ಬೆಂಗಳೂರು: ಬಾಲ್ಯದಿಂದಲೇ ಕಳ್ಳತನವನ್ನು ವೃತ್ತಿ ಮಾಡಿಕೊಂಡು ಹಲವೆಡೆ ಕೃತ್ಯ ಎಸಗುತ್ತಿದ್ದ ಆರೋಪದಡಿ ಪ್ರಕಾಶ್ (54) ಎಂಬುವವರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
‘ಸ್ಥಳೀಯ ನಿವಾಸಿ ಪ್ರಕಾಶ್, 1978ರಿಂದಲೇ ಕಳ್ಳತನ ಕೃತ್ಯ ಎಸಗಲಾರಂಭಿಸಿದ್ದ. 20 ಬಾರಿ ಪೊಲೀಸರಿಗೆ ಸಿಕ್ಕಿಬಿದ್ದು, ಜೈಲಿಗೂ ಹೋಗಿ ಜಾಮೀನಿನ ಮೇಲೆ ಹೊರಬಂದಿದೆ. ಇತ್ತೀಚೆಗೆ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ಪ್ರಕಾಶ್ನನ್ನು ಮತ್ತೊಮ್ಮೆ ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಬೆಂಗಳೂರು, ಬಳ್ಳಾರಿ, ಶಿವಮೊಗ್ಗ ಸೇರಿ ಹಲವು ನಗರಗಳಲ್ಲಿ 150 ಕಡೆ ಆರೋಪಿ ಕಳ್ಳತನ ಮಾಡಿದ್ದ. ಈತನ ಕುಟುಂಬದವರೂ ಕಳ್ಳತನಕ್ಕೆ ಸಹಕಾರ ನೀಡುತ್ತಿದ್ದರು’ ಎಂದೂ ತಿಳಿಸಿದರು.