<p><strong>ಬೆಂಗಳೂರು: </strong>ಎರಡು ಮಹಡಿಗಳನ್ನು ಒಳಗೊಂಡ ಸಮುದಾಯ ಭವನ ನಿರ್ಮಿಸುವಾಗ ಮೊದಲ ಮಹಡಿಗೆ ಪ್ರತ್ಯೇಕ ಹಾಗೂ ಎರಡನೇ ಮಹಡಿಗೆ ಪ್ರತ್ಯೇಕವಾಗಿ ಟೆಂಡರ್ ಕರೆಯುವುದನ್ನು ಎಲ್ಲಾದರೂ ನೋಡಿದ್ದೀರಾ? ಬಿಬಿಎಂಪಿಯಲ್ಲಿ ಇದು ಕೂಡಾ ಸಾಧ್ಯ.</p>.<p>ಅಚ್ಚರಿಯೆಂದರೆ, ಸಮುದಾಯಭವನ ಕಾಮಗಾರಿ ಬೇರೆ ಬೇರೆ ಮಹಡಿಗಳಿಗೆ ಪ್ರತ್ಯೇಕವಾಗಿ ಟೆಂಡರ್ ಕರೆದರೂ ಕಾಮಗಾರಿಯ ಗುತ್ತಿಗೆಯನ್ನು ಮಾತ್ರ ಒಬ್ಬನೇ ಗುತ್ತಿಗೆದಾರನಿಗೆ ನೀಡಲಾಗಿದೆ.</p>.<p>ಯಡಿಯೂರು ವಾರ್ಡ್ನಲ್ಲಿ ಬಿಬಿಎಂಪಿಯು ಸಮುದಾಯ ಭವನ ನಿರ್ಮಿಸುತ್ತಿದೆ. ಎರಡು ಮಹಡಿಗಳನ್ನು ಹಾಗೂ ಎಲೆಕ್ಟ್ರಿಕಲ್ ಕೆಲಸಗಳನ್ನು ಒಳಗೊಂಡ ಈ ಕಾಮಗಾರಿಯ ಅಂದಾಜು ವೆಚ್ಚ ₹ 5.50 ಕೋಟಿ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ಪ್ರಕಾರ ಇಷ್ಟು ಮೊತ್ತದ ಕಾಮಗಾರಿ ನಿರ್ವಹಿಸಬೇಕಾದರೆ ಗುತ್ತಿಗೆದಾರ 2014–15ರಿಂದ 2018–19ರ ನಡುವಿನ ಎರಡು ಆರ್ಥಿಕ ವರ್ಷಗಳಲ್ಲಿ ಕನಿಷ್ಠ ₹ 11 ಕೋಟಿ ವೆಚ್ಚದ ಕಾಮಗಾರಿ ನಿರ್ವಹಿಸಿರಬೇಕು. ಈ ಕಾಮಗಾರಿಯ ತರಹದ್ದೇ ಆದ ₹ 2.75 ಕೋಟಿ ವೆಚ್ಚದ ಒಂದಾದರೂ ಕಾಮಗಾರಿ ಅದರಲ್ಲಿ ಸೇರಿರಬೇಕು.</p>.<p>ಬಿಬಿಎಂಪಿ ಅಧಿಕಾರಿಗಳು ರಾಜಕೀಯ ಒತ್ತಡದಿಂದ ಈ ಕಾಮಗಾರಿಯ ಗುತ್ತಿಗೆಯನ್ನು ಯಾರಿಗೆ ನೀಡಬೇಕೆಂದು ಬಯಸಿದ್ದರೋ, ಆ ಗುತ್ತಿಗೆದಾರರ ಇಷ್ಟು ಮೊತ್ತದ ಕಾಮಗಾರಿ ನಿರ್ವಹಿಸುವ ಅರ್ಹತೆ ಹೊಂದಿರಲಿಲ್ಲ. ಹಾಗಾಗಿ ಕಾಮಗಾರಿಯನ್ನೇ ಅಧಿಕಾರಿಗಳು ಮೂರು ವಿಭಾಗಗಳನ್ನಾಗಿ ವಿಂಗಡಿಸಿದ್ದಾರೆ. ಮೊದಲ ಮಹಡಿಯ ನಿರ್ಮಾಣಕ್ಕೆ ₹ 1.99 ಕೋಟಿ, ಎರಡನೇ ಮಹಡಿಯ ನಿರ್ಮಾಣಕ್ಕೆ ₹ 1.99 ಕೋಟಿ ಹಾಗೂ ಎಲೆಕ್ಟ್ರಿಕಲ್ ಕೆಲಸಗಳಿಗೆ ₹ 1.52 ಕೋಟಿ ವೆಚ್ಚಕ್ಕೆ ಪ್ರತ್ಯೇಕ ಟೆಂಡರ್ ಕರೆದಿದ್ದಾರೆ. ಈ ಕಾಮಗಾರಿ ನಿರ್ವಹಣೆಗೆ 9 ತಿಂಗಳು ಕಾಲಾವಕಾಶ ನೀಡಲಾಗಿದೆ.