<p><strong>ಬೆಂಗಳೂರು:</strong> ‘ಕಲಾವಿದರಿಗೆ ಭಾಷಾ ಮರ್ಯಾದೆ ಮುಖ್ಯವಾಗಿದ್ದು, ಭಾಷೆ, ಬರವಣಿಗೆ, ಉಚ್ಚಾರವನ್ನು ಕಲಿತು ಮುನ್ನಡೆಯಬೇಕು’ ಎಂದು ಗಾಯಕಿ ಎಚ್.ಆರ್. ಲೀಲಾವತಿ ಅಭಿಮತ ವ್ಯಕ್ತಪಡಿಸಿದರು. </p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದರು. </p>.<p>‘ಕಲಾವಿದರು ಹೆಚ್ಚು ಪರಿಶ್ರಮ ವಹಿಸಿ ಸಾಧನೆ ಮಾಡಬೇಕು. ನಾನು ಬಂಗಾಳಿ, ಅಸ್ಸಾಮಿ ಹಾಡುಗಳನ್ನು ಆಕಾಶವಾಣಿ ಕೇಂದ್ರಗಳಲ್ಲಿ ಹಾಡುವಾಗ, ಆ ಹಾಡುಗಳ ಬರವಣಿಗೆಗೂ, ಉಚ್ಚಾರಕ್ಕೂ ವ್ಯತ್ಯಾಸ ಇರುವುದನ್ನು ಅರಿತು, ಮನದಟ್ಟು ಮಾಡಿಕೊಂಡು ಹಾಡಿದೆ. ಪ್ರತಿಯೊಂದು ಸಂಗೀತ ಪ್ರಕಾರಕ್ಕೂ ತನ್ನತನ ಇರುತ್ತದೆ. ಕಲಾವಿದರಿಗೆ ನಂದೇ ಸರಿ ಎಂಬ ಅಹಂ ಇರಬಾರದು’ ಎಂದರು. </p>.<p>‘ಇತ್ತೀಚೆಗೆ ಸಂಗೀತಗಾರರು ಕೇವಲ ನಾಲ್ಕು ಹಾಡುಗಳಿಗೆ ತಮ್ಮ ಸಂಗೀತ ಕಛೇರಿ ಮುಗಿಸುವುದನ್ನೂ ಕಾಣುತ್ತಿದ್ದೇವೆ. ಇದಕ್ಕೆ ಕಲಾವಿದರಲ್ಲಿ ಪರಿಶ್ರಮ ಇಲ್ಲದಿರುವುದೇ ಕಾರಣ’ ಎಂದು ಹೇಳಿದರು.</p>.<p>‘ಭಾವಗೀತೆಯಂತಹ ಹಾಡುಗಳಿಗೆ ಈಗ ವಿಪರೀತ ವಾದ್ಯಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಕವಿ ಸಾಯುತ್ತಾನೆ. ಸಾಹಿತ್ಯ ಅರ್ಥವಾಗದೆ ಕೇವಲ ವಾದ್ಯಗಳನ್ನು ಕೇಳಿಸಿಕೊಳ್ಳುವಂತಾಗಿದೆ. ಇನ್ನು ಕೆಲವೆಡೆ ಪ್ರದರ್ಶನಗಳಲ್ಲಿ ನೃತ್ಯವನ್ನೂ ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯತ್ರಿ ಉಪಸ್ಥಿತರಿದ್ದರು.</p>.<div><blockquote>‘ಆಕಾಶವಾಣಿ ಹಲವು ಕಲಾವಿದರಿಗೆ ಜೀವನ ನೀಡಿದೆ. ಆದರೆ ಆಕಾಶವಾಣಿಯು ಪ್ರಸಾರಭಾರತಿಯಾಗಿ ಬದಲಾದ ಬಳಿಕ ಶೋಚನೀಯ ಸ್ಥಿತಿಯಲ್ಲಿದೆ. ಉದ್ಯೋಗಿಗಳ ನೇಮಕವೂ ಸರಿಯಾಗಿ ಆಗುತ್ತಿಲ್ಲ</blockquote><span class="attribution">ಎಚ್.