ನಗರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ‘ಟಿ.ಸುನಂದಮ್ಮ ಸಾಹಿತ್ಯ ಸಂಪುಟ-2’ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಬೀಚಿಯವರದು ಹರಿತವಾದ ಹಾಸ್ಯವಾಗಿತ್ತು. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರದು ದೈವಿಕ ಹಾಸ್ಯವಾಗಿತ್ತು. ಅದರೆ, ಸುನಂದಮ್ಮ ಅವರು ರಚಿಸಿದ ಹಾಸ್ಯ ಸಾಹಿತ್ಯ ಘನತೆಯುಳ್ಳದ್ದಾಗಿತ್ತು' ಎಂದರು.