ತಾಲ್ಲೂಕಿನ ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರ ಕ್ಯಾಂಪ್ನಲ್ಲಿ ಕಳೆದ ತಿಂಗಳು 30ರಂದು ವಿಶ್ವನಾಥ ರಾಜು (70) ನಿಧನರಾಗಿದ್ದರು. ಅದೇ ದಿನ ಕೋತಿಯು ಮೃತರ ಪಾರ್ಥಿವ ಶರೀರದ ಬಳಿ ಬಂದು ತಲೆ ಮೇಲಿನ ಹೊದಿಕೆ ತೆಗೆದು, ವ್ಯಕ್ತಿ ಮುಖದ ಮೇಲೆ ತಲೆ ಇಟ್ಟು ಮರುಗಿತ್ತು. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿತ್ತು.ಇದಾದ 9ದಿನಗಳ ನಂತರ ತುಂಗಭದ್ರಾ ನದಿ ಬಳಿ ಮೃತರ ಉತ್ತರಾದಿ ಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಇದೇ ಕೋತಿ ಭಾಗವಹಿಸಿ ಪುರೋಹಿತರ ತೊಡೆ ಮೇಲೆ ಕ್ಷಣ ಕಾಲ ಕುಳಿತಿದೆ. ಬಳಿಕ ಸ್ವಲ್ಪ ಪಾಯಸ ಸೇವಿಸಿ ಅಲ್ಲಿಂದ ಹೊರಟು ಹೋಯಿತು. ಇವೆಲ್ಲ ದೃಶ್ಯಗಳು ಸೆರೆಯಾಗಿದ್ದು, ಎಲ್ಲೆಡೆ ಹರಿದಾಡಿವೆ.