</p>.<p>ಕಾಮಗಾರಿಯನ್ನು ಸತೀಶ್ ಆರ್. ಎಂಬ ಗುತ್ತಿಗೆದಾರರಿಗೆ ನೀಡಲಾಗಿದೆ. ಅವರ ಟೆಂಡರ್ ಸಾಮರ್ಥ್ಯ ₹ 11 ಕೋಟಿ ಇಲ್ಲ. ಹಾಗಾಗಿ ಸತೀಶ್ ಅವರು ಈ ಕಾಮಗಾರಿಯ ಟೆಂಡರ್ ಪಡೆಯುವುದಕ್ಕೆ ಅನುಕೂಲ ಕಲ್ಪಿಸಲುವ ಸಲುವಾಗಿ ₹ 5.50 ಕೋಟಿ ವೆಚ್ಚದ ಕಾಮಗಾರಿಯನ್ನು ಮೂರು ಪ್ರತ್ಯೇಕ ಕಾಮಗಾರಿಗಳನ್ನಾಗಿ ವಿಭಜಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.</p>.<p>ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಯಡಿಯೂರು ವಾರ್ಡ್ನ ಈ ಕಾಮಗಾರಿಯ ಉಸ್ತುವಾರಿ ಹೊತ್ತ ಕಾರ್ಯಪಾಲಕ ಎಂಜಿನಿಯರ್ (ಯೋಜನೆ) ಅವರಿಗೆ ಕರೆ ಮಾಡಲಾಯಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.</p>.<p><strong>‘ಪ್ರತಿ ಮಹಡಿಗೆ ಪ್ರತ್ಯೇಕ ಟೆಂಡರ್– ಅವಕಾಶ ಇಲ್ಲ’</strong><br />‘ಸಮುದಾಯ ಭವನ ನಿರ್ಮಿಸುವಾಗ ಮೊದಲ ಮಹಡಿಗೆ, ಎರಡನೇ ಮಹಡಿಗೆ ಹಾಗೂ ಎಲೆಕ್ಟ್ರಿಕಲ್ ಕಾಮಗಾರಿಗಳಿಗೆ ಏಕಕಾಲಕ್ಕೆ ಪ್ರತ್ಯೇಕವಾಗಿ ಟೆಂಡರ್ ಕರೆಯುವುದಕ್ಕೆ ಅವಕಾಶ ಇಲ್ಲ. ಆ ರೀತಿ ಮಾಡಿದ್ದರೆ ಅದು ತಪ್ಪಾಗುತ್ತದೆ. ಯಡಿಯೂರು ವಾರ್ಡ್ನ ಸಮುದಾಯ ಭವನ ಕಾಮಗಾರಿಯಲ್ಲಿ ಈ ರೀತಿ ಆಗಿದ್ದರೆ ಪರಿಶೀಲಿಸಿ ತಪ್ಪೆಸಗಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>4ಜಿ ಅಡಿ ವಿನಾಯಿತಿ ಕೋರಿದ್ದ ಗುತ್ತಿಗೆದಾರ</strong><br />ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ದ.