‘ಈಗಿರುವ ಕಸ ನಿರ್ಹವಹಣೆ ಗುತ್ತಿಗೆಯಲ್ಲಿ ಮನೆ–ಮನೆಯಿಂದ ಕಸ ಸಂಗ್ರಹಿಸಿ ನೆಲಭರ್ತಿ ಘಟಕಕ್ಕೆ ಸಾಗಿಸುವುದಷ್ಟೇ ಸೇರಿತ್ತು. ರಸ್ತೆ ಬದಿ ಬೀಳುವ ಕಸ, ಪ್ರಾಣಿಗಳ ತ್ಯಾಜ್ಯಕ್ಕೆ ಆ ಗುತ್ತಿಗೆದಾರರು ಹೊಣೆಗಾರರಾಗಿರಲಿಲ್ಲ. ಹೊಸದಾಗಿ ಟೆಂಡರ್ ಪ್ರಕ್ರಿಯೆ ನಡೆಸಲು ಉದ್ದೇಶಿಸಲಾಗಿದ್ದು, ಹೊಸ ಗುತ್ತಿಗೆಯಲ್ಲಿ ಈ ಎಲ್ಲವನ್ನೂ ಸೇರಿಸಲಾಗುತ್ತಿದೆ. ಅದು ಜಾರಿಗೆ ಬರಲು ಕೆಲವು ತಿಂಗಳು ಬೇಕಾಗುತ್ತದೆ. ಆ ತನಕ ಕಸ ಸುರಿಯುವ ತಾಣಗಳನ್ನು ತೆರವುಗೊಳಿಸ ಬೇಕಾಗಿದೆ. ಆದ್ದರಿಂದ ಈ ಯೋಜನೆ ರೂಪಿಸಲಾಗಿದೆ’ ಎಂದು ವಿವರಿಸಿದರು.