<p><strong>ಬೆಂಗಳೂರು</strong>: ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರು ನಗರದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ರಸ್ತೆ, ಅಂಡರ್ಪಾಸ್, ಬಡಾವಣೆಗಳು ಸಂಪೂರ್ಣ ಜಲಾವೃತಗೊಂಡಿವೆ. ರಸ್ತೆಗಳ ಮೇಲೆ ಮರಗಳು ಬಿದ್ದ ಪರಿಣಾಮ ಸಂಚಾರವೂ ದುಸ್ತರವಾಗಿದೆ.</p><p>ಮಹಾದೇವಪುರ ವಲಯ ವ್ಯಾಪ್ತಿಯ ಶ್ರೀ ಸಾಯಿ ಬಡಾವಣೆ ಕರೆಯಂತಾಗಿದ್ದು, ಟ್ರ್ಯಾಕ್ಟರ್ಗಳ ಮೂಲಕ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್, ಮಾನ್ಯತಾ ಟೆಕ್ ಪಾರ್ಕ್, ಶಾಂತಿ ನಗರ ಬಸ್ ನಿಲ್ದಾಣ ಸೇರಿದಂತೆ ಹಲವು ಸ್ಥಳಗಳು ಜಲಾವೃತಗೊಂಡಿವೆ.</p>.<p>ಬೆಂಗಳೂರಿನ ಅವ್ಯವಸ್ಥೆಗೆ ಜನ ರಾಜ್ಯ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ‘ಗ್ರೇಟರ್ ಬೆಂಗಳೂರಲ್ಲ ವಾಟರ್ ಬೆಂಗಳೂರು’ ಎಂದು ಕಿಡಿ ಕಾರಿದ್ದಾರೆ.</p>.<p>ಏತನ್ಮಧ್ಯೆ, ಮಳೆಗೆ ಬೀಚ್ನಂತಾದ ಬೆಂಗಳೂರಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಬಗೆಯ ಮೀಮ್ಸ್ಗಳು ಹರಿದಾಡುತ್ತಿವೆ. </p>.<p>‘ಪಾಕ್ ದಾಳಿಗೆ ಧ್ವಂಸಗೊಂಡಿದ್ದ ಬೆಂಗಳೂರು ಬಂದರು ಕೇವಲ ಒಂದೇ ವಾರಕ್ಕೆ ಮತ್ತೆ ತಲೆ ಎತ್ತಿದೆ’ ಎಂದು ನೆಟ್ಟಿಗರೊಬ್ಬರು ಜಲಾವೃತಗೊಂಡ ರಸ್ತೆಯ ವಿಡಿಯೊವನ್ನು ಹಂಚಿಕೊಂಡಿದ್ದಾರೆ.</p><p>‘ಬೆಂಗಳೂರಿನ ರಸ್ತೆಗಳು ಇದೀಗ ಶೇ 50ರಷ್ಟು ಗುಂಡಿಗಳು ಮತ್ತು ಶೇ 50 ರಷ್ಟು ನೀರಿನಿಂದ ಕೂಡಿದೆ’ ಎಂದು ಮತ್ತೊಬ್ಬರು ಬಿಬಿಎಂಪಿಯನ್ನು ಪರೋಕ್ಷವಾಗಿ ಲೇವಡಿ ಮಾಡಿದ್ದಾರೆ.</p>. <p>ಇದೇ ರೀತಿಯ ಹಲವು ಮೀಮ್ಸ್ಗಳು ಹರಿದಾಡುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರು ನಗರದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ರಸ್ತೆ, ಅಂಡರ್ಪಾಸ್, ಬಡಾವಣೆಗಳು ಸಂಪೂರ್ಣ ಜಲಾವೃತಗೊಂಡಿವೆ. ರಸ್ತೆಗಳ ಮೇಲೆ ಮರಗಳು ಬಿದ್ದ ಪರಿಣಾಮ ಸಂಚಾರವೂ ದುಸ್ತರವಾಗಿದೆ.</p><p>ಮಹಾದೇವಪುರ ವಲಯ ವ್ಯಾಪ್ತಿಯ ಶ್ರೀ ಸಾಯಿ ಬಡಾವಣೆ ಕರೆಯಂತಾಗಿದ್ದು, ಟ್ರ್ಯಾಕ್ಟರ್ಗಳ ಮೂಲಕ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್, ಮಾನ್ಯತಾ ಟೆಕ್ ಪಾರ್ಕ್, ಶಾಂತಿ ನಗರ ಬಸ್ ನಿಲ್ದಾಣ ಸೇರಿದಂತೆ ಹಲವು ಸ್ಥಳಗಳು ಜಲಾವೃತಗೊಂಡಿವೆ.</p>.<p>ಬೆಂಗಳೂರಿನ ಅವ್ಯವಸ್ಥೆಗೆ ಜನ ರಾಜ್ಯ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ‘ಗ್ರೇಟರ್ ಬೆಂಗಳೂರಲ್ಲ ವಾಟರ್ ಬೆಂಗಳೂರು’ ಎಂದು ಕಿಡಿ ಕಾರಿದ್ದಾರೆ.</p>.<p>ಏತನ್ಮಧ್ಯೆ, ಮಳೆಗೆ ಬೀಚ್ನಂತಾದ ಬೆಂಗಳೂರಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಬಗೆಯ ಮೀಮ್ಸ್ಗಳು ಹರಿದಾಡುತ್ತಿವೆ. </p>.<p>‘ಪಾಕ್ ದಾಳಿಗೆ ಧ್ವಂಸಗೊಂಡಿದ್ದ ಬೆಂಗಳೂರು ಬಂದರು ಕೇವಲ ಒಂದೇ ವಾರಕ್ಕೆ ಮತ್ತೆ ತಲೆ ಎತ್ತಿದೆ’ ಎಂದು ನೆಟ್ಟಿಗರೊಬ್ಬರು ಜಲಾವೃತಗೊಂಡ ರಸ್ತೆಯ ವಿಡಿಯೊವನ್ನು ಹಂಚಿಕೊಂಡಿದ್ದಾರೆ.</p><p>‘ಬೆಂಗಳೂರಿನ ರಸ್ತೆಗಳು ಇದೀಗ ಶೇ 50ರಷ್ಟು ಗುಂಡಿಗಳು ಮತ್ತು ಶೇ 50 ರಷ್ಟು ನೀರಿನಿಂದ ಕೂಡಿದೆ’ ಎಂದು ಮತ್ತೊಬ್ಬರು ಬಿಬಿಎಂಪಿಯನ್ನು ಪರೋಕ್ಷವಾಗಿ ಲೇವಡಿ ಮಾಡಿದ್ದಾರೆ.</p>. <p>ಇದೇ ರೀತಿಯ ಹಲವು ಮೀಮ್ಸ್ಗಳು ಹರಿದಾಡುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>