಿ 609 ಎಕರೆ ಮತ್ತು ಘಟಪ್ರಭಾ ನದಿಪಾತ್ರದಲ್ಲಿ 168 ಎಕರೆ ಒತ್ತುವರಿ ಆಗಿರುವುದು ಕಂಡು ಬಂದಿದೆ. ಈ ಪೈಕಿ ಬೆಳಗಾವಿ ಜಿಲ್ಲೆಯಲ್ಲಿ ಎರಡೂ ನದಿಗಳ ಪಾತ್ರದಲ್ಲಿ 208 ಎಕರೆ ಭೂಮಿ ಒತ್ತುವರಿಯಾಗಿದೆ. ಹಲವೆಡೆ ರೈತರೇ ನದಿಪಾತ್ರ ಒತ್ತುವರಿ ಮಾಡಿ, ಕೃಷಿ ಚಟುವಟಿಕೆ ಕೈಗೊಂಡಿದ್ದಾರೆ.</p>.<p>ನದಿ ಹರಿವಿನ ದಿಕ್ಕೇ ಬದಲು: ಒತ್ತುವರಿ ಪರಿಣಾಮ, ಎರಡೂ ನದಿಗಳ ಹರಿಯುವ ಮಾರ್ಗಗಳೇ ಬದಲಾಗಿವೆ. ಅಕ್ಕಪಕ್ಕದ ಹೊಲಗಳು ಮತ್ತು ಗ್ರಾಮಗಳಿಗೆ ಅಪಾರ ನೀರು ನುಗ್ಗಿ ಹಾನಿಯಾಗುತ್ತಿದೆ.</p>.<p>ನದಿಗಳ ಹರಿವಿನ ಮಾರ್ಗ ಬದಲಾದ ಕಾರಣ, 1 ಸಾವಿರ ರೈತರಿಗೆ ಸೇರಿದ 1,363 ಎಕರೆ ಜಮೀನು ವ್ಯಾಪ್ತಿಯಲ್ಲಿ ಎರಡೂ ನದಿಗಳು ಹರಿಯುತ್ತಿವೆ. ಕೆಲವೆಡೆ ನದಿಪಾತ್ರ ಹಳ್ಳದಂತೆ ಗೋಚರಿಸುತ್ತಿದೆ.</p><p>–––––</p>.<p>ಮಲಪ್ರಭಾ ಘಟಪ್ರಭಾ ನದಿ ಪಾತ್ರ ಭೂಮಿ ಒತ್ತುವರಿ ತೆರವಿಗೆ ಅಧಿಕಾರಿಗಳ ಸಭೆ ನಡೆಸಲಿದ್ದು ಸಂರಕ್ಷಣೆಗೆ ಕ್ರಮ ವಹಿಸುವೆ</p><p>–ಜಾನಕಿ ಕೆ.ಎಂ. ಪ್ರಾದೇಶಿಕ ಆಯುಕ್ತೆ ಬೆಳಗಾವಿ</p>.<p>ಮಳೆಗಾಲ ಮುಗಿದ ತಕ್ಷಣವೇ ಒತ್ತುವರಿ ತೆರವಿಗೆ ಕ್ರಮ ವಹಿಸಲಾಗುವುದು. ಅಗತ್ಯ ಮಾಹಿತಿ ಪಡೆಯಲಾಗುವುದು</p><p>–ಮೊಹಮ್ಮದ್ ರೋಷನ್ ಜಿಲ್ಲಾಧಿಕಾರಿ ಬೆಳಗಾವಿ</p>.<p>ಪ್ರತಿ ಮಳೆಗಾಲದಲ್ಲಿ ನಮ್ಮೂರಿಗೆ ಮತ್ತು ಜಮೀನಿಗೆ ಘಟಪ್ರಭಾ ನದಿ ನೀರು ನುಗ್ಗಿ ಹಾನಿಯಾಗುತ್ತಿದೆ. ಇದನ್ನು ತಡೆಯಲು ಒತ್ತುವರಿ ತೆರವುಗೊಳಿಸಬೇಕು</p><p>–ಜಂಬು ಚಿಕ್ಕೋಡಿ ಗ್ರಾಮಸ್ಥ ಹುಣಶ್ಯಾಳ ಪಿ.ವೈ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಬೆಳಗಾವಿ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಲಪ್ರಭಾ ಹಾಗೂ ಘಟಪ್ರಭಾ ನದಿ ಪಾತ್ರದಲ್ಲಿ ಒಟ್ಟು 777 ಎಕರೆ ವಿಸ್ತೀರ್ಣದ ಭೂಮಿ ಒತ್ತುವರಿಯಾಗಿದೆ.