ಮಲ್ಲತ್ತಹಳ್ಳಿಯಲ್ಲಿ ಇರುವ ಅಂಬೇಡ್ಕರ್ ಕಾಲೇಜ್ ಆಫ್ ಟೆಕ್ನಾಲಜಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ವೈಮಾನಿಕ ಅಭಿವೃದ್ಧಿ ಸಂಸ್ಥೆ ಮಹಾ ನಿರ್ದೇಶಕ ಡಾ.ಗಿರೀಶ್ ಎಸ್. ದಿಯೋಧರೆ ಮಾತನಾಡಿ, ‘ಪ್ರಸ್ತುತ ದೇಶದಲ್ಲಿ ಎಂಜಿನಿಯರಿಂಗ್ ಕ್ಷೇತ್ರವು ಅಭೂತಪೂರ್ವವಾಗಿ ಅಭಿವೃದ್ಧಿ ಹೊಂದುತ್ತಿದೆ. ಮುಂಬರುವ ದಿನಗಳಲ್ಲಿ ಸಾಂಪ್ರದಾಯಿಕ ಎಂಜಿನಿಯರಿಂಗ್ ವಿಭಾಗಗಳೊಂದಿಗೆ ವೈಮಾನಿಕ, ಬಾಹ್ಯಾಕಾಶ, ಪರಿಸರ, ಗಣಕ ಯಂತ್ರ, ಕೃತಕ ಬುದ್ಧಿಮತ್ತೆಯಂತಹ ಹಲವು ತಾಂತ್ರಿಕ ವಿಷಯಗಳಲ್ಲಿ ದೇಶವು ದಾಪುಗಾಲು ಹಾಕುತ್ತಿದೆ’ ಎಂದು ಹೇಳಿದರು.