<p><strong>ಬೆಂಗಳೂರು:</strong> ‘ಪರಿಸರ ಮಾಲಿನ್ಯಕ್ಕೆ ನಾವು ಸರ್ಕಾರಗಳನ್ನು ಮತ್ತು ಕೈಗಾರಿಕೆಗಳನ್ನು ದೂಷಿಸುತ್ತೇವೆ. ಆದರೆ, ಪರೋಕ್ಷವಾಗಿ ನಾವು ಆ ಎಲ್ಲ ಕೈಗಾರಿಕೆಗಳು ಉತ್ಪಾದಿಸುವ ಉತ್ಪನ್ನಗಳ ಗ್ರಾಹಕರು ನಾವೇ ಆಗಿರುತ್ತೇವೆ. ಪರಿಸರದ ಮೇಲಿನ ಹಾನಿಗೆ ನಾವೆಲ್ಲರೂ ಕಾರಣ’ ಎಂದು ನಟ ಪ್ರಕಾಶ್ ಬೆಳವಾಡಿ ಹೇಳಿದರು.</p>.<p>ರೋಟರಿ ಕ್ಲಬ್ ಮತ್ತು ಕ್ರಾನಿಕ್ ಫೌಂಡೇಷನ್ನ ಪ್ರೈಡ್ ಎನರ್ಜಿ ಎನ್ವಿರಾನ್ಮೆಂಟ್ ರಿಸೋರ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ವತಿಯಿಂದ ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವೆಬಿನಾರ್ನಲ್ಲಿ ಮಾತನಾಡಿದರು.</p>.<p>ರೋಟರಿ ಕ್ಲಬ್ನ ರಮೇಶ್ ಶಿವಣ್ಣ, ’ಪರಿಸರ ವ್ಯವಸ್ಥೆಯ ಪುನರ್ ಸ್ಥಾಪನೆ ಎಂಬುದು ಈ ಬಾರಿಯ ಪರಿಸರದ ದಿನದ ಘೋಷವಾಕ್ಯ. ನಾವು ಕೂಡ ಪರಿಸರ ಸ್ನೇಹಿ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಅಭಿವೃದ್ಧಿ ಹೆಸರಿನಲ್ಲಿ ಪರಿಸರದ ಮೇಲಾಗುತ್ತಿರುವ ಹಾನಿಯನ್ನು ಆದಷ್ಟು ತಪ್ಪಿಸಬೇಕು. ಆರ್ಥಿಕ ಚಟುವಟಿಕೆಯೂ ಪರಿಸರ ಸಂರಕ್ಷಣೆಗೆ ಪೂರಕವಾಗಿರಬೇಕು’ ಎಂದರು.</p>.<p>ರೋಟರಿ ಕ್ಲಬ್ನ ಶೇಖರ್ ಮೆಹ್ತಾ, ’ರೋಟರಿ ಕ್ಲಬ್ ವತಿಯಿಂದ ಈ ವರ್ಷದಲ್ಲಿ ದೇಶದಾದ್ಯಂತ ಒಂದು ಕೋಟಿ ಸಸಿ ನೆಡುವ ಗುರಿ ಹೊಂದಿದ್ದೇವೆ. ಐದು ವರ್ಷಗಳಲ್ಲಿ ಐದು ಸಾವಿರ ಹಳ್ಳಿಗಳಲ್ಲಿ ಘನ ತ್ಯಾಜ್ಯ ನಿರ್ವಹಣಾ ಯೋಜನೆಯನ್ನು ಅನುಷ್ಠಾನಗೊಳಿಸುವ ಉದ್ದೇಶವಿದೆ’ ಎಂದರು.</p>.<p>ರಾಜ್ಯಸರ್ಕಾರದ ಕೆಆರ್ಇಡಿಎಲ್, ರೋಟರಿ ಗ್ರೀನ್ ಪಾರ್ಕ್ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಪರಿಸರ ಮಾಲಿನ್ಯಕ್ಕೆ ನಾವು ಸರ್ಕಾರಗಳನ್ನು ಮತ್ತು ಕೈಗಾರಿಕೆಗಳನ್ನು ದೂಷಿಸುತ್ತೇವೆ. ಆದರೆ, ಪರೋಕ್ಷವಾಗಿ ನಾವು ಆ ಎಲ್ಲ ಕೈಗಾರಿಕೆಗಳು ಉತ್ಪಾದಿಸುವ ಉತ್ಪನ್ನಗಳ ಗ್ರಾಹಕರು ನಾವೇ ಆಗಿರುತ್ತೇವೆ. ಪರಿಸರದ ಮೇಲಿನ ಹಾನಿಗೆ ನಾವೆಲ್ಲರೂ ಕಾರಣ’ ಎಂದು ನಟ ಪ್ರಕಾಶ್ ಬೆಳವಾಡಿ ಹೇಳಿದರು.</p>.<p>ರೋಟರಿ ಕ್ಲಬ್ ಮತ್ತು ಕ್ರಾನಿಕ್ ಫೌಂಡೇಷನ್ನ ಪ್ರೈಡ್ ಎನರ್ಜಿ ಎನ್ವಿರಾನ್ಮೆಂಟ್ ರಿಸೋರ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ವತಿಯಿಂದ ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವೆಬಿನಾರ್ನಲ್ಲಿ ಮಾತನಾಡಿದರು.</p>.<p>ರೋಟರಿ ಕ್ಲಬ್ನ ರಮೇಶ್ ಶಿವಣ್ಣ, ’ಪರಿಸರ ವ್ಯವಸ್ಥೆಯ ಪುನರ್ ಸ್ಥಾಪನೆ ಎಂಬುದು ಈ ಬಾರಿಯ ಪರಿಸರದ ದಿನದ ಘೋಷವಾಕ್ಯ. ನಾವು ಕೂಡ ಪರಿಸರ ಸ್ನೇಹಿ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಅಭಿವೃದ್ಧಿ ಹೆಸರಿನಲ್ಲಿ ಪರಿಸರದ ಮೇಲಾಗುತ್ತಿರುವ ಹಾನಿಯನ್ನು ಆದಷ್ಟು ತಪ್ಪಿಸಬೇಕು. ಆರ್ಥಿಕ ಚಟುವಟಿಕೆಯೂ ಪರಿಸರ ಸಂರಕ್ಷಣೆಗೆ ಪೂರಕವಾಗಿರಬೇಕು’ ಎಂದರು.</p>.<p>ರೋಟರಿ ಕ್ಲಬ್ನ ಶೇಖರ್ ಮೆಹ್ತಾ, ’ರೋಟರಿ ಕ್ಲಬ್ ವತಿಯಿಂದ ಈ ವರ್ಷದಲ್ಲಿ ದೇಶದಾದ್ಯಂತ ಒಂದು ಕೋಟಿ ಸಸಿ ನೆಡುವ ಗುರಿ ಹೊಂದಿದ್ದೇವೆ. ಐದು ವರ್ಷಗಳಲ್ಲಿ ಐದು ಸಾವಿರ ಹಳ್ಳಿಗಳಲ್ಲಿ ಘನ ತ್ಯಾಜ್ಯ ನಿರ್ವಹಣಾ ಯೋಜನೆಯನ್ನು ಅನುಷ್ಠಾನಗೊಳಿಸುವ ಉದ್ದೇಶವಿದೆ’ ಎಂದರು.</p>.<p>ರಾಜ್ಯಸರ್ಕಾರದ ಕೆಆರ್ಇಡಿಎಲ್, ರೋಟರಿ ಗ್ರೀನ್ ಪಾರ್ಕ್ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>