ಬೆಂಗಳೂರು: ಗಾಂಧಿನಗರ ವಿಧಾನಸಭೆ ಕ್ಷೇತ್ರದ ಶೇಷಾದ್ರಿಪುರದಲ್ಲಿರುವ ರಾಜೀವ್ ಗಾಂಧಿ ಪ್ರತಿಮೆ ಬಳಿಯಿಂದ 'ಏಕತಾ ಸೈಕಲ್ ಜಾಥಾ'ಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೋಮವಾರ ಬೆಳಿಗ್ಗೆ ಚಾಲನೆ ನೀಡಿದರು.
ಇದೇ 20ರಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನ. ಅದರ ಅಂಗವಾಗಿ ಕೆಪಿಸಿಸಿ ವಕ್ತಾರೆ ಕವಿತಾ ರೆಡ್ಡಿ ಅವರ ನೇತೃತ್ವದಲ್ಲಿ ಹೊರಟ ಏಕತಾ ಸೈಕಲ್ ಜಾಥಾವು 300 ಕಿ.ಮೀ. ಕ್ರಮಿಸಿ, ರಾಜೀವ್ ಗಾಂಧಿ ಸ್ಮಾರಕವಿರುವ ತಮಿಳುನಾಡಿನ ಶ್ರೀ ಪೆರಂಬದೂರನ್ನು ಆಗಸ್ಟ್ 20ರಂದು ತಲುಪಲಿದೆ.
ಶಾಸಕ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಮುಖಂಡ ಸಂತೋಷ್ ಲಾಡ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಲಾವಣ್ಯ ಮತ್ತಿತರರು ಇದ್ದರು.