'ಪವಿತ್ರ ರಂಜಾನ್ ಮತ್ತು ಬಸವ ಜಯಂತಿ ಒಟ್ಟೊಟ್ಟಿಗೆ ಆಗಮಿಸಿ ಧಾರ್ಮಿಕ ಸೌಹಾರ್ದತೆಯ ಸಂದೇಶವನ್ನು ಸಾರಿವೆ. ನೊಂದವರ, ಬೆಂದವರ ಧ್ವನಿಯಾಗಿ ಕಂಡುಬರುವ ಬಸವಣ್ಣನ ಕಾಯಕ ತತ್ತ್ವ ಅಹಂಕಾರವನ್ನು ಅಳಿದು ಹಾಕುವ ಕ್ರಮಗಳಲ್ಲಿ ಒಂದು. ಅಲ್ಲದೇ, ಅದು ವ್ಯಕ್ತಿಗೆ ಮತ್ತು ವ್ಯಕ್ತಿತ್ವಕ್ಕೆ ಘನತೆ ತಂದುಕೊಡುತ್ತದೆ. ಕನ್ನಡ ಸಾಂಸ್ಕೃತಿಕ ರಾಯಭಾರಿಯಂತೆ ಕಂಡುಬರುವ ಬಸವಣ್ಣ ಹೇಳಿದಂತೆ, ' ಇವನಾರವ ಇವನಾರವ ' ಎನ್ನುವ ವಚನ ಇಂದಿನ ಕಾಲಮಾನದ ತುರ್ತು.