‘ಗುತ್ತಿಗೆದಾರರು ಆರೋಪಿಸಿದಂತೆ, ಇದು ಅವ್ಯವಹಾರವಲ್ಲ, ಗುತ್ತಿಗೆದಾರರ ಅನುಕೂಲಕ್ಕಾಗಿ ಈ ವ್ಯವಸ್ಥೆ ಅಳವಡಿಸಲು ನಾನೇ ಆಸಕ್ತಿ ವಹಿಸಿದ್ದೆ. ಬಿಲ್ ಡಿಸ್ಕೌಂಟಿಂಗ್ ಅವಧಿಯಲ್ಲಿ ಬಿಜೆಪಿ ಸರ್ಕಾರವಿತ್ತು ಎನ್ನುವುದು ಕಾಕತಾಳೀಯ. ಬೇನಾಮಿ ಹೆಸರಿನಲ್ಲಿ ನಡೆಯುವ ಕಾಮಗಾರಿಗಳಿಗೂ ನಮಗೂ ಸಂಬಂಧ ಇಲ್ಲ. ಟೆಂಡರ್ ನಲ್ಲಿ ತಾಂತ್ರಿಕವಾಗಿ ಅರ್ಹರಾದ ಯಾರು ಬೇಕಾದರೂ ಗುತ್ತಿಗೆ ವಹಿಸಿಕೊಳ್ಳಬಹುದು. ಸುಳ್ಳು ಬಿಲ್ ಎನ್ನುವುದು ಮೇಲ್ನೋಟಕ್ಕೆ ಗೊತ್ತಾದರೆ ತಾಂತ್ರಿಕ ಮತ್ತು ಜಾಗೃತ ಕೋಶದ ಎಂಜಿನಿಯರ್ ಮೂಲಕ ಪರಿಶೀಲನೆ ನಡೆಸಲಾಗುವುದು’ ಎಂದರು.