<p><strong>ಬೆಂಗಳೂರು</strong>: ‘ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿದ್ದು, ಪತ್ರಿಕೋದ್ಯಮ ಶಿಕ್ಷಣ ನೀಡುವ ಸಂಸ್ಥೆಗಳಲ್ಲಿ ಕಗ್ಗಂಟಿನ ವಾತಾವರಣ ಇದೆ’ ಎಂದು ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್ ಕಳವಳ ವ್ಯಕ್ತಪಡಿಸಿದರು.</p>.<p>ನಗರದಲ್ಲಿ ಶನಿವಾರ ಫ್ಲೇರ್ ಮೀಡಿಯಾ, ಭಾರತೀಯ ವಿದ್ಯಾಭವನ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ನಡೆದ ‘ಮಾಧ್ಯಮದಲ್ಲಿ ಭಾಷಾ ಕೌಶಲ’ ಕಾರ್ಯಾಗಾರದಲ್ಲಿ ಮಾತನಾಡಿದರು.</p>.<p>‘ಇಂದಿನ ವಾತಾವರಣದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಏನು ಹಾಗೂ ಯಾವ ವಿಷಯ ಕಲಿಸಬೇಕೆಂಬ ಗೊಂದಲದಲ್ಲಿ ಸಂಸ್ಥೆಗಳಿವೆ. ಮಾಧ್ಯಮ ಕ್ಷೇತ್ರದವರು ಈ ಗೊಂದಲ ಪರಿಹರಿಸಬೇಕು’ ಎಂದು ಅವರು ಕೋರಿದರು.</p>.<p>‘ಸುದ್ದಿವಾಹಿನಿಗಳ ವೀಕ್ಷಣೆ ಬಿಟ್ಟರೆ ಆರೋಗ್ಯ ವೃದ್ಧಿಸಲಿದೆ ಎಂಬ ವಾತಾ ವರಣ ಈಗಿನದ್ದು. ದೃಶ್ಯ ಮಾಧ್ಯಮದಲ್ಲಿ ಕನ್ನಡ ಬಳಕೆ ಆಗುತ್ತಿದೆಯೇ ಎಂಬ ಸಂದೇಹವಿದೆ. ಟಿ.ವಿಗಳ ಭಾಷೆ ಬದಲಾಗಿದೆ. ಇದು ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿ, ‘ಭಾಷೆಯೊಂದು ನಶಿಸಿದರೆ ಆ ಜನಾಂಗದ ಪರಂಪರೆ, ಇತಿಹಾಸವು ಕಣ್ಮರೆ ಆಗಲಿದೆ. ಮುಂದಿನ ಪೀಳಿಗೆಗೂ ಶುದ್ಧವಾದ ಭಾಷೆ ಉಳಿಸಿ ಹಸ್ತಾಂತರಿಸುವುದು ನಮ್ಮೆಲ್ಲರ ಕರ್ತವ್ಯ. ಭಾಷಾ ಕೌಶಲವನ್ನು ವಿದ್ಯಾರ್ಥಿಗಳೇ ಕರಗತ ಮಾಡಿಕೊಳ್ಳಬೇಕು. ಯಾರೂ ಕಲಿಸುವುದಲ್ಲ’ ಎಂದರು.</p>.<p>‘ರಾಜಕಾರಣಿಗಳ ಹೆಸರಿಗೆ ದೃಶ್ಯ ಮಾಧ್ಯಮಗಳು ಕತ್ತರಿ ಹಾಕಿ ಬಳಸುತ್ತಿವೆ. ಈ ರೀತಿ ಬಳಸಲು ಮಾಧ್ಯಮಕ್ಕೆ ಅಧಿಕಾರ ಇಲ್ಲ. ತಮಿಳುನಾಡಿನಲ್ಲಿ ಈ ರೀತಿ ಕತ್ತರಿ ಪ್ರಯೋಗಿಸಿದರೆ ಕ್ರಮವಾಗಲಿದೆ’ ಎಂದು ಅವರು ಹೇಳಿದರು.</p>.