ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮಿತಿ ಉಪಾಧ್ಯಕ್ಷ ಎಂ.ಸುಬ್ಬರಾಯುಡು, ‘ ಬಿಬಿಎಂಪಿ ನೇರ ವೇತನ ಪೌರಕಾರ್ಮಿಕರು, ಲಾರಿ, ಆಟೊ ಚಾಲಕರು, ಸಹಾಯಕರು, ಲೋಡರ್ಸ್ ಹಾಗೂ ಕಸ ಸಂಗ್ರಹಗಾರರನ್ನು ಕೂಡಲೇ ಕಾಯಂ ಮಾಡಬೇಕೆಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.