ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಬೆಂಗಳೂರು: ಘನತ್ಯಾಜ್ಯ ಎಸ್‌ಟಿಎಸ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

Published : 29 ನವೆಂಬರ್ 2024, 0:14 IST
Last Updated : 29 ನವೆಂಬರ್ 2024, 0:14 IST
ಫಾಲೋ ಮಾಡಿ
Comments
ಬಿನ್ನಿಮಿಲ್ ರಸ್ತೆಯಲ್ಲಿರುವ ಘನತ್ಯಾಜ್ಯದ ದ್ವಿತೀಯ ಹಂತದ ವರ್ಗಾವಣೆ ಘಟಕದಲ್ಲಿರುವ ಕಂಟೈನರ್‌ಗಳು (ಕ್ಯಾಪ್ಸೂಲ್‌)

ಬಿನ್ನಿಮಿಲ್ ರಸ್ತೆಯಲ್ಲಿರುವ ಘನತ್ಯಾಜ್ಯದ ದ್ವಿತೀಯ ಹಂತದ ವರ್ಗಾವಣೆ ಘಟಕದಲ್ಲಿರುವ ಕಂಟೈನರ್‌ಗಳು (ಕ್ಯಾಪ್ಸೂಲ್‌)

ಪ್ರಜಾವಾಣಿ ಚಿತ್ರ.

₹12.50 ಕೋಟಿ; ವೆಚ್ಚದಲ್ಲಿ ಎಸ್‌ಟಿಎಸ್‌ ನಿರ್ಮಾಣ
40 ಟನ್‌; ನಿತ್ಯ ತ್ಯಾಜ್ಯ ವಿಂಗಡಣೆ (ಪ್ರತಿ ಗಂಟೆಗೆ 5 ಟನ್‌) 200 ಟನ್‌; ಪ್ರತಿನಿತ್ಯ ತ್ಯಾಜ್ಯ ಸಂಗ್ರಹ 3 ಪಾಳಿಯಲ್ಲಿ; ತ್ಯಾಜ್ಯ ಸಂಗ್ರಹ ವಿಂಡಗಣೆ 18 ಟನ್‌; ಪ್ರತಿ ಕಂಟೈನರ್‌ನಲ್ಲಿ (ಕ್ಯಾಪ್ಸೂಲ್‌) ರವಾನೆಯಾಗುವ ತ್ಯಾಜ್ಯ
33 ಕ್ಯಾಂಪ್ಯಾಕ್ಟರ್‌ ಸ್ಥಗಿತ: ತುಷಾರ್‌ ಗಿರಿನಾಥ್‌
‘ಎಸ್‌ಟಿಎಸ್‌ ಸ್ಥಾಪನೆಯಿಂದಾಗಿ ಒಂಬತ್ತು ವಾರ್ಡ್‌ಗಳಲ್ಲಿ 33 ಕಾಂಪ್ಯಾಕ್ಟರ್‌ಗಳ ಸಂಚಾರ ಸ್ಥಗಿತಗೊಳ್ಳಲಿದೆ. 211 ಆಟೊಗಳು ನೇರವಾಗಿ ಎಸ್‌ಟಿಎಸ್‌ಗೆ ಕಸವನ್ನು ವಿಲೇವಾರಿ ಮಾಡಲಿವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು. ‘ಮನೆಯಿಂದ ಸಂಗ್ರಹಿಸುವ ತ್ಯಾಜ್ಯವನ್ನು ಆಟೊದಲ್ಲಿ ತೆಗೆದುಕೊಂಡು ಹೋಗಿ ಕಾಂಪ್ಯಾಕ್ಟರ್‌ಗಳಿಗೆ ರಸ್ತೆಗಳಲ್ಲಿ ತುಂಬಲಾಗುತ್ತಿತ್ತು. ಇದರಿಂದ ವಾಸನೆ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುತ್ತಿವೆ. ಹೊಸ ವ್ಯವಸ್ಥೆಯಿಂದ ಇದು ನಿಯಂತ್ರಣಕ್ಕೆ ಬರಲಿದೆ. ಆಟೊದಿಂದ ನೇರವಾಗಿ ಎಸ್‌ಟಿಎಸ್‌ಗೆ ತ್ಯಾಜ್ಯ ವಿಲೇವಾರಿಯಾಗುತ್ತದೆ. ಪ್ರತಿ ಆಟೊ ಎಷ್ಟು ಪ್ರಮಾಣದ ತ್ಯಾಜ್ಯ ವಿಲೇವಾರಿ ಮಾಡುತ್ತದೆ ಎಂಬುದನ್ನು ದಾಖಲಿಸಲಾಗುತ್ತದೆ. ಈ ಘಟಕದಿಂದ ನಾಗರಿಕರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ವಾಸನೆಯೂ ಇರುವುದಿಲ್ಲ’ ಎಂದರು. ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಯೊಂದು ವಿಧಾನಸಭೆ ಕ್ಷೇತ್ರದಲ್ಲೂ ಒಂದು ಎಸ್‌ಟಿಎಸ್‌ ನಿರ್ಮಾಣ ಮಾಡಲು ಸೂಚಿಸಿದ್ದಾರೆ. ಅದರಂತೆ ನಗರದಲ್ಲಿ 27 ಎಸ್‌ಟಿಎಸ್‌ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ. ಇದೀಗ ಎರಡು ಆರಂಭವಾಗಿದ್ದು ಇನ್ನೊಂದು ಜನವರಿಯಲ್ಲಿ ಆರಂಭವಾಗಲಿದೆ. ಪ್ರತಿ ಘಟಕಕ್ಕೆ ₹13 ಕೋಟಿ ವೆಚ್ಚ ಮಾಡಲಾಗುತ್ತದೆ’ ಎಂದರು.
ತ್ಯಾಜ್ಯ ವಿಂಗಡಣೆ: ಶೇ 55ರಷ್ಟು ಮಾತ್ರ ಪ್ರಗತಿ
‘ಘನತ್ಯಾಜ್ಯ ನಿರ್ವಹಣಾ ನಿಯಮ-2016ರ ಪ್ರಕಾರ ತ್ಯಾಜ್ಯ ಉತ್ಪಾದಕರು ತ್ಯಾಜ್ಯವನ್ನು ಮೂಲದಲ್ಲಿಯೇ ಬೇರ್ಪಡಿಸಿ ಪಾಲಿಕೆ ವಾಹನಗಳಿಗೆ ನೀಡುವುದು ಕಡ್ಡಾಯವಾಗಿದೆ. ಆದರೆ ಈವರೆಗೆ ತ್ಯಾಜ್ಯ ವಿಂಗಡಣೆಯಲ್ಲಿ ಸರಾಸರಿ ಶೇ 55ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ’ ಎಂದು  ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್‌) ಅಧಿಕಾರಿಗಳು ತಿಳಿಸಿದರು. ‘ಹಸಿ ಒಣ ತ್ಯಾಜ್ಯವನ್ನು ವಿಂಗಡಿಸಿ ನೀಡುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇಷ್ಟಾದರೂ ಶೇ 50ರಿಂದ ಶೇ 85ರಷ್ಟು ಪ್ರಗತಿಯಾಗಿದೆ. ವಿಂಗಡಣೆಯಾಗದ ತ್ಯಾಜ್ಯವನ್ನು ಭೂಭರ್ತಿ ಪ್ರದೇಶಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಇದರಿಂದ ಪರಿಸರದ ಮೇಲೆ ತೀವ್ರ ಪ್ರಮಾಣದ ತೊಂದರೆಯುಂಟಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT