ಬೆಂಗಳೂರು: ‘ಬೂತ್ ಮಟ್ಟದ ತಂಡಗಳು ಪ್ರತಿ 10 ದಿನಗಳಿಗೊಮ್ಮೆ ಮನೆ ಮನೆ ಸರ್ವೆ ನಡೆಸಬೇಕು.ಕೆಮ್ಮು, ಶೀತ ಜ್ವರದ ಲಕ್ಷಣ ಇದ್ದವರನ್ನು, ತೀವ್ರ ಉಸಿರಾಟದ ತೊಂದರೆ ಹೊಂದಿರುವವನ್ನು, ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತಿತರ ಆರೋಗ್ಯ ಸಮಸ್ಯೆ ಹೊಂದಿದವರನ್ನು ಗುರುತಿಸಬೇಕು’ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.