<p><strong>ಬೆಂಗಳೂರು</strong>: ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾರ್ಗಸೂಚಿ ಪಾಲಿಸದ 14 ವಸತಿಗೃಹಗಳಿಗೆ (ಪಿಜಿ) ಸಾರ್ವಜನಿಕ ಆರೋಗ್ಯ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಬೀಗ ಹಾಕಲಾಗಿದೆ.</p>.<p>ಉದ್ದಿಮೆ ಪರವಾನಗಿ ಪಡೆಯದೇ ಎಸ್.ಒ.ಪಿ ಮಾನದಂಡಗಳನ್ನು ಉಲ್ಲಂಘಿಸಿ, ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಪಿ.ಜಿಗಳ ವಿರುದ್ಧ ಕಾರ್ಯಾಚರಣೆ ಹಾಗೂ ಉದ್ದಿಮೆ ಪರವಾನಗಿ ವಿಶೇಷ ಅಭಿಯಾನ ನಡೆಸುವಂತೆ ಆಯುಕ್ತ ಡಿ.ಎಸ್.ರಮೇಶ್ ಸೂಚಿಸಿದ್ದಾರೆ. ಅದರಂತೆ, ಆರೋಗ್ಯ ವಿಭಾಗದ ಅಧಿಕಾರಿಗಳು ಮಂಗಳವಾರ ಕಾರ್ಯಾಚರಣೆ ನಡೆಸಿದರು. </p>.<p>ವಸತಿ ಪ್ರದೇಶಗಳಲ್ಲಿ ನಿಯಮಬಾಹಿರವಾಗಿ ವಾಣಿಜ್ಯ/ವಸತಿಯೇತರ ಚಟುವಟಿಕೆಗಳನ್ನು ನಡೆಸುತ್ತಿರುವ ಮತ್ತು ಜಿಬಿಜಿಎ ಕಾಯ್ದೆ ಪ್ರಕಾರ ವಿಧಿಸಿರುವ ಷರತ್ತು ಹಾಗೂ ನಿಬಂಧನೆಗಳನ್ನು ಪಾಲಿಸದ 14 ಪಿ.ಜಿಗಳ ವಿರುದ್ಧ ಅಭಿವೃದ್ಧಿ ವಿಭಾಗದ ಹೆಚ್ಚುವರಿ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡರು.</p>.<p><strong>ಬೀಗ ಹಾಕಲಾದ ಪಿ.ಜಿಗಳು:</strong> ಮಹದೇವಪುರ ವಿಧಾನಸಭಾ ಕ್ಷೇತ್ರ: ಎಸ್.ವಿ.ಕೆ. ಪಿಜಿ, ಪಟ್ಟಂದೂರು ಅಗ್ರಹಾರ; ವಂಶಿ ಕೃಷ್ಣ ಪಿ.ಜಿ, ಪಟ್ಟಂದೂರು ಅಗ್ರಹಾರ; ಡ್ವೆಲ್ ಕೋ-ಲಿವಿಂಗ್ ಪಿ.ಜಿ, ಲಕ್ಷ್ಮಿನಾರಾಯಣಪುರ; ರಾಯಲ್ ಹೋಮ್ ಸ್ಟೇಸ್ ಪಿ.ಜಿ, ಮೈತ್ರಿ ಲೇಔಟ್; ಡ್ರೀಮ್ ಲ್ಯಾಂಡ್ ಪಿ.ಜಿ, ಪ್ರಶಾಂತ್ ಲೇಔಟ್; ಝೋಲೋ ಅಸ್ಮಿ ಜೆಂಟ್ಸ್ ಪಿ.ಜಿ, ರಾಘವೇಂದ್ರ ಲೇಔಟ್; ಕೆ.ಆರ್. ಜೆಂಟ್ಸ್ ಪಿ.ಜಿ, ರಾಮಾಂಜನೇಯ ಲೇಔಟ್.</p>.<p><strong>ಕೆ.ಆರ್. ಪುರ ವಿಧಾನಸಭಾ ಕ್ಷೇತ್ರ:</strong> ಶ್ರೀ ಎಸ್.ಜಿ. ಜೆಂಟ್ಸ್ ಅಂಡ್ ಲೇಡೀಸ್ ಪಿ.ಜಿ, ಮುನಿಯಪ್ಪ ಲೇಔಟ್; ಸೇಂಟ್ ಮರಿಯಾ ಲೇಡೀಸ್ ಪಿ.