<p><strong>ಬೆಂಗಳೂರು:</strong> ದಂಡೆಯಲ್ಲಿ ನಿಂತು ನೋಡಿದರೆ ಈ ಕೆರೆಯಲ್ಲಿ ನೀರೇ ಕಾಣಿಸುವುದಿಲ್ಲ. ಶೇ 70ರಷ್ಟು ಭಾಗವನ್ನು ಪಾಚಿ, ಕಳೆಗಿಡಗಳೇ ಆವರಿಸಿಕೊಂಡಿವೆ. ಮಲಿನಗೊಂಡಿರುವ ಈ ಕೆರೆಯ ನೀರು ದುರ್ನಾತ ಬೀರುತ್ತಿದೆ. ರಾಸಾಯನಿಕಯುಕ್ತ ತ್ಯಾಜ್ಯ ಕೆರೆಯ ಒಡಲನ್ನು ಸೇರಿದ್ದರಿಂದ ನೀರಿನ ಬಣ್ಣವೇ ಬದಲಾಗಿದೆ.</p>.<p>ಬ್ಯಾಟರಾಯನಪುರ ವಾರ್ಡ್ನ ಕೆರೆಯ ದುಸ್ಥಿತಿ ಇದು. ಇದರ ಹೆಸರೇನೋ ‘ಅಮೃತ’ಹಳ್ಳಿ ಕೆರೆ. ಆದರೆ, ಇದರ ಒಡಲಲ್ಲಿರುವುದೆಲ್ಲ ವಿಷಯುಕ್ತ ನೀರು. ಇದರ ದಂಡೆಯ ಬಳಿ ಪ್ಲಾಸ್ಟಿಕ್ ಬಾಟಲಿ, ಚೀಲ, ಕಾಗದ ಮೊದಲಾದ ಕಸ ಕಶ್ಮಲಗಳು ರಾಶಿ ಬಿದ್ದಿವೆ.</p>.<p>‘ಇದರ ನೀರು ಕಲುಷಿತಗೊಂಡಿರುವುದರಿಂದ ಜೀವ ಸಂಕುಲಕ್ಕೂ ಕುತ್ತು ಬಂದಿದೆ. ಮೀನುಗಳು, ಕಪ್ಪೆಗಳು ಸೇರಿದಂತೆ ಜೀವರಾಶಿಗಳು ಸಾವನ್ನಪ್ಪಿವೆ. ವಲಸೆ ಪಕ್ಷಿಗಳ ಪ್ರಮಾಣವೂ ಕಡಿಮೆ ಆಗಿದೆ’ ಎನ್ನುತ್ತಾರೆ ಈ ಜಲಮೂಲದ ಪಕ್ಕದಲ್ಲೇ ಇರುವ ಅಮೃತನಗರದ ನಿವಾಸಿಗಳು.</p>.<p>ಈ ಕೆರೆಯ ನೀರು ಸ್ವಚ್ಛವಾಗಿರಬೇಕು ಎಂಬುದು ಸ್ಥಳೀಯರ ಆಶಯ. ಸ್ಥಳೀಯರ ಒತ್ತಾಯಕ್ಕೆ ಮಣಿದು ಕೊನೆಗೂ ಕೆರೆಯ ಒಡಲಿಗೆ ಕಲುಷಿತ ನೀರು ಸೇರದಂತೆ ತಡೆಯುವ ಪ್ರಯತ್ನ ಸಾಗಿದೆ. ಕೆರೆಗೆ ಕಲುಷಿತ ನೀರು ಹರಿದುಬರುತ್ತಿದ್ದ ಕಾಲುವೆ ಮುಚ್ಚಲಾಗಿದೆ.</p>.<p>‘ಕೊಳಚೆ ನೀರು ಈಗ ಕೆರೆಗೆ ಸೇರುತ್ತಿಲ್ಲ. ಅದರ ಹರಿವಿಗಾಗಿಯೇ ಪ್ರತ್ಯೇಕ ಚರಂಡಿ ನಿರ್ಮಿಸಲಾಗಿದೆ. ಈ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಬಾಕಿ ಕಾಮಗಾರಿಯನ್ನೂ ಶೀಘ್ರವೇ ಪೂರ್ಣಗೊಳಿಸಲಾಗುತ್ತದೆ’ ಎಂದು ಅಮೃತನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದೇವರಾಜ್ಗೌಡ ಹೇಳಿದರು.</p>.