<p><strong>ಬೆಂಗಳೂರು</strong>: ‘ವಿಶ್ವ ಆರ್ಥಿಕತೆಯ ಬಿಕ್ಕಟ್ಟಿನಿಂದಾಗಿ ಪ್ರಪಂಚದಾದ್ಯಂತ ಮಾನವ ಹಕ್ಕುಗಳನ್ನು ನಿರಂತರವಾಗಿ ಉಲ್ಲಂಘನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಭಾರತವೂ ಹೊರತಾಗಿಲ್ಲ’ ಎಂದು ಪ್ರಜಾಪ್ರಭುತ್ವ ಹಕ್ಕುಗಳ ಮತ್ತು ಜಾತ್ಯತೀತತೆಯ ರಕ್ಷಣಾ ಕೇಂದ್ರ ರಾಜ್ಯ ಸಂಚಾಲಕ ಎಂ.ಎನ್. ಶ್ರೀರಾಮ್ ಹೇಳಿದರು.</p>.<p>ಪ್ರಜಾಪ್ರಭುತ್ವ ಹಕ್ಕುಗಳ ಮತ್ತು ಜಾತ್ಯತೀತತೆಯ ರಕ್ಷಣಾ ಕೇಂದ್ರವು (ಸಿಎಫ್ಡಿಆರ್ಎಸ್) ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಹಲವು ದೇಶಗಳಲ್ಲಿ ಯುದ್ಧದ ವಾತಾವರಣ ಈಗಲೂ ಮುಂದುವರಿದಿದೆ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆಯೂ ಆಗುತ್ತಿದೆ. ಸಾಮ್ರಾಜ್ಯಶಾಹಿ ಮನಃಸ್ಥಿತಿ ಹೆಚ್ಚಿದೆ. ಯುದ್ದ ನಿಲ್ಲಿಸಿ ಮಾನವ ಹಕ್ಕುಗಳನ್ನು ರಕ್ಷಿಸುವ ಗಂಭೀರ ಪ್ರಯತ್ನಗಳು ಆಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಭಾರತದಲ್ಲೂ ಜನರ ಹಕ್ಕುಗಳನ್ನು ನಿಗ್ರಹಿಸುವ ಪ್ರಯತ್ನಗಳು ಹಲವು ರೂಪಗಳಲ್ಲಿ ನಡೆದಿವೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮೂಲಕ ಜನರ ಮತದಾನದ ಹಕ್ಕನ್ನು ನಿರಾಕರಿಸುವ ಪ್ರಯತ್ನಗಳು ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದರು.</p>.<p>ವಕೀಲ ಸುರೇಂದ್ರಬಾಬು ಮಾತನಾಡಿ, ‘ನಾಗರಿಕ ಹೋರಾಟಗಳಿಂದ ಮಾತ್ರ ಮಾನವ ಹಕ್ಕುಗಳ ಮರು ಸ್ಥಾಪನೆ ಸಾಧ್ಯ. ಇದನ್ನು ಹಲವು ದೇಶಗಳು ಮಾಡಿ ತೋರಿಸಿವೆ. ಇದು ನಮಗೂ ಮಾದರಿಯಾಗಬೇಕು’ ಎಂದು ತಿಳಿಸಿದರು.</p>.<p>ಕೇಂದ್ರದ ರಾಜ್ಯ ಸಂಘಟಕ ಎನ್.ರವಿ ಮಾತನಾಡಿ, ‘ದಶಕಗಳ ಹಿಂದೆ ಬ್ರಿಟಿಷ್ ವಸಾಹತುಶಾಹಿಗಳೊಂದಿಗೆ ಹೋರಾಟ ನಡೆಸಿ ಪ್ರಜಾಪ್ರಭುತ್ವ ಸ್ಥಾಪಿಸಿಕೊಂಡೆವು. ಈಗ ಪ್ರಜಾಪ್ರಭುತ್ವ ಎನ್ನುವುದು ಶ್ರೀಮಂತರ ಆಳ್ವಿಕೆಯಾಗಿದ್ದು, ಜನಸಾಮಾನ್ಯರು ಬದುಕಲು ಹೆಣಗಾಡುವ ಸನ್ನಿವೇಶವಿದೆ. ನಮ್ಮ ಹೋರಾಟ ಇನ್ನಷ್ಟು ಪ್ರಬಲಗೊಳಿಸುವ ಅನಿವಾರ್ಯ ಎದುರಾಗಿದೆ’ ಎಂದರು.</p>.<p>ರಾಜ್ಯ ಸಂಘಟಕರಾದ ಟಿ.ವಿ.ಎಸ್.