<p><strong>ಬೆಂಗಳೂರು:</strong> ಒಂದು ಬಾರಿ ಪರಿಹಾರ ಯೋಜನೆ (ಒಟಿಎಸ್) ನವೆಂಬರ್ 30ರಂದು ಮುಕ್ತಾಯವಾಗುತ್ತಿದೆ. ಪ್ರಸಕ್ತ ವರ್ಷದ ಆಸ್ತಿ ತೆರಿಗೆ ಪಾವತಿಯಲ್ಲಿ ವಸತಿಯೇತರ ಆಸ್ತಿಗಳಿಗಿಂತ ವಸತಿ ಆಸ್ತಿಗಳಿಂದಲೇ ಹೆಚ್ಚು ತೆರಿಗೆ ಬಾಕಿ ಉಳಿದಿದೆ.</p><p>ಪ್ರಸಕ್ತ ಆರ್ಥಿಕ ವರ್ಷದಲ್ಲಿ 20.57 ಲಕ್ಷ ಆಸ್ತಿಗಳಿಂದ ತೆರಿಗೆ ಪಾವತಿಯಾಗಬೇಕಿದ್ದು, ₹3,814.68 ಕೋಟಿ ಸಂಗ್ರಹವಾಗಬೇಕಿದೆ. ₹15.45 ಲಕ್ಷ ಆಸ್ತಿ ಗಳಿಂದ ₹3,231 ಕೋಟಿ ಸಂಗ್ರಹ ವಾಗಿದೆ. 5.12 ಲಕ್ಷ ಆಸ್ತಿಗಳಿಂದ ಇನ್ನೂ ₹583.54 ಕೋಟಿ ಬಾಕಿ ಉಳಿದಿದೆ.</p><p>ಆರ್ಥಿಕ ವರ್ಷದಲ್ಲಿ ನವೆಂಬರ್ 28ರವರೆಗೆ ₹3,820.23 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಇದು ದಾಖಲೆಯ ಮೊತ್ತವಾಗಿದ್ದರೂ, ಸುಸ್ತಿದಾರರಿಂದ ಇನ್ನೂ₹365 ಕೋಟಿ ಸಂಗ್ರಹವಾಗಬೇಕಿದೆ. ಒಟಿಎಸ್ ಯೋಜನೆಯಲ್ಲಿ ₹733.61 ಕೋಟಿ ಸಂಗ್ರಹಿಸುವ ಗುರಿಯನ್ನು ಬಿಬಿಎಂಪಿ ಹೊಂದಿತ್ತು. ಆದರೆ, ಈವರೆಗೆ ₹368.14 ಕೋಟಿಯಷ್ಟು ಮೊತ್ತವನ್ನು 1.67 ಲಕ್ಷ ಆಸ್ತಿಗಳ ಮಾಲೀಕರು ಬಾಕಿ ಉಳಿಸಿಕೊಂಡಿದ್ದಾರೆ.</p><p>ಫೆಬ್ರುವರಿಯಲ್ಲಿ ಮೊದಲ ಬಾರಿಗೆ ಜಾರಿಯಾಗಿದ್ದ ಒಟಿಎಸ್ ಯೋಜನೆ ಜುಲೈ 31ರಂದು ಕೊನೆಗೊಂಡಿತ್ತು. ‘ಇನ್ನಷ್ಟು ಕಾಲಾವಕಾಶ ನೀಡಬೇಕು’ ಎಂದು ನಾಗರಿಕರು, ಸಂಘ–ಸಂಸ್ಥೆಗಳು ಮನವಿ ಮಾಡಿಕೊಂಡಿದ್ದವು. ಅದರಂತೆ, ಸರ್ಕಾರ ಒಟಿಎಸ್ ಅವಧಿಯನ್ನು ಸೆಪ್ಟೆಂಬರ್ವರೆಗೆ ವಿಸ್ತರಿಸಿತ್ತು. ಮತ್ತೆ ಗಡುವನ್ನು ಎರಡನೇ ಬಾರಿಗೆ ನವೆಂಬರ್ 30ರವರೆಗೂ ವಿಸ್ತರಿಸಿತ್ತು.</p><p>ಜುಲೈ 31ರ ಅಂತ್ಯಕ್ಕೆ ಒಂದು ಬಾರಿ ಪರಿಹಾರ (ಒಟಿಎಸ್) ಯೋಜನೆಯಡಿ ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದ 1.07 ಲಕ್ಷ ಆಸ್ತಿಗಳ ಮಾಲೀಕರು ಪ್ರಯೋಜನ ಪಡೆದು, ₹217.50 ಕೋಟಿ ಪಾವತಿಸಿದ್ದರು. 6,723 ಆಸ್ತಿಗಳ ತೆರಿಗೆಯ ಪುನರ್ ವಿಮರ್ಶೆಯೂ ಸೇರಿ ಒಟ್ಟು ₹380.83 ಕೋಟಿ ಸಂಗ್ರಹವಾಗಿತ್ತು. 