‘ಗುತ್ತಿಗೆ ಕೆಲಸ ಪಡೆಯಲು ₹ 15 ಲಕ್ಷ ಕೊಟ್ಟಿದ್ದೆ’
‘ಕೆಲಸವೊಂದರ ಗುತ್ತಿಗೆ ಪಡೆಯುವ ವಿಚಾರಕ್ಕಾಗಿ ಗೋಪಾಲಯ್ಯಗೆ ₹ 15 ಲಕ್ಷ ಕೊಟ್ಟಿದ್ದೆ. ಆತ ನನಗೆ ಗುತ್ತಿಗೆ ಕೊಡಿಸಲಿಲ್ಲ. ಹಣ ವಾಪಸು ನೀಡುವಂತೆ ಕೇಳಲು ಕರೆ ಮಾಡಿ ಮಾತನಾಡಿದ್ದೆ’ ಎಂದು ಪದ್ಮರಾಜ್ ಹೇಳಿದರು. ನ್ಯಾಯಾಲಯದಲ್ಲಿ ಜಾಮೀನು ಸಿಕ್ಕ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಗೋಪಾಲಯ್ಯಗೆ ಜೀವ ಬೆದರಿಕೆ ಹಾಕಿದ್ದೇನೆ ಎಂಬುದು ಸತ್ಯಕ್ಕೆ ದೂರುವಾದ ಮಾತು. ಕೊಲೆ ಬೆದರಿಕೆ ಹಾಕುವ ವ್ಯಕ್ತಿ ನಾನಲ್ಲ. ಅವರಿಗೆ ದೇವರು ಅವರಿಗೆ ಒಳ್ಳೆದು ಮಾಡಲಿ’ ಎಂದರು. ‘2010ರಲ್ಲಿ ನನ್ನನ್ನು ಮೇಯರ್ ಮಾಡುವುದಾಗಿ ಹೇಳಿದ್ದ ಬಿಜೆಪಿ ಮುಖಂಡ ಆರ್.ಅಶೋಕ ₹ 1 ಕೋಟಿ ಪಡೆದಿದ್ದರು. ಇವತ್ತಿಗೂ ನನ್ನನ್ನು ಮೇಯರ್ ಮಾಡಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಆ ಹಣ ವಾಪಸ್ ತೆಗೆದುಕೊಂಡೆ’ ಎಂದೂ ಅವರು ಹೇಳಿದರು.