<p><strong>ಬೆಂಗಳೂರು:</strong> 'ಕೊರೊನಾ ಇರುವುದರಿಂದ ಈ ವರ್ಷದಲ್ಲಿ ಬೆಂಗಳೂರು ನಗರ ಸಾರಿಗೆ ಕ್ಷೇತ್ರದಲ್ಲಿ ನಡೆಯಬೇಕಿದ್ದ ಅಭಿವೃದ್ಧಿ ಯೋಜನೆಗಳು ನಿಧಾನವಾಗಿ ಸಾಗಿವೆ. ಇದರಿಂದ ನಗರದಲ್ಲಿ ಕೊನೆ ಮೈಲಿ ಸಾರಿಗೆ ಸಂಪರ್ಕದ ಯಶಸ್ವಿ ಕೊಂಚ ವಿಳಂಬವಾಗಿದೆ' ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ತಿಳಿಸಿದರು.</p>.<p>ಬಿ-ಪ್ಯಾಕ್ ಸಂಸ್ಥೆಯು 'ಬಸ್ಗಳನ್ನು ಉತ್ತಮವಾಗಿ ಬಳಸಿಕೊಳ್ಳುವುದು' ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಆನ್ಲೈನ್ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>'ಕೊರೊನಾ ಸಂದರ್ಭದಲ್ಲೂ ಬಿಎಂಟಿಸಿ ಬಸ್ಗಳನ್ನು ಪ್ರಾಥಮಿಕ ಸಾರಿಗೆಯನ್ನಾಗಿ ಪ್ರಯಾಣಿಕರು ಸ್ವೀಕರಿಸಿದ್ದಾರೆ. ಆದರೆ, ಪ್ರಯಾಣಿಕರ ಕೊರತೆಯಿಂದ ಬಸ್ಗಳ ನಿರ್ವಹಣೆ ಕಷ್ಟವಾಗಿದೆ. ಪ್ರಸ್ತುತ ಸಂಸ್ಥೆಯ ಸಿಬ್ಬಂದಿಗೆ ಸರ್ಕಾರವೇ ವೇತನ ನೀಡುತ್ತಿದ್ದು, ಮುಂದಿನ 2–3 ತಿಂಗಳವರೆಗೆ ಸಂಸ್ಥೆಯ ಪರ ಸರ್ಕಾರ ನಿಲ್ಲಲಿದೆ' ಎಂದರು.</p>.<p>'ಏಕೀಕೃತ ಕಾರ್ಡ್ ಬಳಸುವ ಮೂಲಕ ಮೆಟ್ರೊ ಹಾಗೂ ಬಿಎಂಟಿಸಿ ಸಾರಿಗೆ ಬಳಸುವ ವ್ಯವಸ್ಥೆ ಈಗಾಗಲೇ ಬರಬೇಕಿತ್ತು. ನಗರದ 12 ದಟ್ಟಣೆಯ ಕಾರಿಡಾರ್ ಗಳಲ್ಲಿ ಪ್ರತ್ಯೇಕ ಪಥ ನಿರ್ಮಾಣದ ಗುರಿಯೂ ಕೊರೊನಾದಿಂದ ಕುಂಟುತ್ತಿದೆ‘ ಎಂದರು.</p>.<p>ಬಿ-ಪ್ಯಾಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೇವತಿ ಅಶೋಕ್,' ಸಾರ್ವಜನಿಕ ಸಾರಿಗೆ ಬಳಕೆ ವಿಚಾರದಲ್ಲಿ ಶೇ 80ರಷ್ಟಿರುವ ಮುಂಬೈಗೆ ಹೋಲಿಸಿದರೆ ಬೆಂಗಳೂರು ಕೇವಲ ಶೇ 48ರಷ್ಟು ಸಾಧಿಸಿದೆ. 2030ಕ್ಕೆ ನಗರದ ಸಾರ್ವಜನಿಕರ ಸಾರಿಗೆ ಪ್ರಮಾಣ ಶೇ 80ಕ್ಕೆ ದಾಟುವ ಗುರಿ ಇದೆ' ಎಂದರು.</p>.<p>'ಬಿಎಂಟಿಸಿ ಲಾಭದ ಉದ್ದೇಶವನ್ನು ಬದಿಗಿಟ್ಟು, ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೇವೆ ಒದಗಿಸುವುದಕ್ಕೆ ಆದ್ಯತೆ ನೀಡಬೇಕು' ಎಂದು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯ ಸಹ ಸಂಸ್ಥಾಪಕಿ ಶಾಹೀನ್ ಶಾಸ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> 