ಜಿ, ನಾಗಪ್ಪ ರೆಡ್ಡಿ ಲೇಔಟ್; ಎಸ್.ಎಲ್.ವಿ ಕಂಫರ್ಟ್ಸ್ ಜೆಂಟ್ಸ್ ಪಿ.ಜಿ, ಶರಾವತಿ ಲೇಔಟ್; ಗಣೇಶ ಜೆಂಟ್ಸ್ ಪಿ.ಜಿ, ಬಸವನಪುರ; ಎಸ್.ಎಸ್.ವಿ ಟವರ್ ಪಿ.ಜಿ, ಲಕ್ಷ್ಮೀ ಸಾಗರ ಲೇಔಟ್; ಬ್ಲಿಸ್ ಕೋ-ಲಿವಿಂಗ್ ಪಿ.ಜಿ; ಬಿ, ನಾರಾಯಣಪುರ; ವಿ.ಡಿ.ಎಸ್ ಲಕ್ಸುರಿ ಪಿ.ಜಿ ಫಾರ್ ಲೇಡೀಸ್, ಸತ್ಯ ಬಡಾವಣೆ.</p>.<p><strong>ಅಭಿಯಾನ</strong>: ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನ.10ರಿಂದ 15ರವರೆಗೆ ಉದ್ದಿಮೆ ಪರವಾನಗಿ ವಿಶೇಷ ಅಭಿಯಾನವನ್ನು 17 ವಾರ್ಡ್ ಕಚೇರಿಗಳಲ್ಲಿ ನಡೆಸಲಾಗಿತ್ತು. ಈ ಅವಧಿಯಲ್ಲಿ 466 ಉದ್ದಿಮೆದಾರರು ‘ಏಕ ಗವಾಕ್ಷಿ’ ಅಡಿಯಲ್ಲಿ ಒಟ್ಟು ₹25,52,800 ಶುಲ್ಕ ಪಾವತಿಸಿ, ಎಲ್ಲ ಅಗತ್ಯ ದಾಖಲೆಗಳನ್ನು ಮಧ್ಯವರ್ತಿಗಳ ಯಾವುದೇ ಹಸ್ತಕ್ಷೇಪವಿಲ್ಲದೇ ಅರ್ಜಿ ಸಲ್ಲಿಸಿದ ದಿನದಂದೇ ಉದ್ದಿಮೆ ಪರವಾನಗಿಯನ್ನು ಪಡೆದುಕೊಂಡರು ಎಂದು ಆಯುಕ್ತರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾರ್ಗಸೂಚಿ ಪಾಲಿಸದ 14 ವಸತಿಗೃಹಗಳಿಗೆ (ಪಿಜಿ) ಸಾರ್ವಜನಿಕ ಆರೋಗ್ಯ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಬೀಗ ಹಾಕಲಾಗಿದೆ.</p>.<p>ಉದ್ದಿಮೆ ಪರವಾನಗಿ ಪಡೆಯದೇ ಎಸ್.ಒ.ಪಿ ಮಾನದಂಡಗಳನ್ನು ಉಲ್ಲಂಘಿಸಿ, ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಪಿ.ಜಿಗಳ ವಿರುದ್ಧ ಕಾರ್ಯಾಚರಣೆ ಹಾಗೂ ಉದ್ದಿಮೆ ಪರವಾನಗಿ ವಿಶೇಷ ಅಭಿಯಾನ ನಡೆಸುವಂತೆ ಆಯುಕ್ತ ಡಿ.ಎಸ್.ರಮೇಶ್ ಸೂಚಿಸಿದ್ದಾರೆ. ಅದರಂತೆ, ಆರೋಗ್ಯ ವಿಭಾಗದ ಅಧಿಕಾರಿಗಳು ಮಂಗಳವಾರ ಕಾರ್ಯಾಚರಣೆ ನಡೆಸಿದರು. </p>.<p>ವಸತಿ ಪ್ರದೇಶಗಳಲ್ಲಿ ನಿಯಮಬಾಹಿರವಾಗಿ ವಾಣಿಜ್ಯ/ವಸತಿಯೇತರ ಚಟುವಟಿಕೆಗಳನ್ನು ನಡೆಸುತ್ತಿರುವ ಮತ್ತು ಜಿಬಿಜಿಎ ಕಾಯ್ದೆ ಪ್ರಕಾರ ವಿಧಿಸಿರುವ ಷರತ್ತು ಹಾಗೂ ನಿಬಂಧನೆಗಳನ್ನು ಪಾಲಿಸದ 14 ಪಿ.