ರಾ ಬೇಂದ್ರೆ ವೃತ್ತದಿಂದ ಆರ್ಮುಗಂ ವೃತ್ತದವರೆಗಿನ 1.2 ಕಿ.ಮೀ ರಸ್ತೆಯ ವೈಟ್ಟಾಪಿಂಗ್ ಕಾಮಗಾರಿಯನ್ನು ಟೆಂಡರ್ ಕರೆಯದೆಯೇ ಗುತ್ತಿಗೆದಾರ ಸತೀಶ್ ಆರ್. ಅವರ ಮೂಲಕ ನಡೆಸುವುದಕ್ಕೆ 2019ರಲ್ಲಿ ಬಿಬಿಎಂಪಿ ಸಿದ್ಧತೆ ನಡೆಸಿತ್ತು. ಸತೀಶ್ ಅವರು ಈ ಕಾಮಗಾರಿಗೆ ಕೆಟಿಪಿಪಿ ಕಾಯ್ದೆಯ 4 ಜಿ ಕಲಂ ಅಡಿ ವಿನಾಯಿತಿ ನೀಡುವಂತೆ ಕೋರಿ ಬಿಬಿಎಂಪಿಯ ಆಗಿನ ಆಯುಕ್ತರಿಗೆ 2019ರ ಸೆ. 21ರಂದು ಪತ್ರವನ್ನೂ ಬರೆದಿದ್ದರು.</p>.<p>ಈ ಕುರಿತು ನಗರಾಭಿವೃದ್ಧಿ ಇಲಾಖೆಯಲ್ಲಿ ಆಗ ಹೆಚ್ಚುವರಿ ಮುಖ್ಯಕಾರ್ಯದರ್ಶಿರಾಗಿದ್ದ ಇ.ವಿ.ರಮಣ ರೆಡ್ಡಿ ಅವರಿಗೆ 2019ರ ಸೆ. 24ರಂದು ಪತ್ರ ಬರೆದಿದ್ದ ಬಿಬಿಎಂಪಿಯ ಆಗಿನ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಅವರು, ‘ಈ ಕಾಮಗಾರಿ ಬಗ್ಗೆ ಆಗಿನ ಮುಖ್ಯಕಾರ್ಯದರ್ಶಿ ಅವರು ಎನ್.ಆರ್.ರಮೇಶ್ ಜೊತೆ ದೂರವಾಣಿಯಲ್ಲಿ ಮಾತನಾಡಿ ಈ ಎರಡೂ ಕಾಮಗಾರಿಗಳ ಅಂದಾಜು ಮೊತ್ತವನ್ನು ಶೇ 3ರಷ್ಟು ಕಡಿಮೆ ಮಾಡುವಂತೆ ಸೂಚಿಸಿದ್ದಾರೆ. ಅದರಂತೆ ಅಂದಾಜುಪಟ್ಟಿಯಲ್ಲಿ ಶೇ 3ರಷ್ಟು ಕಡಿಮೆ ಮಾಡಿ ಕಾಮಗಾರಿ ನಿರ್ವಹಿಸಲು ಗುತ್ತಿಗೆದಾರರಾದ ಆರ್.ಸತೀಶ್ ಹಾಗೂ ಎಸ್.ಮಂಜುನಾಥ್ ಒಪ್ಪಿದ್ದಾರೆ’ ಎಂದು ಉಲ್ಲೇಖಿಸಿದ್ದರು. ಈ ಪತ್ರವನ್ನು ಆಧರಿಸಿ ‘ಪ್ರಜಾವಾಣಿ’ 2019ರ ಸೆ.15ರ ಸಂಚಿಕೆಯಲ್ಲಿ ‘ಬಿಜೆಪಿ ವಕ್ತಾರನ ಜೊತೆ ಮುಖ್ಯ ಕಾರ್ಯದರ್ಶಿ ಚೌಕಾಸಿ!’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.</p>.