ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಮುಷ್ಕರ: 498 ಸಿಬ್ಬಂದಿ ಅಮಾನತು

Last Updated 14 ಏಪ್ರಿಲ್ 2021, 20:55 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ಮುಷ್ಕರ 8ನೇ ದಿನವಾದ ಬುಧವಾರವೂ ಮುಂದುವರಿದ ಕಾರಣ, ಯುಗಾದಿ ಮುಗಿಸಿ ಬೆಂಗಳೂರಿಗೆ ಬಂದಿದ್ದ ಜನ ಮನೆ ತಲುಪಲು ಪರದಾಡಿದರು.‌

ಹಬ್ಬಕ್ಕೆ ಊರಿಗೆ ಹೋಗಲು ಪರದಾಡಿದ್ದ ಜನರು ವಾಪಸ್ ಬಂದಾಗಲೂ ಮನೆ ಸೇರಲು ಬಿಎಂಟಿಸಿ ಬಸ್‌ಗಳಿಗಾಗಿ ಕಾದರು. ಮುಷ್ಕರದ ನಡುವೆಯೂ ಅಲ್ಲಲ್ಲಿ ಬಿಎಂಟಿಸಿ ಬಸ್‌ಗಳು ಸಂಚರಿಸಿದವು.

ಊರಿನಿಂದ ಬಂದ ಕೆಲವರು ಆಟೋರಿಕ್ಷಾ ಮ‌ತ್ತು ಟ್ಯಾಕ್ಸಿಗಳಲ್ಲಿ ಮನೆ ಸೇರಿದರೆ, ಹಲವರು ಬೈಕ್‌ಗಳಿಗೆ ಕೈ ಒಡ್ಡಿ ಮನೆ ಸೇರಲು ಪ್ರಯತ್ನಿಸಿದರು. ಇನ್ನೂ ಹಲವರು ನಡೆದುಕೊಂಡೇ ಮನೆ ಸೇರಿದರು.

498 ಸಿಬ್ಬಂದಿ ಅಮಾನತು: ಈ ನಡುವೆ, ಸೋಮವಾರ 274 ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದ ಬಿಎಂಟಿಸಿ, ಬುಧವಾರ 224 ನೌಕರರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಸರ್ಕಾರ ಮುಷ್ಕರ ನಿಷೇಧಿಸಿದ್ದು, ಕಾನೂನುಬಾಹಿರವಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಏ.15ರೊಳಗೆ ಲಿಖಿತ ಸಮಜಾಯಿಷಿ ನೀಡದಿದ್ದರೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT