<p><strong>ಬೆಂಗಳೂರು:</strong> ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಣ, ಹಸಿ ಕಸ ವಿಂಗಡಣೆ ಮತ್ತು ಘನ ತ್ಯಾಜ್ಯ ನಿರ್ವಹಣೆಯಲ್ಲಿ ವಿಫಲರಾಗುವ ಮನೆಯವರು ಮತ್ತು ಇತರರ ಮೇಲೆ ₹2 ಲಕ್ಷದವರೆಗೆ ದಂಡ ವಿಧಿಸುವ ಕರ್ನಾಟಕ ನಗರಪಾಲಿಕೆಗಳ (ಎರಡನೇ ತಿದ್ದುಪಡಿ) ಮಸೂದೆಗೆ ವಿಧಾನಸಭೆ ಒಪ್ಪಿಗೆ ನೀಡಿದೆ.</p>.<p>ಮಸೂದೆ ಮಂಡಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಉದ್ದೇಶ ವಿವರಿಸಿ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪಾದಿಸಿದ ಘನ ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿ ಆಗುತ್ತಿಲ್ಲ ಎಂಬ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿ ಹೈಕೋರ್ಟ್ನಲ್ಲಿ ದಾಖಲಾಗಿದ್ದು, ನ್ಯಾಯಾಲಯ ಈ ಪ್ರಕರಣಗಳನ್ನು ಈಗಲೂ ಆಲಿಸುತ್ತಿದೆ ಎಂದರು.</p>.<p>ಒಣ ಮತ್ತು ಹಸಿ ಕಸವನ್ನು ವಿಂಗಡಿಸಲು ವಿಫಲರಾದ ಮನೆಯವರಿಗೆ ಜುಲ್ಮಾನೆ ವಿಧಿಸಲು 2012 ರಲ್ಲಿ ಹೈಕೋರ್ಟ್ ನಿರ್ದೇಶನ ನೀಡಿದೆ. ಹೀಗಾಗಿ, ಜುಲ್ಮಾನೆ ಹೆಚ್ಚಿಸಲು ಕಾಯ್ದೆಗೆ ತಿದ್ದುಪಡಿ ಮಾಡಿ ಇದನ್ನು ಮಂಡಿಸಿರುವುದಾಗಿ ಅವರು ಹೇಳಿದರು.</p>.<p>‘ಘನತ್ಯಾಜ್ಯ ನಿರ್ವಹಣೆಯ ಯೋಜನೆಗಳನ್ನು ಪಾಲಿಸಲು ವಿಫಲರಾದರೆ ಅಥವಾ ಪಾಲಿಸಲು ಅಡ್ಡಿಪಡಿಸಿದ ಅಪರಾಧ ನಿರೂಪಿತವಾದರೆ ₹ 2 ಲಕ್ಷಗಳವರೆಗೆ ಜುಲ್ಮಾನೆ ವಿಧಿಸಬಹುದು’ ಎಂದು ಮಸೂದೆ ವಿವರಿಸಿದೆ.</p>.<p><strong>'ಯಾರಿಗೆಲ್ಲ ದಂಡ ಅನ್ವಯವಾಗುತ್ತದೆ'</strong></p>.<p>*ಕಸ ಹಾಕುವುದು, ಉಗಿಯುವುದು, ಬಯಲು ಪ್ರದೇಶದಲ್ಲಿ ಮಲ–ಮೂತ್ರ ವಿಸರ್ಜನೆ</p>.<p>*ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕಿಸಿ ಅದನ್ನು<br />ಸಂಗ್ರಹಕಾರನಿಗೆ ನೀಡುವಲ್ಲಿ ವಿಫಲರಾಗುವ ಮನೆ ಮತ್ತು ವಾಣಿಜ್ಯ ಸಂಕೀರ್ಣದವರು</p>.