ರಾಜು ಮತ್ತು ಸೋಮಶೇಖರ್ ಗೌಡ ಮಾತನಾಡಿದರು. ಕಾನೂನು ಕಾಲೇಜು ವಿದ್ಯಾರ್ಥಿಗಳು ಘೋಷಣೆ ಕೂಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ವಿಶ್ವ ಆರ್ಥಿಕತೆಯ ಬಿಕ್ಕಟ್ಟಿನಿಂದಾಗಿ ಪ್ರಪಂಚದಾದ್ಯಂತ ಮಾನವ ಹಕ್ಕುಗಳನ್ನು ನಿರಂತರವಾಗಿ ಉಲ್ಲಂಘನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಭಾರತವೂ ಹೊರತಾಗಿಲ್ಲ’ ಎಂದು ಪ್ರಜಾಪ್ರಭುತ್ವ ಹಕ್ಕುಗಳ ಮತ್ತು ಜಾತ್ಯತೀತತೆಯ ರಕ್ಷಣಾ ಕೇಂದ್ರ ರಾಜ್ಯ ಸಂಚಾಲಕ ಎಂ.ಎನ್. ಶ್ರೀರಾಮ್ ಹೇಳಿದರು.</p>.<p>ಪ್ರಜಾಪ್ರಭುತ್ವ ಹಕ್ಕುಗಳ ಮತ್ತು ಜಾತ್ಯತೀತತೆಯ ರಕ್ಷಣಾ ಕೇಂದ್ರವು (ಸಿಎಫ್ಡಿಆರ್ಎಸ್) ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಹಲವು ದೇಶಗಳಲ್ಲಿ ಯುದ್ಧದ ವಾತಾವರಣ ಈಗಲೂ ಮುಂದುವರಿದಿದೆ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆಯೂ ಆಗುತ್ತಿದೆ. ಸಾಮ್ರಾಜ್ಯಶಾಹಿ ಮನಃಸ್ಥಿತಿ ಹೆಚ್ಚಿದೆ. ಯುದ್ದ ನಿಲ್ಲಿಸಿ ಮಾನವ ಹಕ್ಕುಗಳನ್ನು ರಕ್ಷಿಸುವ ಗಂಭೀರ ಪ್ರಯತ್ನಗಳು ಆಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಭಾರತದಲ್ಲೂ ಜನರ ಹಕ್ಕುಗಳನ್ನು ನಿಗ್ರಹಿಸುವ ಪ್ರಯತ್ನಗಳು ಹಲವು ರೂಪಗಳಲ್ಲಿ ನಡೆದಿವೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮೂಲಕ ಜನರ ಮತದಾನದ ಹಕ್ಕನ್ನು ನಿರಾಕರಿಸುವ ಪ್ರಯತ್ನಗಳು ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದರು.</p>.<p>ವಕೀಲ ಸುರೇಂದ್ರಬಾಬು ಮಾತನಾಡಿ, ‘ನಾಗರಿಕ ಹೋರಾಟಗಳಿಂದ ಮಾತ್ರ ಮಾನವ ಹಕ್ಕುಗಳ ಮರು ಸ್ಥಾಪನೆ ಸಾಧ್ಯ. ಇದನ್ನು ಹಲವು ದೇಶಗಳು ಮಾಡಿ ತೋರಿಸಿವೆ. ಇದು ನಮಗೂ ಮಾದರಿಯಾಗಬೇಕು’ ಎಂದು ತಿಳಿಸಿದರು.</p>.<p>ಕೇಂದ್ರದ ರಾಜ್ಯ ಸಂಘಟಕ ಎನ್.ರವಿ ಮಾತನಾಡಿ, ‘ದಶಕಗಳ ಹಿಂದೆ ಬ್ರಿಟಿಷ್ ವಸಾಹತುಶಾಹಿಗಳೊಂದಿಗೆ ಹೋರಾಟ ನಡೆಸಿ ಪ್ರಜಾಪ್ರಭುತ್ವ ಸ್ಥಾಪಿಸಿಕೊಂಡೆವು. ಈಗ ಪ್ರಜಾಪ್ರಭುತ್ವ ಎನ್ನುವುದು ಶ್ರೀಮಂತರ ಆಳ್ವಿಕೆಯಾಗಿದ್ದು, ಜನಸಾಮಾನ್ಯರು ಬದುಕಲು ಹೆಣಗಾಡುವ ಸನ್ನಿವೇಶವಿದೆ. ನಮ್ಮ ಹೋರಾಟ ಇನ್ನಷ್ಟು ಪ್ರಬಲಗೊಳಿಸುವ ಅನಿವಾರ್ಯ ಎದುರಾಗಿದೆ’ ಎಂದರು.</p>.<p>ರಾಜ್ಯ ಸಂಘಟಕರಾದ ಟಿ.ವಿ.ಎಸ್.ರಾಜು ಮತ್ತು ಸೋಮಶೇಖರ್ ಗೌಡ ಮಾತನಾಡಿದರು. ಕಾನೂನು ಕಾಲೇಜು ವಿದ್ಯಾರ್ಥಿಗಳು ಘೋಷಣೆ ಕೂಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>