2024ರ ಆಗಸ್ಟ್ 1ರಂತೆ 3,04,810 ಆಸ್ತಿಗಳಿಂದ ₹831.53 ಕೋಟಿ ತೆರಿಗೆ ಹಿಂಬಾಕಿ ಪಾವತಿಯಾಗಬೇಕಿತ್ತು.</p>. <p>ಪ್ರಸಕ್ತ ಆರ್ಥಿಕ ವರ್ಷದ ಆಸ್ತಿ ತೆರಿಗೆಯನ್ನು ಮಾತ್ರ ಬಾಕಿ ಉಳಿಸಿ ಕೊಂಡವರೂ ನ. 30ರ ನಂತರ ತೆರಿಗೆ ಜತೆಗೆ ಬಡ್ಡಿ ಪಾವತಿಸಬೇಕಾಗುತ್ತದೆ.</p><h2>ವಿಸ್ತರಣೆ ಇಲ್ಲ: ಮುನೀಶ್</h2><p>‘ಒಂದು ಬಾರಿ ಪರಿಹಾರ ಯೋಜನೆಯನ್ನು ವಿಸ್ತರಿಸುವುದಿಲ್ಲ. ಈಗಾಗಲೇ ಸಾಕಷ್ಟು ಸಮಯ ನೀಡಲಾಗಿದೆ. ಡಿಸೆಂಬರ್ 1ರಿಂದ ದಂಡ, ಬಡ್ಡಿ ವಿಧಿಸಿ, ಎಲ್ಲ ರೀತಿಯ ಕಾನೂನು ಪ್ರಕ್ರಿಯೆಗಳನ್ನೂ ನಡೆಸಲಾಗತ್ತದೆ’ ಎಂದು ಬಿಬಿಎಪಿ ಕಂದಾಯ ವಿಭಾಗ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಹೇಳಿದರು.</p><p>‘ವಾಣಿಜ್ಯ ಕಟ್ಟಡಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗುತ್ತಿದ್ದು, ಅತಿ ಹೆಚ್ಚು ಬಾಕಿ ಉಳಿಸಿಕೊಂಡ ಕಟ್ಟಡಗಳಿಗೆ ಬೀಗಮುದ್ರೆ ಹಾಕಲಾಗುತ್ತಿದೆ. ಡಿ. 2ರಿಂದ ಈ ಅಭಿಯಾನ ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಒಂದು ಬಾರಿ ಪರಿಹಾರ ಯೋಜನೆ (ಒಟಿಎಸ್) ನವೆಂಬರ್ 30ರಂದು ಮುಕ್ತಾಯವಾಗುತ್ತಿದೆ. ಪ್ರಸಕ್ತ ವರ್ಷದ ಆಸ್ತಿ ತೆರಿಗೆ ಪಾವತಿಯಲ್ಲಿ ವಸತಿಯೇತರ ಆಸ್ತಿಗಳಿಗಿಂತ ವಸತಿ ಆಸ್ತಿಗಳಿಂದಲೇ ಹೆಚ್ಚು ತೆರಿಗೆ ಬಾಕಿ ಉಳಿದಿದೆ.</p><p>ಪ್ರಸಕ್ತ ಆರ್ಥಿಕ ವರ್ಷದಲ್ಲಿ 20.57 ಲಕ್ಷ ಆಸ್ತಿಗಳಿಂದ ತೆರಿಗೆ ಪಾವತಿಯಾಗಬೇಕಿದ್ದು, ₹3,814.68 ಕೋಟಿ ಸಂಗ್ರಹವಾಗಬೇಕಿದೆ. ₹15.45 ಲಕ್ಷ ಆಸ್ತಿ ಗಳಿಂದ ₹3,231 ಕೋಟಿ ಸಂಗ್ರಹ ವಾಗಿದೆ. 5.12 ಲಕ್ಷ ಆಸ್ತಿಗಳಿಂದ ಇನ್ನೂ ₹583.54 ಕೋಟಿ ಬಾಕಿ ಉಳಿದಿದೆ.</p><p>ಆರ್ಥಿಕ ವರ್ಷದಲ್ಲಿ ನವೆಂಬರ್ 28ರವರೆಗೆ ₹3,820.23 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಇದು ದಾಖಲೆಯ ಮೊತ್ತವಾಗಿದ್ದರೂ, ಸುಸ್ತಿದಾರರಿಂದ ಇನ್ನೂ₹365 ಕೋಟಿ ಸಂಗ್ರಹವಾಗಬೇಕಿದೆ. ಒಟಿಎಸ್ ಯೋಜನೆಯಲ್ಲಿ ₹733.61 ಕೋಟಿ ಸಂಗ್ರಹಿಸುವ ಗುರಿಯನ್ನು ಬಿಬಿಎಂಪಿ ಹೊಂದಿತ್ತು. ಆದರೆ, ಈವರೆಗೆ ₹368.14 ಕೋಟಿಯಷ್ಟು ಮೊತ್ತವನ್ನು 1.67 ಲಕ್ಷ ಆಸ್ತಿಗಳ ಮಾಲೀಕರು ಬಾಕಿ ಉಳಿಸಿಕೊಂಡಿದ್ದಾರೆ.