<p><strong>ಬೆಂಗಳೂರು:</strong> ‘ಬೂತ್ ಮಟ್ಟದ ತಂಡಗಳು ಪ್ರತಿ 10 ದಿನಗಳಿಗೊಮ್ಮೆ ಮನೆ ಮನೆ ಸರ್ವೆ ನಡೆಸಬೇಕು.ಕೆಮ್ಮು, ಶೀತ ಜ್ವರದ ಲಕ್ಷಣ ಇದ್ದವರನ್ನು, ತೀವ್ರ ಉಸಿರಾಟದ ತೊಂದರೆ ಹೊಂದಿರುವವನ್ನು, ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತಿತರ ಆರೋಗ್ಯ ಸಮಸ್ಯೆ ಹೊಂದಿದವರನ್ನು ಗುರುತಿಸಬೇಕು’ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.</p>.<p>‘ರೋಗ ಉಲ್ಬಣಿಸಿದ ನಂತರ ಚಿಕಿತ್ಸೆ ಫಲಿಸದಿರುವ ಸಾಧ್ಯತೆ ಹೆಚ್ಚು.ತಡವಾಗಿ ಪರೀಕ್ಷೆ ನಡೆಸಿದರೆ ರೋಗ ಉಲ್ಬಣಿಸುವ ಸಾಧ್ಯತೆ ಅಧಿಕ. ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಪರೀಕ್ಷೆ ನಡೆಸಿದರೆ ಈ ಕಾಯಿಲೆಯನ್ನು ನಿಯಂತ್ರಿಸಬಹುದು. ಕೋವಿಡ್ ಸೋಂಕಿನಿಂದ ಹೆಚ್ಚು ಅಪಾಯ ಎದುರಿಸುವವರನ್ನು ಗುರುತಿಸುವುದಕ್ಕೆ ಹಾಗೂ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಅವರನ್ನು ಉಳಿಸಿಕೊಳ್ಳುವುದಕ್ಕೆ ಸರ್ವೆ ನೆರವಾಗುತ್ತದೆ’ ಎಂದರು.</p>.<p>‘ವಾರದ ಹಿಂದಿನವರೆಗೂ ಬಿಬಿಎಂಪಿಯಿಂದ ನಿತ್ಯ ಸರಾಸರಿ 3 ಸಾವಿರ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿತ್ತು. ಈ ಪ್ರಮಾಣವನ್ನು ಈಗ 6 ಸಾವಿರಕ್ಕೆ ಹೆಚ್ಚಿಸಿದ್ದೇವೆ. ಇದಲ್ಲದೇ ಖಾಸಗಿ ಪ್ರಯೋಗಾಲಯಗಳಲ್ಲಿ ನಿತ್ಯ ಸುಮಾರು 4 ಸಾವಿರ ಮಂದಿಯ ಗಂಟಲ ದ್ರವ ಪರೀಕ್ಷೆ ನಡೆಯುತ್ತಿದೆ. ಕಳೆದ ವಾರ ಒಟ್ಟು 27,468 ಮಂದಿಯನ್ನು ಕ್ಷಿಪ್ರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ 2,586 ಮಂದಿಯನ್ನು ಸೋಂಕು ಪತ್ತೆಯಾಗಿದೆ. 5,419 ಮಂದಿಯ ಗಂಟಲ ದ್ರವ ಸಂಗ್ರಹಕ್ಕೆ ವಿಜ್ಞಾನ ಪದವೀಧರರನ್ನು ಹಾಗೂ ಪೌರರಕ್ಷಣಾ ತಂಡಗಳ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗುತ್ತದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಬೂತ್ ಮಟ್ಟದ ತಂಡಗಳು ಪ್ರತಿ 10 ದಿನಗಳಿಗೊಮ್ಮೆ ಮನೆ ಮನೆ ಸರ್ವೆ ನಡೆಸಬೇಕು.ಕೆಮ್ಮು, ಶೀತ ಜ್ವರದ ಲಕ್ಷಣ ಇದ್ದವರನ್ನು, ತೀವ್ರ ಉಸಿರಾಟದ ತೊಂದರೆ ಹೊಂದಿರುವವನ್ನು, ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತಿತರ ಆರೋಗ್ಯ ಸಮಸ್ಯೆ ಹೊಂದಿದವರನ್ನು ಗುರುತಿಸಬೇಕು’ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.</p>.<p>‘ರೋಗ ಉಲ್ಬಣಿಸಿದ ನಂತರ ಚಿಕಿತ್ಸೆ ಫಲಿಸದಿರುವ ಸಾಧ್ಯತೆ ಹೆಚ್ಚು.ತಡವಾಗಿ ಪರೀಕ್ಷೆ ನಡೆಸಿದರೆ ರೋಗ ಉಲ್ಬಣಿಸುವ ಸಾಧ್ಯತೆ ಅಧಿಕ. ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಪರೀಕ್ಷೆ ನಡೆಸಿದರೆ ಈ ಕಾಯಿಲೆಯನ್ನು ನಿಯಂತ್ರಿಸಬಹುದು. ಕೋವಿಡ್ ಸೋಂಕಿನಿಂದ ಹೆಚ್ಚು ಅಪಾಯ ಎದುರಿಸುವವರನ್ನು ಗುರುತಿಸುವುದಕ್ಕೆ ಹಾಗೂ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಅವರನ್ನು ಉಳಿಸಿಕೊಳ್ಳುವುದಕ್ಕೆ ಸರ್ವೆ ನೆರವಾಗುತ್ತದೆ’ ಎಂದರು.</p>.<p>‘ವಾರದ ಹಿಂದಿನವರೆಗೂ ಬಿಬಿಎಂಪಿಯಿಂದ ನಿತ್ಯ ಸರಾಸರಿ 3 ಸಾವಿರ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿತ್ತು. ಈ ಪ್ರಮಾಣವನ್ನು ಈಗ 6 ಸಾವಿರಕ್ಕೆ ಹೆಚ್ಚಿಸಿದ್ದೇವೆ. ಇದಲ್ಲದೇ ಖಾಸಗಿ ಪ್ರಯೋಗಾಲಯಗಳಲ್ಲಿ ನಿತ್ಯ ಸುಮಾರು 4 ಸಾವಿರ ಮಂದಿಯ ಗಂಟಲ ದ್ರವ ಪರೀಕ್ಷೆ ನಡೆಯುತ್ತಿದೆ. ಕಳೆದ ವಾರ ಒಟ್ಟು 27,468 ಮಂದಿಯನ್ನು ಕ್ಷಿಪ್ರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ 2,586 ಮಂದಿಯನ್ನು ಸೋಂಕು ಪತ್ತೆಯಾಗಿದೆ. 5,419 ಮಂದಿಯ ಗಂಟಲ ದ್ರವ ಸಂಗ್ರಹಕ್ಕೆ ವಿಜ್ಞಾನ ಪದವೀಧರರನ್ನು ಹಾಗೂ ಪೌರರಕ್ಷಣಾ ತಂಡಗಳ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗುತ್ತದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>