‘ಸ್ಥಳಕ್ಕೆ ಭೇಟಿಯೇ ಕೊಡದ ಅರಣ್ಯಾಧಿಕಾರಿಯೊಬ್ಬರು, ಆ ಚಿರತೆಗೆ ಎರಡೇ ಹಲ್ಲುಗಳಿದ್ದವು, ಒಂದು ಕಣ್ಣು ಕಾಣುತ್ತಿರಲಿಲ್ಲ. ಹಾಗಾಗಿ, ಸಂಜಯ್ ಗುಬ್ಬಿ ಪ್ರಾಣಾಪಾಯದಿಂದ ಬಚಾವ್ ಆದರು ಎಂದುಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದರು. ಆದರೆ, ನನ್ನ ಹಿಂಭಾಗದಲ್ಲಿ ಚಿರತೆಯ ನಾಲ್ಕು ಹಲ್ಲಿನ ಗುರುತುಗಳಿದ್ದವು. ಪತ್ರಿಕೆಯವರಿಗೆ ಕರೆದು ತೋರಿಸಬೇಕಾದ ಸ್ಥಳವೂ ಅದಾಗಿರಲಿಲ್ಲ. ಹೀಗಾಗಿ ನಕ್ಕು ಸುಮ್ಮನಾಗಬೇಕಾಯಿತು’ ಎಂದು ಗುಬ್ಬಿ ನೆನಪಿಸಿಕೊಂಡರು.