‘ಬೀದಿ, ರಸ್ತೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಕ್ಕೆ ಪೊಲೀಸರು ತಕರಾರು ಮಾಡಿದ್ದಾರೆ. ಅನುಮತಿ ಪಡೆಯಲು ಬಿಬಿಎಂಪಿ ಕಚೇರಿಗೆ ಹೋದರೆ, ರಜೆ ಇತ್ತು. ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೆ, ನಾವು ಈಗಾಗಲೇ ಆದೇಶ ಮಾಡಿಯಾಗಿದೆ. ಬೀದಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಬಹುದು ಎಂದು ಉತ್ತರಿಸಿದರು. ಆದರೂ ಪೊಲೀಸರು ಕಿರಿಕಿರಿಯನ್ನುಂಟು ಮಾಡಿದ್ದಾರೆ’ ಎಂದು ಕೆಲವು ಸಂಘಟಕರು ಆರೋಪಿಸಿದರು.