'ಕೊರೊನಾ ಇರುವುದರಿಂದ ಈ ವರ್ಷದಲ್ಲಿ ಬೆಂಗಳೂರು ನಗರ ಸಾರಿಗೆ ಕ್ಷೇತ್ರದಲ್ಲಿ ನಡೆಯಬೇಕಿದ್ದ ಅಭಿವೃದ್ಧಿ ಯೋಜನೆಗಳು ನಿಧಾನವಾಗಿ ಸಾಗಿವೆ. ಇದರಿಂದ ನಗರದಲ್ಲಿ ಕೊನೆ ಮೈಲಿ ಸಾರಿಗೆ ಸಂಪರ್ಕದ ಯಶಸ್ವಿ ಕೊಂಚ ವಿಳಂಬವಾಗಿದೆ' ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ತಿಳಿಸಿದರು.</p>.<p>ಬಿ-ಪ್ಯಾಕ್ ಸಂಸ್ಥೆಯು 'ಬಸ್ಗಳನ್ನು ಉತ್ತಮವಾಗಿ ಬಳಸಿಕೊಳ್ಳುವುದು' ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಆನ್ಲೈನ್ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>'ಕೊರೊನಾ ಸಂದರ್ಭದಲ್ಲೂ ಬಿಎಂಟಿಸಿ ಬಸ್ಗಳನ್ನು ಪ್ರಾಥಮಿಕ ಸಾರಿಗೆಯನ್ನಾಗಿ ಪ್ರಯಾಣಿಕರು ಸ್ವೀಕರಿಸಿದ್ದಾರೆ. ಆದರೆ, ಪ್ರಯಾಣಿಕರ ಕೊರತೆಯಿಂದ ಬಸ್ಗಳ ನಿರ್ವಹಣೆ ಕಷ್ಟವಾಗಿದೆ. ಪ್ರಸ್ತುತ ಸಂಸ್ಥೆಯ ಸಿಬ್ಬಂದಿಗೆ ಸರ್ಕಾರವೇ ವೇತನ ನೀಡುತ್ತಿದ್ದು, ಮುಂದಿನ 2–3 ತಿಂಗಳವರೆಗೆ ಸಂಸ್ಥೆಯ ಪರ ಸರ್ಕಾರ ನಿಲ್ಲಲಿದೆ' ಎಂದರು.</p>.<p>'ಏಕೀಕೃತ ಕಾರ್ಡ್ ಬಳಸುವ ಮೂಲಕ ಮೆಟ್ರೊ ಹಾಗೂ ಬಿಎಂಟಿಸಿ ಸಾರಿಗೆ ಬಳಸುವ ವ್ಯವಸ್ಥೆ ಈಗಾಗಲೇ ಬರಬೇಕಿತ್ತು. ನಗರದ 12 ದಟ್ಟಣೆಯ ಕಾರಿಡಾರ್ ಗಳಲ್ಲಿ ಪ್ರತ್ಯೇಕ ಪಥ ನಿರ್ಮಾಣದ ಗುರಿಯೂ ಕೊರೊನಾದಿಂದ ಕುಂಟುತ್ತಿದೆ‘ ಎಂದರು.</p>.<p>ಬಿ-ಪ್ಯಾಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೇವತಿ ಅಶೋಕ್,' ಸಾರ್ವಜನಿಕ ಸಾರಿಗೆ ಬಳಕೆ ವಿಚಾರದಲ್ಲಿ ಶೇ 80ರಷ್ಟಿರುವ ಮುಂಬೈಗೆ ಹೋಲಿಸಿದರೆ ಬೆಂಗಳೂರು ಕೇವಲ ಶೇ 48ರಷ್ಟು ಸಾಧಿಸಿದೆ. 2030ಕ್ಕೆ ನಗರದ ಸಾರ್ವಜನಿಕರ ಸಾರಿಗೆ ಪ್ರಮಾಣ ಶೇ 80ಕ್ಕೆ ದಾಟುವ ಗುರಿ ಇದೆ' ಎಂದರು.</p>.<p>'ಬಿಎಂಟಿಸಿ ಲಾಭದ ಉದ್ದೇಶವನ್ನು ಬದಿಗಿಟ್ಟು, ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೇವೆ ಒದಗಿಸುವುದಕ್ಕೆ ಆದ್ಯತೆ ನೀಡಬೇಕು' ಎಂದು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯ ಸಹ ಸಂಸ್ಥಾಪಕಿ ಶಾಹೀನ್ ಶಾಸ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>