<p>*ರಸ್ತೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಬೀದಿ, ಆಟದ ಮೈದಾನ, ಉದ್ಯಾನವನ ಮತ್ತು ಸಾರ್ವಜನಿಕ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ವಿಫಲರಾಗುವವರು</p>.<p>*ತ್ಯಾಜ್ಯವನ್ನು ನಿಭಾಯಿಸುವ ಮತ್ತು ಸಾಗಿಸುವ ಉದ್ದೇಶಕ್ಕಾಗಿ ಉದ್ಯಾನವನ ತ್ಯಾಜ್ಯ, ಜಡತ್ಯಾಜ್ಯ, ಜೈವಿಕವಾಗಿ ಕೊಳೆಯದ ಮತ್ತು ಜೈವಿಕ ವೈದ್ಯಕೀಯ ತ್ಯಾಜ್ಯಗಳನ್ನು ಸಂಬಂಧಿಸಿದ ನಿಗಮಕ್ಕೆ ನೀಡದೇ ಇರುವುದು</p>.<p>*ಕಸ ಮತ್ತು ಯಾವುದೇ ಘನತ್ಯಾಜ್ಯವನ್ನು ಅನಿಯಮಿತವಾಗಿ ರಾಶಿಗೂಡಿಸುವುದು, ಬೀದಿಗಳಲ್ಲಿ ಹೊಲಸು ಹರಿಯುವುದಕ್ಕೆ ಅವಕಾಶ ನೀಡುವುದು</p>.<p>*ಯುಕ್ತವಲ್ಲದ ಸ್ಥಳದಲ್ಲಿ ಸತ್ತ ಪ್ರಾಣಿಯನ್ನು ಹಾಕುವುದು</p>.<p>*ಕಟ್ಟಡದ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಗುಡ್ಡೆ ಹಾಕುವುದು</p>.<p>ಈ ಎಲ್ಲ ಅಪರಾಧ ಎಸಗಿದವರಿಗೆ ಮೊದಲ ಬಾರಿಗೆ ₹100 ರಿಂದ ₹1000 ದವರೆಗೆ ದಂಡ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ₹2 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಣ, ಹಸಿ ಕಸ ವಿಂಗಡಣೆ ಮತ್ತು ಘನ ತ್ಯಾಜ್ಯ ನಿರ್ವಹಣೆಯಲ್ಲಿ ವಿಫಲರಾಗುವ ಮನೆಯವರು ಮತ್ತು ಇತರರ ಮೇಲೆ ₹2 ಲಕ್ಷದವರೆಗೆ ದಂಡ ವಿಧಿಸುವ ಕರ್ನಾಟಕ ನಗರಪಾಲಿಕೆಗಳ (ಎರಡನೇ ತಿದ್ದುಪಡಿ) ಮಸೂದೆಗೆ ವಿಧಾನಸಭೆ ಒಪ್ಪಿಗೆ ನೀಡಿದೆ.</p>.<p>ಮಸೂದೆ ಮಂಡಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಉದ್ದೇಶ ವಿವರಿಸಿ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪಾದಿಸಿದ ಘನ ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿ ಆಗುತ್ತಿಲ್ಲ ಎಂಬ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿ ಹೈಕೋರ್ಟ್ನಲ್ಲಿ ದಾಖಲಾಗಿದ್ದು, ನ್ಯಾಯಾಲಯ ಈ ಪ್ರಕರಣಗಳನ್ನು ಈಗಲೂ ಆಲಿಸುತ್ತಿದೆ ಎಂದರು.</p>.