ಆರ್. ಲೀಲಾವತಿ ಗಾಯಕಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಕಲಾವಿದರಿಗೆ ಭಾಷಾ ಮರ್ಯಾದೆ ಮುಖ್ಯವಾಗಿದ್ದು, ಭಾಷೆ, ಬರವಣಿಗೆ, ಉಚ್ಚಾರವನ್ನು ಕಲಿತು ಮುನ್ನಡೆಯಬೇಕು’ ಎಂದು ಗಾಯಕಿ ಎಚ್.ಆರ್. ಲೀಲಾವತಿ ಅಭಿಮತ ವ್ಯಕ್ತಪಡಿಸಿದರು. </p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದರು. </p>.<p>‘ಕಲಾವಿದರು ಹೆಚ್ಚು ಪರಿಶ್ರಮ ವಹಿಸಿ ಸಾಧನೆ ಮಾಡಬೇಕು. ನಾನು ಬಂಗಾಳಿ, ಅಸ್ಸಾಮಿ ಹಾಡುಗಳನ್ನು ಆಕಾಶವಾಣಿ ಕೇಂದ್ರಗಳಲ್ಲಿ ಹಾಡುವಾಗ, ಆ ಹಾಡುಗಳ ಬರವಣಿಗೆಗೂ, ಉಚ್ಚಾರಕ್ಕೂ ವ್ಯತ್ಯಾಸ ಇರುವುದನ್ನು ಅರಿತು, ಮನದಟ್ಟು ಮಾಡಿಕೊಂಡು ಹಾಡಿದೆ. ಪ್ರತಿಯೊಂದು ಸಂಗೀತ ಪ್ರಕಾರಕ್ಕೂ ತನ್ನತನ ಇರುತ್ತದೆ. ಕಲಾವಿದರಿಗೆ ನಂದೇ ಸರಿ ಎಂಬ ಅಹಂ ಇರಬಾರದು’ ಎಂದರು. </p>.<p>‘ಇತ್ತೀಚೆಗೆ ಸಂಗೀತಗಾರರು ಕೇವಲ ನಾಲ್ಕು ಹಾಡುಗಳಿಗೆ ತಮ್ಮ ಸಂಗೀತ ಕಛೇರಿ ಮುಗಿಸುವುದನ್ನೂ ಕಾಣುತ್ತಿದ್ದೇವೆ. ಇದಕ್ಕೆ ಕಲಾವಿದರಲ್ಲಿ ಪರಿಶ್ರಮ ಇಲ್ಲದಿರುವುದೇ ಕಾರಣ’ ಎಂದು ಹೇಳಿದರು.</p>.<p>‘ಭಾವಗೀತೆಯಂತಹ ಹಾಡುಗಳಿಗೆ ಈಗ ವಿಪರೀತ ವಾದ್ಯಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಕವಿ ಸಾಯುತ್ತಾನೆ. ಸಾಹಿತ್ಯ ಅರ್ಥವಾಗದೆ ಕೇವಲ ವಾದ್ಯಗಳನ್ನು ಕೇಳಿಸಿಕೊಳ್ಳುವಂತಾಗಿದೆ. ಇನ್ನು ಕೆಲವೆಡೆ ಪ್ರದರ್ಶನಗಳಲ್ಲಿ ನೃತ್ಯವನ್ನೂ ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯತ್ರಿ ಉಪಸ್ಥಿತರಿದ್ದರು.</p>.<div><blockquote>‘ಆಕಾಶವಾಣಿ ಹಲವು ಕಲಾವಿದರಿಗೆ ಜೀವನ ನೀಡಿದೆ. ಆದರೆ ಆಕಾಶವಾಣಿಯು ಪ್ರಸಾರಭಾರತಿಯಾಗಿ ಬದಲಾದ ಬಳಿಕ ಶೋಚನೀಯ ಸ್ಥಿತಿಯಲ್ಲಿದೆ. ಉದ್ಯೋಗಿಗಳ ನೇಮಕವೂ ಸರಿಯಾಗಿ ಆಗುತ್ತಿಲ್ಲ</blockquote><span class="attribution">ಎಚ್.ಆರ್. ಲೀಲಾವತಿ ಗಾಯಕಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>