ಸಿಪಿಐ (ಎಂ) ಬೆಂಗಳೂರು ಜಿಲ್ಲೆ ಪ್ರಧಾನ ಕಾರ್ಯದರ್ಶಿ ಕೆ.ಎನ್. ಉಮೇಶ್, ‘ಸುಗ್ರೀವಾಜ್ಞೆ ಆಯಿತು, ಮಸೂದೆಗಳನ್ನು ಮಂಡಿಸಿದ್ದೂ ಆಯಿತು, ಕಾನೂನುಗಳು ಕೂಡ ಜಾರಿ ಆಗುತ್ತದೆ ಎಂದು ಸರ್ಕಾರಗಳು ತಿಳಿದು ಕೊಂಡಿರಬಹುದು. ಹೋರಾಟ ನಡೆಸಲಾಗುತ್ತದೆ. ಈ ಮಸೂದೆಗಳಿಗೆ ಅಂಕಿತ ಹಾಕದಂತೆ ರಾಷ್ಟ್ರಪತಿಯವರಿಗೆ ಮನವಿ ಮಾಡಿಕೊಳ್ಳಲಾಗುವುದು’ ಎಂದು ಅವರು ಹೇಳಿದರು.