<p>‘ಅಮೃತನಗರದ 7ನೇ ಅಡ್ಡರಸ್ತೆಯ ಸಮೀಪ ಸೇತುವೆ ನಿರ್ಮಿಸಲಾಗುತ್ತಿದೆ. ಆ ಕಾಮಗಾರಿ ಪೂರ್ಣಗೊಂಡ ಬಳಿಕ ತೆರವು ಮಾಡುವುದಾಗಿ ಇಲ್ಲಿನ ಪಾಲಿಕೆ ಸದಸ್ಯರು ಭರವಸೆ ನೀಡಿದ್ದಾರೆ. ಬಳಿಕ ಇಲ್ಲಿ ದೋಣಿವಿಹಾರವನ್ನೂ ಆರಂಭಿಸುವ ಚಿಂತನೆ ಇದೆ’ ಎಂದು ಹೇಳಿದರು. ‘ಕೆರೆಯ ಕಳೆಗಳನ್ನು ಸ್ವಚ್ಛ ಮಾಡಿದರೆ ಈ ಪರಿಸರವೂ ಸುಂದರವಾಗಲಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ, ಸುತ್ತಲೂ ಹಣ್ಣಿನ ಗಿಡಗಳನ್ನು ನೆಡಬೇಕು. ಇದು ಪಕ್ಷಿಗಳನ್ನು ಆಕರ್ಷಿಸಲಿದೆ’ ಎಂದು ಸಂಘದ ಉಪಾಧ್ಯಕ್ಷ ಚಂದ್ರಶೇಖರ್ ಹೇಳಿದರು.</p>.<p><strong>‘ಸಿದ್ಧಗೊಳ್ಳುತಿದೆ ಸುಸಜ್ಜಿತ ಉದ್ಯಾನ’</strong></p>.<p>‘ಕೆರೆಯ ಅಂಗಳದಲ್ಲಿ ಸುಸಜ್ಜಿತ ನಡಿಗೆ ಪಥ, ಉದ್ಯಾನ, ಕೆರೆಯ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯ ಶಾಸಕ ಕೃಷ್ಣ ಬೈರೇಗೌಡ ಅವರು 2015ರಲ್ಲಿ ಚಾಲನೆ ನೀಡಿದ್ದರು. ಕುಂಟುತ್ತಾ ಸಾಗಿದ್ದ ಕಾಮಗಾರಿ ಈಗ ಒಂದು ಹಂತಕ್ಕೆ ಬಂದಿದೆ. </p>.<p>ಕೆರೆ ದಂಡೆಯಲ್ಲಿ ಕಳೆ ಗಿಡಗಳು ಬೆಳೆದು ನಡೆಯಲಾಗದ ಪರಿಸ್ಥಿತಿ ಇತ್ತು. ಕಳೆ ತೆಗೆಸಿ ದಂಡೆಗೆ ಹೊಸ ರೂಪ ಕೊಡಲಾಗಿದೆ. ನಡಿಗೆ ಪಥಕ್ಕೆ ಚಪ್ಪಡಿ ಹಾಸುವ ಕೆಲಸ ಮಾತ್ರ ಬಾಕಿಯಿದೆ. ಕಿತ್ತುಹೋಗಿದ್ದ ತಂತಿ ಬೇಲಿ ಸರಿಪಡಿಸಲಾಗಿದೆ. ಪಕ್ಕದಲ್ಲಿ ಉದ್ಯಾನದ ಕಾಮಗಾರಿ ಪೂರ್ಣಗೊಂಡರೆ ಈ ಕೆರೆ ಜನಾಕರ್ಷಣೆಯ ಕೇಂದ್ರವಾಗಲಿದೆ’ ಎಂದು ದೇವರಾಜ್ಗೌಡ ತಿಳಿಸಿದರು.</p>.<p>***</p>.<p><strong>ಅಂಕಿ ಅಂಶ</strong></p>.<p>24 ಎಕರೆ</p>.<p>ಅಮೃತ ಹಳ್ಳಿ ಕೆರೆಯ ವಿಸ್ತೀರ್ಣ</p>.<p>₹ 5.50 ಕೋಟಿ</p>.<p>ಕೆರೆ ಅಭಿವೃದ್ಧಿಗೆ ಮಂಜೂರಾಗಿರುವ ಮೊತ್ತ</p>.<p>***</p>.<p>ಕೆರೆಗೆ ಕಲುಷಿತ ನೀರು ಸೇರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೊಳಚೆನೀರು ಸಂಸ್ಕರಣಾ ಘಟಕ (ಎಸ್ಟಿಪಿ) ನಿರ್ಮಿಸುವ ಚಿಂತನೆ ಇದೆ. ಕೆರೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿ ಬಳಿಕ ಎಸ್ಟಿಪಿ ನಿರ್ಮಿಸುತ್ತೇವೆ</p>.<p><strong>–ಪಿ.ವಿ.