<p>‘ಮಾಧ್ಯಮ ಅಕಾಡೆಮಿಯು 40ರ ಸಂಭ್ರಮದಲ್ಲಿದೆ. ಕನ್ನಡ ಮಾಧ್ಯಮ ಕ್ಷೇತ್ರಕ್ಕೆ ಗಟ್ಟಿ ನೆಲೆ ಕಲ್ಪಿಸಿದ ಹಿರಿಯರ ಕುರಿತು ಕೃತಿ ಹೊರತರಲಾಗುತ್ತಿದೆ’ ಎಂದರು.</p>.<p>ಭಾರತೀಯ ವಿದ್ಯಾಭವನದ ಪತ್ರಿ ಕೋದ್ಯಮ ವಿಭಾಗದ ಮುಖ್ಯಸ್ಥ ಎನ್.ಎಸ್. ಶ್ರೀಧರಮೂರ್ತಿ, ‘ಕೌಶಲಾಭಿವೃದ್ಧಿ ಮಂಡಳಿಯು ಭಾಷೆಯನ್ನು ಕೌಶಲ ವೆಂದು ಪರಿಗಣಿಸಿಲ್ಲ. ಕೌಶಲವೆಂದು ಪರಿಗಣಿಸಿದರೆ ವೃತ್ತಿಪರತೆ ಆಯಾಮ ಸಿಗಲಿದೆ. ವೃತ್ತಿಪರ ಆಯಾಮ ನೀಡುವ ಉದ್ದೇಶದಿಂದ 5 ಸ್ಥಳಗಳಲ್ಲಿ ಕಾರ್ಯಾಗಾರ ನಡೆಸಲಾಗುವುದು’ ಎಂದು ಹೇಳಿದರು.</p>.<p>‘ಭವಿಷ್ಯದಲ್ಲಿ ಶುದ್ಧ ಭಾಷೆ ಉಳಿಯಬೇಕಿದ್ದರೆ ಮಾಧ್ಯಮಗಳ ಪಾತ್ರ ಬಹಳ ಮುಖ್ಯ’ ಎಂದು ಅವರು ನುಡಿದರು.</p>.<p>‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಸಾಹಿತ್ಯದ ಓದು, ಭಾಷಾ ಕೌಶಲ ಹಾಗೂ ಭಾಷೆಯ ಬಳಕೆ ಕುರಿತು ಉಪನ್ಯಾಸ ನೀಡಿದರು.</p>.<p>ಫ್ಲೇರ್ ಮೀಡಿಯಾದ ನಿರ್ದೇಶಕಿ ಎಸ್.ಲಲಿತಾ ಚಲಂ ಹಾಜರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿದ್ದು, ಪತ್ರಿಕೋದ್ಯಮ ಶಿಕ್ಷಣ ನೀಡುವ ಸಂಸ್ಥೆಗಳಲ್ಲಿ ಕಗ್ಗಂಟಿನ ವಾತಾವರಣ ಇದೆ’ ಎಂದು ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್ ಕಳವಳ ವ್ಯಕ್ತಪಡಿಸಿದರು.</p>.<p>ನಗರದಲ್ಲಿ ಶನಿವಾರ ಫ್ಲೇರ್ ಮೀಡಿಯಾ, ಭಾರತೀಯ ವಿದ್ಯಾಭವನ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ನಡೆದ ‘ಮಾಧ್ಯಮದಲ್ಲಿ ಭಾಷಾ ಕೌಶಲ’ ಕಾರ್ಯಾಗಾರದಲ್ಲಿ ಮಾತನಾಡಿದರು.</p>.<p>‘ಇಂದಿನ ವಾತಾವರಣದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಏನು ಹಾಗೂ ಯಾವ ವಿಷಯ ಕಲಿಸಬೇಕೆಂಬ ಗೊಂದಲದಲ್ಲಿ ಸಂಸ್ಥೆಗಳಿವೆ. ಮಾಧ್ಯಮ ಕ್ಷೇತ್ರದವರು ಈ ಗೊಂದಲ ಪರಿಹರಿಸಬೇಕು’ ಎಂದು ಅವರು ಕೋರಿದರು.</p>.<p>‘ಸುದ್ದಿವಾಹಿನಿಗಳ ವೀಕ್ಷಣೆ ಬಿಟ್ಟರೆ ಆರೋಗ್ಯ ವೃದ್ಧಿಸಲಿದೆ ಎಂಬ ವಾತಾ ವರಣ ಈಗಿನದ್ದು. ದೃಶ್ಯ ಮಾಧ್ಯಮದಲ್ಲಿ ಕನ್ನಡ ಬಳಕೆ ಆಗುತ್ತಿದೆಯೇ ಎಂಬ ಸಂದೇಹವಿದೆ. ಟಿ.