</p><p>ಫೆಬ್ರುವರಿಯಲ್ಲಿ ಮೊದಲ ಬಾರಿಗೆ ಜಾರಿಯಾಗಿದ್ದ ಒಟಿಎಸ್ ಯೋಜನೆ ಜುಲೈ 31ರಂದು ಕೊನೆಗೊಂಡಿತ್ತು. ‘ಇನ್ನಷ್ಟು ಕಾಲಾವಕಾಶ ನೀಡಬೇಕು’ ಎಂದು ನಾಗರಿಕರು, ಸಂಘ–ಸಂಸ್ಥೆಗಳು ಮನವಿ ಮಾಡಿಕೊಂಡಿದ್ದವು. ಅದರಂತೆ, ಸರ್ಕಾರ ಒಟಿಎಸ್ ಅವಧಿಯನ್ನು ಸೆಪ್ಟೆಂಬರ್ವರೆಗೆ ವಿಸ್ತರಿಸಿತ್ತು. ಮತ್ತೆ ಗಡುವನ್ನು ಎರಡನೇ ಬಾರಿಗೆ ನವೆಂಬರ್ 30ರವರೆಗೂ ವಿಸ್ತರಿಸಿತ್ತು.</p><p>ಜುಲೈ 31ರ ಅಂತ್ಯಕ್ಕೆ ಒಂದು ಬಾರಿ ಪರಿಹಾರ (ಒಟಿಎಸ್) ಯೋಜನೆಯಡಿ ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದ 1.07 ಲಕ್ಷ ಆಸ್ತಿಗಳ ಮಾಲೀಕರು ಪ್ರಯೋಜನ ಪಡೆದು, ₹217.50 ಕೋಟಿ ಪಾವತಿಸಿದ್ದರು. 6,723 ಆಸ್ತಿಗಳ ತೆರಿಗೆಯ ಪುನರ್ ವಿಮರ್ಶೆಯೂ ಸೇರಿ ಒಟ್ಟು ₹380.83 ಕೋಟಿ ಸಂಗ್ರಹವಾಗಿತ್ತು. 2024ರ ಆಗಸ್ಟ್ 1ರಂತೆ 3,04,810 ಆಸ್ತಿಗಳಿಂದ ₹831.53 ಕೋಟಿ ತೆರಿಗೆ ಹಿಂಬಾಕಿ ಪಾವತಿಯಾಗಬೇಕಿತ್ತು.</p>. <p>ಪ್ರಸಕ್ತ ಆರ್ಥಿಕ ವರ್ಷದ ಆಸ್ತಿ ತೆರಿಗೆಯನ್ನು ಮಾತ್ರ ಬಾಕಿ ಉಳಿಸಿ ಕೊಂಡವರೂ ನ. 30ರ ನಂತರ ತೆರಿಗೆ ಜತೆಗೆ ಬಡ್ಡಿ ಪಾವತಿಸಬೇಕಾಗುತ್ತದೆ.</p><h2>ವಿಸ್ತರಣೆ ಇಲ್ಲ: ಮುನೀಶ್</h2><p>‘ಒಂದು ಬಾರಿ ಪರಿಹಾರ ಯೋಜನೆಯನ್ನು ವಿಸ್ತರಿಸುವುದಿಲ್ಲ. ಈಗಾಗಲೇ ಸಾಕಷ್ಟು ಸಮಯ ನೀಡಲಾಗಿದೆ. ಡಿಸೆಂಬರ್ 1ರಿಂದ ದಂಡ, ಬಡ್ಡಿ ವಿಧಿಸಿ, ಎಲ್ಲ ರೀತಿಯ ಕಾನೂನು ಪ್ರಕ್ರಿಯೆಗಳನ್ನೂ ನಡೆಸಲಾಗತ್ತದೆ’ ಎಂದು ಬಿಬಿಎಪಿ ಕಂದಾಯ ವಿಭಾಗ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಹೇಳಿದರು.</p><p>‘ವಾಣಿಜ್ಯ ಕಟ್ಟಡಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗುತ್ತಿದ್ದು, ಅತಿ ಹೆಚ್ಚು ಬಾಕಿ ಉಳಿಸಿಕೊಂಡ ಕಟ್ಟಡಗಳಿಗೆ ಬೀಗಮುದ್ರೆ ಹಾಕಲಾಗುತ್ತಿದೆ. ಡಿ. 2ರಿಂದ ಈ ಅಭಿಯಾನ ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>