ಮಂಜುನಾಥ ಬಾಬು, ಬ್ಯಾಟರಾಯನಪುರ ವಾರ್ಡ್ನ ಪಾಲಿಕೆ ಸದಸ್ಯ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ದಂಡೆಯಲ್ಲಿ ನಿಂತು ನೋಡಿದರೆ ಈ ಕೆರೆಯಲ್ಲಿ ನೀರೇ ಕಾಣಿಸುವುದಿಲ್ಲ. ಶೇ 70ರಷ್ಟು ಭಾಗವನ್ನು ಪಾಚಿ, ಕಳೆಗಿಡಗಳೇ ಆವರಿಸಿಕೊಂಡಿವೆ. ಮಲಿನಗೊಂಡಿರುವ ಈ ಕೆರೆಯ ನೀರು ದುರ್ನಾತ ಬೀರುತ್ತಿದೆ. ರಾಸಾಯನಿಕಯುಕ್ತ ತ್ಯಾಜ್ಯ ಕೆರೆಯ ಒಡಲನ್ನು ಸೇರಿದ್ದರಿಂದ ನೀರಿನ ಬಣ್ಣವೇ ಬದಲಾಗಿದೆ.</p>.<p>ಬ್ಯಾಟರಾಯನಪುರ ವಾರ್ಡ್ನ ಕೆರೆಯ ದುಸ್ಥಿತಿ ಇದು. ಇದರ ಹೆಸರೇನೋ ‘ಅಮೃತ’ಹಳ್ಳಿ ಕೆರೆ. ಆದರೆ, ಇದರ ಒಡಲಲ್ಲಿರುವುದೆಲ್ಲ ವಿಷಯುಕ್ತ ನೀರು. ಇದರ ದಂಡೆಯ ಬಳಿ ಪ್ಲಾಸ್ಟಿಕ್ ಬಾಟಲಿ, ಚೀಲ, ಕಾಗದ ಮೊದಲಾದ ಕಸ ಕಶ್ಮಲಗಳು ರಾಶಿ ಬಿದ್ದಿವೆ.</p>.<p>‘ಇದರ ನೀರು ಕಲುಷಿತಗೊಂಡಿರುವುದರಿಂದ ಜೀವ ಸಂಕುಲಕ್ಕೂ ಕುತ್ತು ಬಂದಿದೆ. ಮೀನುಗಳು, ಕಪ್ಪೆಗಳು ಸೇರಿದಂತೆ ಜೀವರಾಶಿಗಳು ಸಾವನ್ನಪ್ಪಿವೆ. ವಲಸೆ ಪಕ್ಷಿಗಳ ಪ್ರಮಾಣವೂ ಕಡಿಮೆ ಆಗಿದೆ’ ಎನ್ನುತ್ತಾರೆ ಈ ಜಲಮೂಲದ ಪಕ್ಕದಲ್ಲೇ ಇರುವ ಅಮೃತನಗರದ ನಿವಾಸಿಗಳು.</p>.<p>ಈ ಕೆರೆಯ ನೀರು ಸ್ವಚ್ಛವಾಗಿರಬೇಕು ಎಂಬುದು ಸ್ಥಳೀಯರ ಆಶಯ. ಸ್ಥಳೀಯರ ಒತ್ತಾಯಕ್ಕೆ ಮಣಿದು ಕೊನೆಗೂ ಕೆರೆಯ ಒಡಲಿಗೆ ಕಲುಷಿತ ನೀರು ಸೇರದಂತೆ ತಡೆಯುವ ಪ್ರಯತ್ನ ಸಾಗಿದೆ. ಕೆರೆಗೆ ಕಲುಷಿತ ನೀರು ಹರಿದುಬರುತ್ತಿದ್ದ ಕಾಲುವೆ ಮುಚ್ಚಲಾಗಿದೆ.</p>.<p>‘ಕೊಳಚೆ ನೀರು ಈಗ ಕೆರೆಗೆ ಸೇರುತ್ತಿಲ್ಲ. ಅದರ ಹರಿವಿಗಾಗಿಯೇ ಪ್ರತ್ಯೇಕ ಚರಂಡಿ ನಿರ್ಮಿಸಲಾಗಿದೆ. ಈ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಬಾಕಿ ಕಾಮಗಾರಿಯನ್ನೂ ಶೀಘ್ರವೇ ಪೂರ್ಣಗೊಳಿಸಲಾಗುತ್ತದೆ’ ಎಂದು ಅಮೃತನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದೇವರಾಜ್ಗೌಡ ಹೇಳಿದರು.</p>.