ಬಿಜೆಪಿಯ ಮಹಾಂತೇಶ ಕವಟಗಿಮಠ, ಕಾಂಗ್ರೆಸ್ನ ಚನ್ನರಾಜ ಹಟ್ಟಿಹೊಳಿ, ಆಮ್ ಆದ್ಮಿ ಪಕ್ಷದ ಶಂಕರ ಹೆಗಡೆ, ಪಕ್ಷೇತರರಾದ ಅಶೋಕ ಹಣಜಿ, ಕಲ್ಮೇಶ ಗಾಣಗಿ, ಜಗದೀಶ ಕವಟಗಿಮಠ, ಲಖನ್ ಜಾರಕಿಹೊಳಿ, ಶಂಕರ ಕುಡಸೋಮನ್ನವರ ಹಾಗೂ ಸಂಗಮೇಶ ಚಿಕ್ಕನರಗುಂದ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ. ಪಕ್ಷೇತರ ಅಭ್ಯರ್ಥಿ ನಾಗಪ್ಪ ಕಳಸನ್ನವರ ಅವರ ನಾಮಪತ್ರ ತಿರಸ್ಕೃತಿಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ್ ತಿಳಿಸಿದ್ದಾರೆ.