<p>ಟೆಂಡರ್ ಕರೆಯದೆಯೇ ಕಾಮಗಾರಿ ನಡೆಸುವ ಪ್ರಸ್ತಾಪವನ್ನು ಬಳಿಕ ಬಿಬಿಎಂಪಿ ಕೈಬಿಟ್ಟಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಎರಡು ಮಹಡಿಗಳನ್ನು ಒಳಗೊಂಡ ಸಮುದಾಯ ಭವನ ನಿರ್ಮಿಸುವಾಗ ಮೊದಲ ಮಹಡಿಗೆ ಪ್ರತ್ಯೇಕ ಹಾಗೂ ಎರಡನೇ ಮಹಡಿಗೆ ಪ್ರತ್ಯೇಕವಾಗಿ ಟೆಂಡರ್ ಕರೆಯುವುದನ್ನು ಎಲ್ಲಾದರೂ ನೋಡಿದ್ದೀರಾ? ಬಿಬಿಎಂಪಿಯಲ್ಲಿ ಇದು ಕೂಡಾ ಸಾಧ್ಯ.</p>.<p>ಅಚ್ಚರಿಯೆಂದರೆ, ಸಮುದಾಯಭವನ ಕಾಮಗಾರಿ ಬೇರೆ ಬೇರೆ ಮಹಡಿಗಳಿಗೆ ಪ್ರತ್ಯೇಕವಾಗಿ ಟೆಂಡರ್ ಕರೆದರೂ ಕಾಮಗಾರಿಯ ಗುತ್ತಿಗೆಯನ್ನು ಮಾತ್ರ ಒಬ್ಬನೇ ಗುತ್ತಿಗೆದಾರನಿಗೆ ನೀಡಲಾಗಿದೆ.</p>.<p>ಯಡಿಯೂರು ವಾರ್ಡ್ನಲ್ಲಿ ಬಿಬಿಎಂಪಿಯು ಸಮುದಾಯ ಭವನ ನಿರ್ಮಿಸುತ್ತಿದೆ. ಎರಡು ಮಹಡಿಗಳನ್ನು ಹಾಗೂ ಎಲೆಕ್ಟ್ರಿಕಲ್ ಕೆಲಸಗಳನ್ನು ಒಳಗೊಂಡ ಈ ಕಾಮಗಾರಿಯ ಅಂದಾಜು ವೆಚ್ಚ ₹ 5.50 ಕೋಟಿ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ಪ್ರಕಾರ ಇಷ್ಟು ಮೊತ್ತದ ಕಾಮಗಾರಿ ನಿರ್ವಹಿಸಬೇಕಾದರೆ ಗುತ್ತಿಗೆದಾರ 2014–15ರಿಂದ 2018–19ರ ನಡುವಿನ ಎರಡು ಆರ್ಥಿಕ ವರ್ಷಗಳಲ್ಲಿ ಕನಿಷ್ಠ ₹ 11 ಕೋಟಿ ವೆಚ್ಚದ ಕಾಮಗಾರಿ ನಿರ್ವಹಿಸಿರಬೇಕು. ಈ ಕಾಮಗಾರಿಯ ತರಹದ್ದೇ ಆದ ₹ 2.75 ಕೋಟಿ ವೆಚ್ಚದ ಒಂದಾದರೂ ಕಾಮಗಾರಿ ಅದರಲ್ಲಿ ಸೇರಿರಬೇಕು.</p>.<p>ಬಿಬಿಎಂಪಿ ಅಧಿಕಾರಿಗಳು ರಾಜಕೀಯ ಒತ್ತಡದಿಂದ ಈ ಕಾಮಗಾರಿಯ ಗುತ್ತಿಗೆಯನ್ನು ಯಾರಿಗೆ ನೀಡಬೇಕೆಂದು ಬಯಸಿದ್ದರೋ, ಆ ಗುತ್ತಿಗೆದಾರರ ಇಷ್ಟು ಮೊತ್ತದ ಕಾಮಗಾರಿ ನಿರ್ವಹಿಸುವ ಅರ್ಹತೆ ಹೊಂದಿರಲಿಲ್ಲ. ಹಾಗಾಗಿ ಕಾಮಗಾರಿಯನ್ನೇ ಅಧಿಕಾರಿಗಳು ಮೂರು ವಿಭಾಗಗಳನ್ನಾಗಿ ವಿಂಗಡಿಸಿದ್ದಾರೆ. ಮೊದಲ ಮಹಡಿಯ ನಿರ್ಮಾಣಕ್ಕೆ ₹ 1.99 ಕೋಟಿ, ಎರಡನೇ ಮಹಡಿಯ ನಿರ್ಮಾಣಕ್ಕೆ ₹ 1.99 ಕೋಟಿ ಹಾಗೂ ಎಲೆಕ್ಟ್ರಿಕಲ್ ಕೆಲಸಗಳಿಗೆ ₹ 1.52 ಕೋಟಿ ವೆಚ್ಚಕ್ಕೆ ಪ್ರತ್ಯೇಕ ಟೆಂಡರ್ ಕರೆದಿದ್ದಾರೆ. ಈ ಕಾಮಗಾರಿ ನಿರ್ವಹಣೆಗೆ 9 ತಿಂಗಳು ಕಾಲಾವಕಾಶ ನೀಡಲಾಗಿದೆ.