ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕನ ಕೊಲೆ; ಸ್ನೇಹಿತ ಬಂಧನ

Last Updated 9 ಫೆಬ್ರುವರಿ 2020, 11:36 IST
ಅಕ್ಷರ ಗಾತ್ರ

ಬೆಂಗಳೂರು: ಬೈಯಪ್ಪನಹಳ್ಳಿ ರೈಲ್ವೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರವಿತೇಜ್ (17) ಕೊಲೆ ಸಂಬಂಧ, ಆತನ ಸ್ನೇಹಿತ ರಾಕೇಶ್ ಅಲಿಯಾಸ್ ಡ್ಯಾನಿಯನ್ನು (19) ಬಂಧಿಸಲಾಗಿದೆ.

‘ಹಳೇ ಚಂದಾಪುರದ ರಾಕೇಶ್,ಬನಹಳ್ಳಿ ನಿವಾಸಿ ರವಿತೇಜ್‌ನನ್ನು ಮರಸೂರು ರೈಲ್ವೆ ಬ್ರಿಡ್ಜ್‌ ಸಮೀಪ ಕೊಲೆ ಮಾಡಿದ್ದ. ಮೃತದೇಹವನ್ನು ಹಳಿ ಮೇಲೆ ಹಾಕಿ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.

‘9ನೇ ತರಗತಿಗೇ ಶಾಲೆ ಬಿಟ್ಟು ರವಿತೇಜ್ ಮನೆಯಲ್ಲಿದ್ದ. ವಯಸ್ಸಿನಲ್ಲಿ ದೊಡ್ಡವನಾದ ರಾಕೇಶ್‌ ಜೊತೆ ಸ್ನೇಹ ಬೆಳೆಸಿದ್ದ. ಇಬ್ಬರೂ ಸೇರಿ ಮೊಬೈಲ್ ಕಳವು ಮಾಡಿದ್ದರು. ಅದನ್ನು ಮಾರಿ ಬಂದ ಹಣ ಹಂಚಿಕೊಳ್ಳುವ ಸಂಬಂಧ ಇಬ್ಬರ ನಡುವೆ ಗಲಾಟೆ ಆಗಿತ್ತು.’

‘ಜ.30ರಂದು ಸಂಜೆ ಮಾತನಾಡುವ ನೆಪದಲ್ಲಿ ಕರೆ ದೊಯ್ದು ಕೃತ್ಯ ಎಸಗಿದ್ದ. ಜ.31 ರಂದು ಬೆಳಿಗ್ಗೆ ಮೃತದೇಹ ಸಿಕ್ಕಿತ್ತು. ರವಿತೇಜ್‌ ತಂದೆ ಮಂಜುನಾಥ್ ದೂರು ನೀಡಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT