‘ಜನಮಾನಸವನ್ನು ಅರ್ಥ ಮಾಡಿಕೊಳ್ಳದೆ ಹೋದರೆ ನಮ್ಮ ಯಾವ ವಿಚಾರವೂ ಜನರನ್ನು ತಲುಪಿ, ಅವರನ್ನು ಬದಲಾಯಿಸುವುದಿಲ್ಲ. ವಿಚಾರವಾದ ಏಕರೂಪಾತ್ಮಕವಾದದ್ದಲ್ಲ. ಒಬ್ಬಬ್ಬರು ಒಂದೊಂದು ವಿಷಯದಲ್ಲಿ ವೈಚಾರಿಕ ಪ್ರಜ್ಞೆ ಹೊಂದಿರುತ್ತಾರೆ. ಈ ವೈರುಧ್ಯದ ನಡುವೆ ನಾವು ಜೀವಿಸುತ್ತೇವೆ. ಜಡ ಸಂಪ್ರದಾಯ, ಅಮಾನವೀಯ ಸಂಪ್ರದಾಯಗಳಿಗೆ ವಿರುದ್ಧವಾದದ್ದೇ ನಿಜವಾದ ವೈಚಾರಿಕತೆಯೆಂದು ಭಾವಿಸಿಕೊಳ್ಳಬೇಕಾಗಿದೆ. ವೈಚಾರಿಕತೆ ಅಂಹಕಾರವಾಗದೆ, ವಿನಯದಿಂದ ಕೂಡಿರಬೇಕು’ ಎಂದರು.