</p>.<p>ಕಾಮಗಾರಿಯನ್ನು ಸತೀಶ್ ಆರ್. ಎಂಬ ಗುತ್ತಿಗೆದಾರರಿಗೆ ನೀಡಲಾಗಿದೆ. ಅವರ ಟೆಂಡರ್ ಸಾಮರ್ಥ್ಯ ₹ 11 ಕೋಟಿ ಇಲ್ಲ. ಹಾಗಾಗಿ ಸತೀಶ್ ಅವರು ಈ ಕಾಮಗಾರಿಯ ಟೆಂಡರ್ ಪಡೆಯುವುದಕ್ಕೆ ಅನುಕೂಲ ಕಲ್ಪಿಸಲುವ ಸಲುವಾಗಿ ₹ 5.50 ಕೋಟಿ ವೆಚ್ಚದ ಕಾಮಗಾರಿಯನ್ನು ಮೂರು ಪ್ರತ್ಯೇಕ ಕಾಮಗಾರಿಗಳನ್ನಾಗಿ ವಿಭಜಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.</p>.<p>ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಯಡಿಯೂರು ವಾರ್ಡ್ನ ಈ ಕಾಮಗಾರಿಯ ಉಸ್ತುವಾರಿ ಹೊತ್ತ ಕಾರ್ಯಪಾಲಕ ಎಂಜಿನಿಯರ್ (ಯೋಜನೆ) ಅವರಿಗೆ ಕರೆ ಮಾಡಲಾಯಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.</p>.<p><strong>‘ಪ್ರತಿ ಮಹಡಿಗೆ ಪ್ರತ್ಯೇಕ ಟೆಂಡರ್– ಅವಕಾಶ ಇಲ್ಲ’</strong><br />‘ಸಮುದಾಯ ಭವನ ನಿರ್ಮಿಸುವಾಗ ಮೊದಲ ಮಹಡಿಗೆ, ಎರಡನೇ ಮಹಡಿಗೆ ಹಾಗೂ ಎಲೆಕ್ಟ್ರಿಕಲ್ ಕಾಮಗಾರಿಗಳಿಗೆ ಏಕಕಾಲಕ್ಕೆ ಪ್ರತ್ಯೇಕವಾಗಿ ಟೆಂಡರ್ ಕರೆಯುವುದಕ್ಕೆ ಅವಕಾಶ ಇಲ್ಲ. ಆ ರೀತಿ ಮಾಡಿದ್ದರೆ ಅದು ತಪ್ಪಾಗುತ್ತದೆ. ಯಡಿಯೂರು ವಾರ್ಡ್ನ ಸಮುದಾಯ ಭವನ ಕಾಮಗಾರಿಯಲ್ಲಿ ಈ ರೀತಿ ಆಗಿದ್ದರೆ ಪರಿಶೀಲಿಸಿ ತಪ್ಪೆಸಗಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>4ಜಿ ಅಡಿ ವಿನಾಯಿತಿ ಕೋರಿದ್ದ ಗುತ್ತಿಗೆದಾರ</strong><br />ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ದ.