</p>.<p>ಇದನ್ನು ತೆರವುಗೊಳಿಸಬೇಕು ಎಂದು ಸರ್ಕಾರಕ್ಕೆ ಮೂರು ವರ್ಷಗಳ ಹಿಂದೆ ವರದಿ ಸಲ್ಲಿಕೆ ಆಗಿದ್ದರೂ ನಿರೀಕ್ಷಿತ ಪ್ರಗತಿ ಆಗಿಲ್ಲ. ಪರಿಣಾಮವಾಗಿ ಈ ಮೂರು ಜಿಲ್ಲೆಗಳಲ್ಲಿ ಪ್ರತಿ ವರ್ಷವೂ ಪ್ರವಾಹ ಸ್ಥಿತಿ ಉಂಟಾಗುತ್ತದೆ. </p>.<p>2019ರಲ್ಲಿ ಭೀಕರ ಪ್ರವಾಹ ಉಂಟಾದಾಗ ಆಯಾ ನದಿಗಳ ಪಾತ್ರದಲ್ಲಿ ಆಗಿರುವ ಒತ್ತುವರಿಯೇ ಕಾರಣ ಎಂಬ ಮಾತು ಕೇಳಿ ಬಂದಿತ್ತು. ಭೂ ದಾಖಲೆಗಳ ಇಲಾಖೆ 2021–22ನೇ ಸಾಲಿನಲ್ಲಿ ಸಮೀಕ್ಷೆ ನಡೆಸಿ, 2022ರ ಸೆಪ್ಟೆಂಬರ್ 8ರಂದು ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಗೆ ವರದಿಯನ್ನು ಸಲ್ಲಿಸಿತ್ತು.</p>.<p>ಒತ್ತುವರಿ ತೆರವು ಜೊತೆಗೆ, ಆ ಜಾಗದ ಸಂರಕ್ಷಣೆಗೆ ತಡೆಗೋಡೆ ನಿರ್ಮಾಣ, ಸಸಿಗಳನ್ನು ನೆಡುವುದು, ಕಲ್ಲುಗಳನ್ನು ಇರಿಸುವುದು, ಟ್ರೆಂಚಿಂಗ್ ಮತ್ತಿತರ ಕಾಮಗಾರಿ ಕೈಗೊಳ್ಳಲು ರಾಜ್ಯ ಸರ್ಕಾರ ₹2.59 ಕೋಟಿ ಅನುದಾನ ಬಿಡುಗಡೆಗೊಳಿಸಿತ್ತು. ಈ ಪೈಕಿ ₹55.87 ಲಕ್ಷ ಖರ್ಚು ಆಗಿದೆ. </p>.<p>ಉಳಿದ ಮೊತ್ತದಲ್ಲಿ ಬಾಗಲಕೋಟೆ ಜಿಲ್ಲಾಧಿಕಾರಿ ಖಾತೆಗೆ ₹1 ಕೋಟಿ, ಬೆಳಗಾವಿ ಜಿಲ್ಲಾಧಿಕಾರಿಗೆ ₹63.59 ಲಕ್ಷ, ಗದಗ ಜಿಲ್ಲಾಧಿಕಾರಿಗೆ ₹40 ಲಕ್ಷ ಕೊಡಲಾಗಿದೆ. ಹಾಗಿದ್ದರೂ ಒತ್ತುವರಿ ಸಮಸ್ಯೆ ಬಗೆಹರಿದಿಲ್ಲ.</p>.<p>ಎಲ್ಲೆಲ್ಲಿ ಎಷ್ಟು ಒತ್ತುವರಿ?: ಬೆಳಗಾವಿ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳಲ್ಲಿ ಒಟ್ಟು 4,593 ಸರ್ವೆ ಸಂಖ್ಯೆಗಳ ಅಳತೆಯಾಗಿದ್ದು, 659 ಸರ್ವೆ ಸಂಖ್ಯೆಗಳಲ್ಲಿ ಅತಿಕ್ರಮಣವಾಗಿದೆ.