ಖರೀದಿಗೂ ಮುನ್ನ ದಾಖಲೆಗಳನ್ನು ಪರಿಶೀಲಿಸಬೇಕು. ಲೇಔಟ್ನ ನಿಜವಾದ ಮಾಲೀಕರು ಯಾರು ಎಂಬುದನ್ನು ಪತ್ತೆಹಚ್ಚಬೇಕು. ಆ ನಂತರವೇ ನಿವೇಶನ ಖರೀದಿಸಿದರೆ ಮೋಸ ಆಗುವುದಿಲ್ಲ
– ಬಿ.ದಯಾನಂದ ನಗರ ಪೊಲೀಸ್ ಕಮಿಷನರ್
ಆಕರ್ಷಕ ಜಾಹೀರಾತು
ಸಕಲ ಸೌಲಭ್ಯಗಳಿರುವ ಲೇಔಟ್ನಲ್ಲಿ ಕಡಿಮೆ ಬೆಲೆಗೆ ನಿವೇಶನ ನೀಡಲಾಗುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಕ ಜಾಹೀರಾತು ನೀಡಲಾಗುತ್ತದೆ. ಲೇಔಟ್ ಪಕ್ಕದಲ್ಲೇ ಆಸ್ಪತ್ರೆ ಹೆದ್ದಾರಿ ಶಾಲೆಗಳು ಇವೆ. ಕುಡಿಯುವ ನೀರು ಹಾಗೂ ಯುಜಿಡಿ ಸಂಪರ್ಕವಿದೆ ಎಂದು ಆಮಿಷವೊಡ್ಡಲಾಗುತ್ತದೆ. ಇದನ್ನೇ ನಂಬಿ ಹಲವರು ಯಾವುದೇ ದಾಖಲೆಗಳನ್ನು ಪರಿಶೀಲಿಸದೇ ನಿವೇಶನಕ್ಕೆ ಖರೀದಿಗೆ ಮುಂದಾಗಿ ಮೋಸ ಹೋಗುತ್ತಿದ್ದಾರೆ ಎಂದು ಪೊಲೀಸರು ಹೇಳಿದರು.
ಇಬ್ಬರ ವಿರುದ್ಧ ಎಫ್ಐಆರ್
ವಂಚನೆ ಪ್ರಕರಣದ ಸಂಬಂಧ ಅಶೋಕನಗರದ ಭೋವಿ ಲೇನ್ನ ಚಂದ್ರಾವತಿ ಅವರು ನೀಡಿದ ದೂರು ಆಧರಿಸಿ ಸಾಲಿಸಿಟರ್ ಗ್ರೂಪ್ನ ಮಾಲೀಕರು ಎಂದು ಹೇಳಿಕೊಂಡಿರುವ ಆರ್.ಮಹೇಶ್ಕುಮಾರ್ ಹಾಗೂ ಚೈತ್ರಾ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.