ರಾ ಬೇಂದ್ರೆ ವೃತ್ತದಿಂದ ಆರ್ಮುಗಂ ವೃತ್ತದವರೆಗಿನ 1.2 ಕಿ.ಮೀ ರಸ್ತೆಯ ವೈಟ್ಟಾಪಿಂಗ್ ಕಾಮಗಾರಿಯನ್ನು ಟೆಂಡರ್ ಕರೆಯದೆಯೇ ಗುತ್ತಿಗೆದಾರ ಸತೀಶ್ ಆರ್. ಅವರ ಮೂಲಕ ನಡೆಸುವುದಕ್ಕೆ 2019ರಲ್ಲಿ ಬಿಬಿಎಂಪಿ ಸಿದ್ಧತೆ ನಡೆಸಿತ್ತು. ಸತೀಶ್ ಅವರು ಈ ಕಾಮಗಾರಿಗೆ ಕೆಟಿಪಿಪಿ ಕಾಯ್ದೆಯ 4 ಜಿ ಕಲಂ ಅಡಿ ವಿನಾಯಿತಿ ನೀಡುವಂತೆ ಕೋರಿ ಬಿಬಿಎಂಪಿಯ ಆಗಿನ ಆಯುಕ್ತರಿಗೆ 2019ರ ಸೆ. 21ರಂದು ಪತ್ರವನ್ನೂ ಬರೆದಿದ್ದರು.</p>.<p>ಈ ಕುರಿತು ನಗರಾಭಿವೃದ್ಧಿ ಇಲಾಖೆಯಲ್ಲಿ ಆಗ ಹೆಚ್ಚುವರಿ ಮುಖ್ಯಕಾರ್ಯದರ್ಶಿರಾಗಿದ್ದ ಇ.ವಿ.ರಮಣ ರೆಡ್ಡಿ ಅವರಿಗೆ 2019ರ ಸೆ. 24ರಂದು ಪತ್ರ ಬರೆದಿದ್ದ ಬಿಬಿಎಂಪಿಯ ಆಗಿನ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಅವರು, ‘ಈ ಕಾಮಗಾರಿ ಬಗ್ಗೆ ಆಗಿನ ಮುಖ್ಯಕಾರ್ಯದರ್ಶಿ ಅವರು ಎನ್.ಆರ್.ರಮೇಶ್ ಜೊತೆ ದೂರವಾಣಿಯಲ್ಲಿ ಮಾತನಾಡಿ ಈ ಎರಡೂ ಕಾಮಗಾರಿಗಳ ಅಂದಾಜು ಮೊತ್ತವನ್ನು ಶೇ 3ರಷ್ಟು ಕಡಿಮೆ ಮಾಡುವಂತೆ ಸೂಚಿಸಿದ್ದಾರೆ. ಅದರಂತೆ ಅಂದಾಜುಪಟ್ಟಿಯಲ್ಲಿ ಶೇ 3ರಷ್ಟು ಕಡಿಮೆ ಮಾಡಿ ಕಾಮಗಾರಿ ನಿರ್ವಹಿಸಲು ಗುತ್ತಿಗೆದಾರರಾದ ಆರ್.ಸತೀಶ್ ಹಾಗೂ ಎಸ್.ಮಂಜುನಾಥ್ ಒಪ್ಪಿದ್ದಾರೆ’ ಎಂದು ಉಲ್ಲೇಖಿಸಿದ್ದರು. ಈ ಪತ್ರವನ್ನು ಆಧರಿಸಿ ‘ಪ್ರಜಾವಾಣಿ’ 2019ರ ಸೆ.15ರ ಸಂಚಿಕೆಯಲ್ಲಿ ‘ಬಿಜೆಪಿ ವಕ್ತಾರನ ಜೊತೆ ಮುಖ್ಯ ಕಾರ್ಯದರ್ಶಿ ಚೌಕಾಸಿ!’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.</p>.<p>ಟೆಂಡರ್ ಕರೆಯದೆಯೇ ಕಾಮಗಾರಿ ನಡೆಸುವ ಪ್ರಸ್ತಾಪವನ್ನು ಬಳಿಕ ಬಿಬಿಎಂಪಿ ಕೈಬಿಟ್ಟಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>