<p>‘ಅಮೃತನಗರದ 7ನೇ ಅಡ್ಡರಸ್ತೆಯ ಸಮೀಪ ಸೇತುವೆ ನಿರ್ಮಿಸಲಾಗುತ್ತಿದೆ. ಆ ಕಾಮಗಾರಿ ಪೂರ್ಣಗೊಂಡ ಬಳಿಕ ತೆರವು ಮಾಡುವುದಾಗಿ ಇಲ್ಲಿನ ಪಾಲಿಕೆ ಸದಸ್ಯರು ಭರವಸೆ ನೀಡಿದ್ದಾರೆ. ಬಳಿಕ ಇಲ್ಲಿ ದೋಣಿವಿಹಾರವನ್ನೂ ಆರಂಭಿಸುವ ಚಿಂತನೆ ಇದೆ’ ಎಂದು ಹೇಳಿದರು. ‘ಕೆರೆಯ ಕಳೆಗಳನ್ನು ಸ್ವಚ್ಛ ಮಾಡಿದರೆ ಈ ಪರಿಸರವೂ ಸುಂದರವಾಗಲಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ, ಸುತ್ತಲೂ ಹಣ್ಣಿನ ಗಿಡಗಳನ್ನು ನೆಡಬೇಕು. ಇದು ಪಕ್ಷಿಗಳನ್ನು ಆಕರ್ಷಿಸಲಿದೆ’ ಎಂದು ಸಂಘದ ಉಪಾಧ್ಯಕ್ಷ ಚಂದ್ರಶೇಖರ್ ಹೇಳಿದರು.</p>.<p><strong>‘ಸಿದ್ಧಗೊಳ್ಳುತಿದೆ ಸುಸಜ್ಜಿತ ಉದ್ಯಾನ’</strong></p>.<p>‘ಕೆರೆಯ ಅಂಗಳದಲ್ಲಿ ಸುಸಜ್ಜಿತ ನಡಿಗೆ ಪಥ, ಉದ್ಯಾನ, ಕೆರೆಯ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯ ಶಾಸಕ ಕೃಷ್ಣ ಬೈರೇಗೌಡ ಅವರು 2015ರಲ್ಲಿ ಚಾಲನೆ ನೀಡಿದ್ದರು. ಕುಂಟುತ್ತಾ ಸಾಗಿದ್ದ ಕಾಮಗಾರಿ ಈಗ ಒಂದು ಹಂತಕ್ಕೆ ಬಂದಿದೆ. </p>.<p>ಕೆರೆ ದಂಡೆಯಲ್ಲಿ ಕಳೆ ಗಿಡಗಳು ಬೆಳೆದು ನಡೆಯಲಾಗದ ಪರಿಸ್ಥಿತಿ ಇತ್ತು. ಕಳೆ ತೆಗೆಸಿ ದಂಡೆಗೆ ಹೊಸ ರೂಪ ಕೊಡಲಾಗಿದೆ. ನಡಿಗೆ ಪಥಕ್ಕೆ ಚಪ್ಪಡಿ ಹಾಸುವ ಕೆಲಸ ಮಾತ್ರ ಬಾಕಿಯಿದೆ. ಕಿತ್ತುಹೋಗಿದ್ದ ತಂತಿ ಬೇಲಿ ಸರಿಪಡಿಸಲಾಗಿದೆ. ಪಕ್ಕದಲ್ಲಿ ಉದ್ಯಾನದ ಕಾಮಗಾರಿ ಪೂರ್ಣಗೊಂಡರೆ ಈ ಕೆರೆ ಜನಾಕರ್ಷಣೆಯ ಕೇಂದ್ರವಾಗಲಿದೆ’ ಎಂದು ದೇವರಾಜ್ಗೌಡ ತಿಳಿಸಿದರು.</p>.<p>***</p>.<p><strong>ಅಂಕಿ ಅಂಶ</strong></p>.<p>24 ಎಕರೆ</p>.<p>ಅಮೃತ ಹಳ್ಳಿ ಕೆರೆಯ ವಿಸ್ತೀರ್ಣ</p>.<p>₹ 5.50 ಕೋಟಿ</p>.<p>ಕೆರೆ ಅಭಿವೃದ್ಧಿಗೆ ಮಂಜೂರಾಗಿರುವ ಮೊತ್ತ</p>.<p>***</p>.<p>ಕೆರೆಗೆ ಕಲುಷಿತ ನೀರು ಸೇರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೊಳಚೆನೀರು ಸಂಸ್ಕರಣಾ ಘಟಕ (ಎಸ್ಟಿಪಿ) ನಿರ್ಮಿಸುವ ಚಿಂತನೆ ಇದೆ. ಕೆರೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿ ಬಳಿಕ ಎಸ್ಟಿಪಿ ನಿರ್ಮಿಸುತ್ತೇವೆ</p>.<p><strong>–ಪಿ.ವಿ.ಮಂಜುನಾಥ ಬಾಬು, ಬ್ಯಾಟರಾಯನಪುರ ವಾರ್ಡ್ನ ಪಾಲಿಕೆ ಸದಸ್ಯ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>