<p><strong>ನೆಲಮಂಗಲ</strong>: ರಾಜ್ಯದಾದ್ಯಂತ ವಿವಿಧ ನಾಟಕ ಮಂಡಳಿಗಳನ್ನು ಒಗ್ಗೂಡಿಸಿ, 13 ದಿನಗಳ ನಿರಂತರ ನಾಟಕೋತ್ಸವ ಜ್ಞಾನಭಾರತಿ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದೆ.</p>.<p>‘ಒಂದು ನಾಟಕ ಪ್ರದರ್ಶನಕ್ಕೆ ಲಕ್ಷಾಂತರ ರೂಪಾಯಿ ವ್ಯಯವಾಗುತ್ತದೆ, ಅಂತಹದ್ದರಲ್ಲಿ ನಿರಂತರ 13 ನಾಟಕಗಳ ಪ್ರದರ್ಶನ ಸಾಹಸವೇ ಸರಿ’ ಎಂದು ಶಿವಗಂಗೆ ಮೇಲಣಗವಿ ಮಠದ ಮಲಯ ಶಾಂತಮುನಿ ದೇಶೀಕೇಂದ್ರ ಶ್ರೀಗಳು ಶ್ಲಾಘಿಸಿದರು.</p>.<p>ಪಟ್ಟಣದ ಕೆಇಬಿ ಎದುರು ಜ್ಞಾನಭಾರತಿ ಚಾರಿಟಬಲ್ ಟ್ರಸ್ಟ್ ನಿರ್ಮಿಸಿರುವ ಬಯಲು ‘ರಂಗಸಜ್ಜಿಕೆ‘ ವೇದಿಕೆಯಲ್ಲಿ 12ನೇ ದಿನದ ‘ಶ್ರೀಕೃಷ್ಣ ಸಂಧಾನ’ ನಾಟಕಕ್ಕೆ ಅವರು ಚಾಲನೆ ನೀಡಿದರು.</p>.<p>ಕರ್ನಾಟಕ ಸಾಂಸ್ಕೃತಿಕ ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ವೀರೇಶ್ ಪ್ರಸಾದ್ ಮಾತನಾಡಿ, ‘ಕಲಾವಿದರಿಗೆ ಜೀವನ ಭದ್ರತೆ ಇಲ್ಲ. ಸರ್ಕಾರದ ವಿವಿಧ ಯೋಜನೆಗಳಲ್ಲಿ ಕಲಾವಿದರಿಗೂ ಮೀಸಲಾತಿ ಕಲ್ಪಿಸಲು ಹೋರಾಟದ ಅಗತ್ಯ ಇದೆ’ ಎಂದರು.</p>.<p>ಜ್ಞಾನಭಾರತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಆರ್.ರಂಗನಾಥ್ ಸಂಪಾದಕತ್ವದ "ಹಂಸೆ" ಹಾಗು ಜಿ.ಆರ್.ಕೃಷ್ಣಮೂರ್ತಿ ಸಂಪಾದಕತ್ವದ "ವಿಬಿ" ಟಿವಿ ವಾಹಿನಿಗಳಿಗೆ ಚಾಲನೆ ನೀಡಲಾಯಿತು. ರಾಷ್ಟ್ರೀಯ ಕಿಸಾನ್ ಸಂಘಟನೆ ರಾಜ್ಯ ಉಪಾಧ್ಯಕ್ಷ ಭೀಮಯ್ಯ, ಡಿಜಿಟಲ್ ವಾರ್ತೆ ಸಂಪಾದಕ ಡಿ.ಆರ್.ಅಭಿಷೇಕ್, ಆ ದಿನಗಳು ಪತ್ರಿಕೆ ಭಾನುಪ್ರಕಾಶ್ ಉಪಸ್ಥಿತರಿದ್ದರು. ಲೇಖಕರಾದ ಮಾಧುರಿ ದೇಶಪಾಂಡೆ, ರೇಣುಕಾ ಪ್ರಸಾದ್, ಕಲಾವಿದ ಕೃಷ್ಣಪ್ಪ, ರೈತ ಬಸವರಾಜು, ಉಪನ್ಯಾಸಕ ಗಂಗರಾಜು ಅವರನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೆಲಮಂಗಲ</strong>: ರಾಜ್ಯದಾದ್ಯಂತ ವಿವಿಧ ನಾಟಕ ಮಂಡಳಿಗಳನ್ನು ಒಗ್ಗೂಡಿಸಿ, 13 ದಿನಗಳ ನಿರಂತರ ನಾಟಕೋತ್ಸವ ಜ್ಞಾನಭಾರತಿ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದೆ.</p>.<p>‘ಒಂದು ನಾಟಕ ಪ್ರದರ್ಶನಕ್ಕೆ ಲಕ್ಷಾಂತರ ರೂಪಾಯಿ ವ್ಯಯವಾಗುತ್ತದೆ, ಅಂತಹದ್ದರಲ್ಲಿ ನಿರಂತರ 13 ನಾಟಕಗಳ ಪ್ರದರ್ಶನ ಸಾಹಸವೇ ಸರಿ’ ಎಂದು ಶಿವಗಂಗೆ ಮೇಲಣಗವಿ ಮಠದ ಮಲಯ ಶಾಂತಮುನಿ ದೇಶೀಕೇಂದ್ರ ಶ್ರೀಗಳು ಶ್ಲಾಘಿಸಿದರು.</p>.<p>ಪಟ್ಟಣದ ಕೆಇಬಿ ಎದುರು ಜ್ಞಾನಭಾರತಿ ಚಾರಿಟಬಲ್ ಟ್ರಸ್ಟ್ ನಿರ್ಮಿಸಿರುವ ಬಯಲು ‘ರಂಗಸಜ್ಜಿಕೆ‘ ವೇದಿಕೆಯಲ್ಲಿ 12ನೇ ದಿನದ ‘ಶ್ರೀಕೃಷ್ಣ ಸಂಧಾನ’ ನಾಟಕಕ್ಕೆ ಅವರು ಚಾಲನೆ ನೀಡಿದರು.</p>.<p>ಕರ್ನಾಟಕ ಸಾಂಸ್ಕೃತಿಕ ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ವೀರೇಶ್ ಪ್ರಸಾದ್ ಮಾತನಾಡಿ, ‘ಕಲಾವಿದರಿಗೆ ಜೀವನ ಭದ್ರತೆ ಇಲ್ಲ. ಸರ್ಕಾರದ ವಿವಿಧ ಯೋಜನೆಗಳಲ್ಲಿ ಕಲಾವಿದರಿಗೂ ಮೀಸಲಾತಿ ಕಲ್ಪಿಸಲು ಹೋರಾಟದ ಅಗತ್ಯ ಇದೆ’ ಎಂದರು.</p>.<p>ಜ್ಞಾನಭಾರತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಆರ್.ರಂಗನಾಥ್ ಸಂಪಾದಕತ್ವದ "ಹಂಸೆ" ಹಾಗು ಜಿ.ಆರ್.ಕೃಷ್ಣಮೂರ್ತಿ ಸಂಪಾದಕತ್ವದ "ವಿಬಿ" ಟಿವಿ ವಾಹಿನಿಗಳಿಗೆ ಚಾಲನೆ ನೀಡಲಾಯಿತು. ರಾಷ್ಟ್ರೀಯ ಕಿಸಾನ್ ಸಂಘಟನೆ ರಾಜ್ಯ ಉಪಾಧ್ಯಕ್ಷ ಭೀಮಯ್ಯ, ಡಿಜಿಟಲ್ ವಾರ್ತೆ ಸಂಪಾದಕ ಡಿ.ಆರ್.ಅಭಿಷೇಕ್, ಆ ದಿನಗಳು ಪತ್ರಿಕೆ ಭಾನುಪ್ರಕಾಶ್ ಉಪಸ್ಥಿತರಿದ್ದರು. ಲೇಖಕರಾದ ಮಾಧುರಿ ದೇಶಪಾಂಡೆ, ರೇಣುಕಾ ಪ್ರಸಾದ್, ಕಲಾವಿದ ಕೃಷ್ಣಪ್ಪ, ರೈತ ಬಸವರಾಜು, ಉಪನ್ಯಾಸಕ ಗಂಗರಾಜು ಅವರನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>