ವಿಗಳ ಭಾಷೆ ಬದಲಾಗಿದೆ. ಇದು ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿ, ‘ಭಾಷೆಯೊಂದು ನಶಿಸಿದರೆ ಆ ಜನಾಂಗದ ಪರಂಪರೆ, ಇತಿಹಾಸವು ಕಣ್ಮರೆ ಆಗಲಿದೆ. ಮುಂದಿನ ಪೀಳಿಗೆಗೂ ಶುದ್ಧವಾದ ಭಾಷೆ ಉಳಿಸಿ ಹಸ್ತಾಂತರಿಸುವುದು ನಮ್ಮೆಲ್ಲರ ಕರ್ತವ್ಯ. ಭಾಷಾ ಕೌಶಲವನ್ನು ವಿದ್ಯಾರ್ಥಿಗಳೇ ಕರಗತ ಮಾಡಿಕೊಳ್ಳಬೇಕು. ಯಾರೂ ಕಲಿಸುವುದಲ್ಲ’ ಎಂದರು.</p>.<p>‘ರಾಜಕಾರಣಿಗಳ ಹೆಸರಿಗೆ ದೃಶ್ಯ ಮಾಧ್ಯಮಗಳು ಕತ್ತರಿ ಹಾಕಿ ಬಳಸುತ್ತಿವೆ. ಈ ರೀತಿ ಬಳಸಲು ಮಾಧ್ಯಮಕ್ಕೆ ಅಧಿಕಾರ ಇಲ್ಲ. ತಮಿಳುನಾಡಿನಲ್ಲಿ ಈ ರೀತಿ ಕತ್ತರಿ ಪ್ರಯೋಗಿಸಿದರೆ ಕ್ರಮವಾಗಲಿದೆ’ ಎಂದು ಅವರು ಹೇಳಿದರು.</p>.<p>‘ಮಾಧ್ಯಮ ಅಕಾಡೆಮಿಯು 40ರ ಸಂಭ್ರಮದಲ್ಲಿದೆ. ಕನ್ನಡ ಮಾಧ್ಯಮ ಕ್ಷೇತ್ರಕ್ಕೆ ಗಟ್ಟಿ ನೆಲೆ ಕಲ್ಪಿಸಿದ ಹಿರಿಯರ ಕುರಿತು ಕೃತಿ ಹೊರತರಲಾಗುತ್ತಿದೆ’ ಎಂದರು.</p>.<p>ಭಾರತೀಯ ವಿದ್ಯಾಭವನದ ಪತ್ರಿ ಕೋದ್ಯಮ ವಿಭಾಗದ ಮುಖ್ಯಸ್ಥ ಎನ್.ಎಸ್. ಶ್ರೀಧರಮೂರ್ತಿ, ‘ಕೌಶಲಾಭಿವೃದ್ಧಿ ಮಂಡಳಿಯು ಭಾಷೆಯನ್ನು ಕೌಶಲ ವೆಂದು ಪರಿಗಣಿಸಿಲ್ಲ. ಕೌಶಲವೆಂದು ಪರಿಗಣಿಸಿದರೆ ವೃತ್ತಿಪರತೆ ಆಯಾಮ ಸಿಗಲಿದೆ. ವೃತ್ತಿಪರ ಆಯಾಮ ನೀಡುವ ಉದ್ದೇಶದಿಂದ 5 ಸ್ಥಳಗಳಲ್ಲಿ ಕಾರ್ಯಾಗಾರ ನಡೆಸಲಾಗುವುದು’ ಎಂದು ಹೇಳಿದರು.</p>.<p>‘ಭವಿಷ್ಯದಲ್ಲಿ ಶುದ್ಧ ಭಾಷೆ ಉಳಿಯಬೇಕಿದ್ದರೆ ಮಾಧ್ಯಮಗಳ ಪಾತ್ರ ಬಹಳ ಮುಖ್ಯ’ ಎಂದು ಅವರು ನುಡಿದರು.</p>.<p>‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಸಾಹಿತ್ಯದ ಓದು, ಭಾಷಾ ಕೌಶಲ ಹಾಗೂ ಭಾಷೆಯ ಬಳಕೆ ಕುರಿತು ಉಪನ್ಯಾಸ ನೀಡಿದರು.</p>.<p>ಫ್ಲೇರ್ ಮೀಡಿಯಾದ ನಿರ್ದೇಶಕಿ ಎಸ್.ಲಲಿತಾ ಚಲಂ ಹಾಜರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>