<p><strong>ಬೆಂಗಳೂರು:</strong> ‘ಉದ್ಯಮಶೀಲತೆಯಲ್ಲಿ ಡಿಜಿಟಲೀಕರಣದ ಪಾತ್ರ ಮಹತ್ವದ್ದು. ಈ ಕಾಲದ ವ್ಯವಹಾರ ನೀತಿಗೆ ತಕ್ಕಂತೆ ಪರಿವರ್ತನೆಯ ಅಗತ್ಯವಿದೆ' ಎಂದು ಡಬ್ಲ್ಯುಟಿಸಿ ಸಲಹೆಗಾರ ಉಮಾರೆಡ್ಡಿ ಹೇಳಿದರು.</p>.<p>ಪೀಣ್ಯದಾಸರಹಳ್ಳಿ ಸಮೀಪದ ಜಾಲಹಳ್ಳಿಯ ಸೇಂಟ್ ಕ್ಲಾರೆಟ್ ಕಾಲೇಜಿನಲ್ಲಿ ಆಯೋಜಿಸಲಾದ 'ಥಿಂಕಿಂಗ್ ಲೋಕಲ್, ಗೋಯಿಂಗ್ ಗ್ಲೋಬಲ್' ಎಂಬ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>ಪ್ರಾಂಶುಪಾಲ ರೆ.ಫಾ. ಡಾ. ಸಾಬುಜಾರ್ಜರ್ ಮಾತನಾಡಿ, 'ಇಂದಿನ ಜಾಗತೀಕರಣ ಹಾಗೂ ಆಧುನಿಕತೆಯ ಪರಂಪರೆಯು ದೇಸಿಸಂಸ್ಕೃತಿಯಲ್ಲೂ ಸಂಚಲನ ಉಂಟು ಮಾಡಿದೆ. ಆರ್ಥಿಕ ಅಭಿವೃದ್ಧಿಯ ಜತೆಗೆ ತಾಂತ್ರಿಕತೆಯ ಪರಿಣಾಮ ಉದ್ಯಮಶೀಲತೆಯ ಮೇಲೆ ಹೆಚ್ಚು ಗಮನ ಸೆಳೆದಿದೆ' ಎಂದರು.</p>.<p>ಕಾಲೇಜಿನ ವ್ಯವಸ್ಥಾಪಕ ರೆ.ಫಾ. ಬೆನ್ನಿಮ್ಯಾಥ್ಯೂ, 'ದೇಶದ ಉದ್ಯಮಶೀಲತೆ ಮತ್ತು ಡಿಜಿಟಲೀಕರಣದ ವಿಚಾರಗಳ ಬಗ್ಗೆ ಪಂಡಿತರು, ವಿದ್ವಾಂಸರು, ಸಂಶೋಧಕರು ಹಾಗೂ ಅನುಭವಿಗಳು ಚರ್ಚೆ ನಡೆಸುವುದರಿಂದ ಅದರ ಸಾಧಕ ಬಾಧಕಗಳನ್ನು ತಿಳಿಯಬಹುದು' ಎಂದರು.</p>.<p>ಸಂಕಿರಣದಲ್ಲಿ ವಿವಿಧ ರಾಜ್ಯ ಹಾಗೂ ವಿಶ್ವವಿದ್ಯಾಲಯಗಳ 200ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಉದ್ಯಮಶೀಲತೆಯಲ್ಲಿ ಡಿಜಿಟಲೀಕರಣದ ಪಾತ್ರ ಮಹತ್ವದ್ದು. ಈ ಕಾಲದ ವ್ಯವಹಾರ ನೀತಿಗೆ ತಕ್ಕಂತೆ ಪರಿವರ್ತನೆಯ ಅಗತ್ಯವಿದೆ' ಎಂದು ಡಬ್ಲ್ಯುಟಿಸಿ ಸಲಹೆಗಾರ ಉಮಾರೆಡ್ಡಿ ಹೇಳಿದರು.</p>.<p>ಪೀಣ್ಯದಾಸರಹಳ್ಳಿ ಸಮೀಪದ ಜಾಲಹಳ್ಳಿಯ ಸೇಂಟ್ ಕ್ಲಾರೆಟ್ ಕಾಲೇಜಿನಲ್ಲಿ ಆಯೋಜಿಸಲಾದ 'ಥಿಂಕಿಂಗ್ ಲೋಕಲ್, ಗೋಯಿಂಗ್ ಗ್ಲೋಬಲ್' ಎಂಬ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>ಪ್ರಾಂಶುಪಾಲ ರೆ.ಫಾ. ಡಾ. ಸಾಬುಜಾರ್ಜರ್ ಮಾತನಾಡಿ, 'ಇಂದಿನ ಜಾಗತೀಕರಣ ಹಾಗೂ ಆಧುನಿಕತೆಯ ಪರಂಪರೆಯು ದೇಸಿಸಂಸ್ಕೃತಿಯಲ್ಲೂ ಸಂಚಲನ ಉಂಟು ಮಾಡಿದೆ. ಆರ್ಥಿಕ ಅಭಿವೃದ್ಧಿಯ ಜತೆಗೆ ತಾಂತ್ರಿಕತೆಯ ಪರಿಣಾಮ ಉದ್ಯಮಶೀಲತೆಯ ಮೇಲೆ ಹೆಚ್ಚು ಗಮನ ಸೆಳೆದಿದೆ' ಎಂದರು.</p>.<p>ಕಾಲೇಜಿನ ವ್ಯವಸ್ಥಾಪಕ ರೆ.ಫಾ. ಬೆನ್ನಿಮ್ಯಾಥ್ಯೂ, 'ದೇಶದ ಉದ್ಯಮಶೀಲತೆ ಮತ್ತು ಡಿಜಿಟಲೀಕರಣದ ವಿಚಾರಗಳ ಬಗ್ಗೆ ಪಂಡಿತರು, ವಿದ್ವಾಂಸರು, ಸಂಶೋಧಕರು ಹಾಗೂ ಅನುಭವಿಗಳು ಚರ್ಚೆ ನಡೆಸುವುದರಿಂದ ಅದರ ಸಾಧಕ ಬಾಧಕಗಳನ್ನು ತಿಳಿಯಬಹುದು' ಎಂದರು.</p>.<p>ಸಂಕಿರಣದಲ್ಲಿ ವಿವಿಧ ರಾಜ್ಯ ಹಾಗೂ ವಿಶ್ವವಿದ್ಯಾಲಯಗಳ 200ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>