</p>.<p>ಮಲಪ್ರಭಾ ನದಿಪಾತ್ರದಲ್ಲಿ 609 ಎಕರೆ ಮತ್ತು ಘಟಪ್ರಭಾ ನದಿಪಾತ್ರದಲ್ಲಿ 168 ಎಕರೆ ಒತ್ತುವರಿ ಆಗಿರುವುದು ಕಂಡು ಬಂದಿದೆ. ಈ ಪೈಕಿ ಬೆಳಗಾವಿ ಜಿಲ್ಲೆಯಲ್ಲಿ ಎರಡೂ ನದಿಗಳ ಪಾತ್ರದಲ್ಲಿ 208 ಎಕರೆ ಭೂಮಿ ಒತ್ತುವರಿಯಾಗಿದೆ. ಹಲವೆಡೆ ರೈತರೇ ನದಿಪಾತ್ರ ಒತ್ತುವರಿ ಮಾಡಿ, ಕೃಷಿ ಚಟುವಟಿಕೆ ಕೈಗೊಂಡಿದ್ದಾರೆ.</p>.<p>ನದಿ ಹರಿವಿನ ದಿಕ್ಕೇ ಬದಲು: ಒತ್ತುವರಿ ಪರಿಣಾಮ, ಎರಡೂ ನದಿಗಳ ಹರಿಯುವ ಮಾರ್ಗಗಳೇ ಬದಲಾಗಿವೆ. ಅಕ್ಕಪಕ್ಕದ ಹೊಲಗಳು ಮತ್ತು ಗ್ರಾಮಗಳಿಗೆ ಅಪಾರ ನೀರು ನುಗ್ಗಿ ಹಾನಿಯಾಗುತ್ತಿದೆ.</p>.<p>ನದಿಗಳ ಹರಿವಿನ ಮಾರ್ಗ ಬದಲಾದ ಕಾರಣ, 1 ಸಾವಿರ ರೈತರಿಗೆ ಸೇರಿದ 1,363 ಎಕರೆ ಜಮೀನು ವ್ಯಾಪ್ತಿಯಲ್ಲಿ ಎರಡೂ ನದಿಗಳು ಹರಿಯುತ್ತಿವೆ. ಕೆಲವೆಡೆ ನದಿಪಾತ್ರ ಹಳ್ಳದಂತೆ ಗೋಚರಿಸುತ್ತಿದೆ.</p><p>–––––</p>.<p>ಮಲಪ್ರಭಾ ಘಟಪ್ರಭಾ ನದಿ ಪಾತ್ರ ಭೂಮಿ ಒತ್ತುವರಿ ತೆರವಿಗೆ ಅಧಿಕಾರಿಗಳ ಸಭೆ ನಡೆಸಲಿದ್ದು ಸಂರಕ್ಷಣೆಗೆ ಕ್ರಮ ವಹಿಸುವೆ</p><p>–ಜಾನಕಿ ಕೆ.ಎಂ. ಪ್ರಾದೇಶಿಕ ಆಯುಕ್ತೆ ಬೆಳಗಾವಿ</p>.<p>ಮಳೆಗಾಲ ಮುಗಿದ ತಕ್ಷಣವೇ ಒತ್ತುವರಿ ತೆರವಿಗೆ ಕ್ರಮ ವಹಿಸಲಾಗುವುದು. ಅಗತ್ಯ ಮಾಹಿತಿ ಪಡೆಯಲಾಗುವುದು</p><p>–ಮೊಹಮ್ಮದ್ ರೋಷನ್ ಜಿಲ್ಲಾಧಿಕಾರಿ ಬೆಳಗಾವಿ</p>.<p>ಪ್ರತಿ ಮಳೆಗಾಲದಲ್ಲಿ ನಮ್ಮೂರಿಗೆ ಮತ್ತು ಜಮೀನಿಗೆ ಘಟಪ್ರಭಾ ನದಿ ನೀರು ನುಗ್ಗಿ ಹಾನಿಯಾಗುತ್ತಿದೆ. ಇದನ್ನು ತಡೆಯಲು ಒತ್ತುವರಿ ತೆರವುಗೊಳಿಸಬೇಕು</p><p>–ಜಂಬು ಚಿಕ್ಕೋಡಿ ಗ್ರಾಮಸ್ಥ ಹುಣಶ್ಯಾಳ ಪಿ.ವೈ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>