ಜಿಗಳ ವಿರುದ್ಧ ಅಭಿವೃದ್ಧಿ ವಿಭಾಗದ ಹೆಚ್ಚುವರಿ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡರು.</p>.<p><strong>ಬೀಗ ಹಾಕಲಾದ ಪಿ.ಜಿಗಳು:</strong> ಮಹದೇವಪುರ ವಿಧಾನಸಭಾ ಕ್ಷೇತ್ರ: ಎಸ್.ವಿ.ಕೆ. ಪಿಜಿ, ಪಟ್ಟಂದೂರು ಅಗ್ರಹಾರ; ವಂಶಿ ಕೃಷ್ಣ ಪಿ.ಜಿ, ಪಟ್ಟಂದೂರು ಅಗ್ರಹಾರ; ಡ್ವೆಲ್ ಕೋ-ಲಿವಿಂಗ್ ಪಿ.ಜಿ, ಲಕ್ಷ್ಮಿನಾರಾಯಣಪುರ; ರಾಯಲ್ ಹೋಮ್ ಸ್ಟೇಸ್ ಪಿ.ಜಿ, ಮೈತ್ರಿ ಲೇಔಟ್; ಡ್ರೀಮ್ ಲ್ಯಾಂಡ್ ಪಿ.ಜಿ, ಪ್ರಶಾಂತ್ ಲೇಔಟ್; ಝೋಲೋ ಅಸ್ಮಿ ಜೆಂಟ್ಸ್ ಪಿ.ಜಿ, ರಾಘವೇಂದ್ರ ಲೇಔಟ್; ಕೆ.ಆರ್. ಜೆಂಟ್ಸ್ ಪಿ.ಜಿ, ರಾಮಾಂಜನೇಯ ಲೇಔಟ್.</p>.<p><strong>ಕೆ.ಆರ್. ಪುರ ವಿಧಾನಸಭಾ ಕ್ಷೇತ್ರ:</strong> ಶ್ರೀ ಎಸ್.ಜಿ. ಜೆಂಟ್ಸ್ ಅಂಡ್ ಲೇಡೀಸ್ ಪಿ.ಜಿ, ಮುನಿಯಪ್ಪ ಲೇಔಟ್; ಸೇಂಟ್ ಮರಿಯಾ ಲೇಡೀಸ್ ಪಿ.ಜಿ, ನಾಗಪ್ಪ ರೆಡ್ಡಿ ಲೇಔಟ್; ಎಸ್.ಎಲ್.ವಿ ಕಂಫರ್ಟ್ಸ್ ಜೆಂಟ್ಸ್ ಪಿ.ಜಿ, ಶರಾವತಿ ಲೇಔಟ್; ಗಣೇಶ ಜೆಂಟ್ಸ್ ಪಿ.ಜಿ, ಬಸವನಪುರ; ಎಸ್.ಎಸ್.ವಿ ಟವರ್ ಪಿ.ಜಿ, ಲಕ್ಷ್ಮೀ ಸಾಗರ ಲೇಔಟ್; ಬ್ಲಿಸ್ ಕೋ-ಲಿವಿಂಗ್ ಪಿ.ಜಿ; ಬಿ, ನಾರಾಯಣಪುರ; ವಿ.ಡಿ.ಎಸ್ ಲಕ್ಸುರಿ ಪಿ.ಜಿ ಫಾರ್ ಲೇಡೀಸ್, ಸತ್ಯ ಬಡಾವಣೆ.</p>.<p><strong>ಅಭಿಯಾನ</strong>: ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನ.10ರಿಂದ 15ರವರೆಗೆ ಉದ್ದಿಮೆ ಪರವಾನಗಿ ವಿಶೇಷ ಅಭಿಯಾನವನ್ನು 17 ವಾರ್ಡ್ ಕಚೇರಿಗಳಲ್ಲಿ ನಡೆಸಲಾಗಿತ್ತು. ಈ ಅವಧಿಯಲ್ಲಿ 466 ಉದ್ದಿಮೆದಾರರು ‘ಏಕ ಗವಾಕ್ಷಿ’ ಅಡಿಯಲ್ಲಿ ಒಟ್ಟು ₹25,52,800 ಶುಲ್ಕ ಪಾವತಿಸಿ, ಎಲ್ಲ ಅಗತ್ಯ ದಾಖಲೆಗಳನ್ನು ಮಧ್ಯವರ್ತಿಗಳ ಯಾವುದೇ ಹಸ್ತಕ್ಷೇಪವಿಲ್ಲದೇ ಅರ್ಜಿ ಸಲ್ಲಿಸಿದ ದಿನದಂದೇ ಉದ್ದಿಮೆ ಪರವಾನಗಿಯನ್ನು ಪಡೆದುಕೊಂಡರು ಎಂದು ಆಯುಕ್ತರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>