ಬೆಂಗಳೂರು:ನಗರದ ದಯಾನಂದ ಸಾಗರ ವಿಶ್ವವಿದ್ಯಾಲಯವು 'ಕೋವಿಡ್-19ರ ಬಳಿಕ ಉದ್ಯೋಗಾರ್ಹತೆ-ಅನ್ವೇಷಣೆಗೆ ಅವಕಾಶವೇ? ಅಡ್ಡಿಯೇ?' ಕುರಿತು ಆನ್ಲೈನ್ ವಿಚಾರ ಸಂಕಿರಣವನ್ನು ಜು.19ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಂಡಿದೆ.
ಕಾರ್ಯಕ್ರಮವನ್ನು ದಯಾನಂದ ಸಾಗರ ವಿಶ್ವವಿದ್ಯಾಲಯದ ಕುಲಪತಿ ಆರ್.ಜನಾರ್ದನ್ ಹಾಗೂ ಉದ್ಯೋಗ ಕೌಶಲ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ಎಂ.ಎನ್.ಗುರು ವೆಂಕಟೇಶ್ ಉದ್ಘಾಟಿಸಲಿದ್ದಾರೆ.
ನಿಚಿ ಇನ್ ಸಾಫ್ಟ್ವೇರ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ಗಿರಿ, ಬಿಜಿನೆಸ್ ಪಾರ್ಟ್ನರ್ಶಿಪ್ ಬೆಮ್ಕೊ ಫ್ಲೂಡ್ಟೆಕ್ನಿಕ್ನ ಉಪಾಧ್ಯಕ್ಷ ವಾಸುಕಿ, ನಾಗಾರ್ಜುನ ಶ್ರೀನಿವಾಸನ್, ಪ್ಲೆಕ್ಸಿಯಾನ್ ಟೆಕ್ನಾಲಜೀಸ್ನ ಗೋವಿಂದ್ ಮಾತನಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸಕ್ತರುwww.dsu.edu.in ಮೂಲಕ ನೋಂದಣಿಯಾಗಬಹುದು ಎಂದು ಪ್ರಕಟಣೆ ತಿಳಿಸಿದೆ.