<p>ಒಣ ಮತ್ತು ಹಸಿ ಕಸವನ್ನು ವಿಂಗಡಿಸಲು ವಿಫಲರಾದ ಮನೆಯವರಿಗೆ ಜುಲ್ಮಾನೆ ವಿಧಿಸಲು 2012 ರಲ್ಲಿ ಹೈಕೋರ್ಟ್ ನಿರ್ದೇಶನ ನೀಡಿದೆ. ಹೀಗಾಗಿ, ಜುಲ್ಮಾನೆ ಹೆಚ್ಚಿಸಲು ಕಾಯ್ದೆಗೆ ತಿದ್ದುಪಡಿ ಮಾಡಿ ಇದನ್ನು ಮಂಡಿಸಿರುವುದಾಗಿ ಅವರು ಹೇಳಿದರು.</p>.<p>‘ಘನತ್ಯಾಜ್ಯ ನಿರ್ವಹಣೆಯ ಯೋಜನೆಗಳನ್ನು ಪಾಲಿಸಲು ವಿಫಲರಾದರೆ ಅಥವಾ ಪಾಲಿಸಲು ಅಡ್ಡಿಪಡಿಸಿದ ಅಪರಾಧ ನಿರೂಪಿತವಾದರೆ ₹ 2 ಲಕ್ಷಗಳವರೆಗೆ ಜುಲ್ಮಾನೆ ವಿಧಿಸಬಹುದು’ ಎಂದು ಮಸೂದೆ ವಿವರಿಸಿದೆ.</p>.<p><strong>'ಯಾರಿಗೆಲ್ಲ ದಂಡ ಅನ್ವಯವಾಗುತ್ತದೆ'</strong></p>.<p>*ಕಸ ಹಾಕುವುದು, ಉಗಿಯುವುದು, ಬಯಲು ಪ್ರದೇಶದಲ್ಲಿ ಮಲ–ಮೂತ್ರ ವಿಸರ್ಜನೆ</p>.<p>*ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕಿಸಿ ಅದನ್ನು<br />ಸಂಗ್ರಹಕಾರನಿಗೆ ನೀಡುವಲ್ಲಿ ವಿಫಲರಾಗುವ ಮನೆ ಮತ್ತು ವಾಣಿಜ್ಯ ಸಂಕೀರ್ಣದವರು</p>.<p>*ರಸ್ತೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಬೀದಿ, ಆಟದ ಮೈದಾನ, ಉದ್ಯಾನವನ ಮತ್ತು ಸಾರ್ವಜನಿಕ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ವಿಫಲರಾಗುವವರು</p>.<p>*ತ್ಯಾಜ್ಯವನ್ನು ನಿಭಾಯಿಸುವ ಮತ್ತು ಸಾಗಿಸುವ ಉದ್ದೇಶಕ್ಕಾಗಿ ಉದ್ಯಾನವನ ತ್ಯಾಜ್ಯ, ಜಡತ್ಯಾಜ್ಯ, ಜೈವಿಕವಾಗಿ ಕೊಳೆಯದ ಮತ್ತು ಜೈವಿಕ ವೈದ್ಯಕೀಯ ತ್ಯಾಜ್ಯಗಳನ್ನು ಸಂಬಂಧಿಸಿದ ನಿಗಮಕ್ಕೆ ನೀಡದೇ ಇರುವುದು</p>.<p>*ಕಸ ಮತ್ತು ಯಾವುದೇ ಘನತ್ಯಾಜ್ಯವನ್ನು ಅನಿಯಮಿತವಾಗಿ ರಾಶಿಗೂಡಿಸುವುದು, ಬೀದಿಗಳಲ್ಲಿ ಹೊಲಸು ಹರಿಯುವುದಕ್ಕೆ ಅವಕಾಶ ನೀಡುವುದು</p>.<p>*ಯುಕ್ತವಲ್ಲದ ಸ್ಥಳದಲ್ಲಿ ಸತ್ತ ಪ್ರಾಣಿಯನ್ನು ಹಾಕುವುದು</p>.<p>*ಕಟ್ಟಡದ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಗುಡ್ಡೆ ಹಾಕುವುದು</p>.<p>ಈ ಎಲ್ಲ ಅಪರಾಧ ಎಸಗಿದವರಿಗೆ ಮೊದಲ ಬಾರಿಗೆ ₹100 ರಿಂದ ₹1000 ದವರೆಗೆ ದಂಡ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ₹2 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>