<p>ಸಿಲಿಕಾನ್ ಸಿಟಿಯಾಗಿರುವ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದಕ್ಕೆಲ್ಲ ಪರಿಹಾರ ನೀಡುತ್ತೇವೆ ಎಂದು ರಾಜ್ಯ ಸರ್ಕಾರ ಸುರಂಗ ರಸ್ತೆಯನ್ನು ನಿರ್ಮಿಸಲು ಹೊರಟಿದೆ. ಆರಂಭದಿಂದಲೂ ವಿರೋಧವನ್ನೇ ಕಂಡಿರುವ ಈ ಟನಲ್ ರಸ್ತೆಯಿಂದ ನಿಜಕ್ಕೂ ನಗರಕ್ಕೆ ಅನುಕೂಲವಿಲ್ಲ ಎಂದು ತಜ್ಞರು ಹೇಳಿದರೆ, ಸಂಚಾರ ದಟ್ಟಣೆ ಸಮಸ್ಯೆಗೆ ಸುರಂಗ ರಸ್ತೆಯೇ ಪರಿಹಾರ ಎಂಬುದು ಸರ್ಕಾರದ ವಾದ. ಏನಿದು ಸುರಂಗ ರಸ್ತೆ ಯೋಜನೆ ? ಲಾಲ್ ಬಾಗ್ ಮತ್ತು ಸ್ಯಾಂಕಿ ಕೆರೆಗೆ ಇದರಿಂದ ಅಪಾಯವಿದೆಯೇ ? ಬೃಹತ್ ಪ್ರಮಾಣದ ಹಣವನ್ನು ಖರ್ಚು ಮಾಡಲಷ್ಟೇ ಈ ಯೋಜನೆ ಮೀಸಲಾಗುತ್ತದೆಯೇ ? ಎಂಬ ವಿವರ ಈ ವಿಡಿಯೊದಲ್ಲಿ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>